ಕಂಪೆನಿಯ ರಾಯಭಾರಿ ಮಾಡುವುದಾಗಿ ಹೇಳಿ ನಟಿ ಪ್ರಣೀತಾ ಹೆಸರಿನಲ್ಲಿ 13.5 ಲಕ್ಷ ರೂ. ವಂಚನೆ
Team Udayavani, Oct 12, 2020, 9:18 PM IST
ಬೆಂಗಳೂರು: ಇಬ್ಬರು ವಂಚಕರು ನಟಿ ಪ್ರಣೀತಾ ಅವರನ್ನು ಕಂಪೆನಿಯ ರಾಯಭಾರಿ ಮಾಡುವುದಾಗಿ ಎಸ್.ವಿ.ಗ್ರೂಪ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವ್ಯವಸ್ಥಾಪಕರಿಗೆ 13.5 ಲಕ್ಷ ರೂ. ವಂಚಿಸಿರುವ ಘಟನೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಕಂಪನಿಯ ವ್ಯವಸ್ಥಾಪಕ ಕೆ.ಅಮರನಾಥ್ ರೆಡ್ಡಿ ಎಂಬವರು ಚೆನ್ನೈ ಮೂಲದ ಮೊಹಮ್ಮದ್ ಜುನಾಯತ್ ಮತ್ತು ವರ್ಷಾ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಮರನಾಥ್ ಎಂಬವರು ಕಂಪನಿಯ ರಾಯಭಾರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ಸ್ನೇಹಿತ ಪ್ರಶಾಂತ್ ಮೂಲಕ ಮೊಹಮ್ಮದ್ ಜುನಾಯತ್ ಪರಿಚಯವಾಗಿದ್ದಾನೆ. ಆ ಬಳಿಕ ಆರೋಪಿ, ನಟಿ ಪ್ರಣೀತಾ ಅವರನ್ನು ರಾಯಭಾರಿಯಾಗಿ ಮಾಡುವುದಾಗಿ ನಂಬಿಸಿದ್ದಾನೆ. ಅಲ್ಲದೆ, ನಟಿಯ ಮ್ಯಾನೆಜರ್ ಅನ್ನು ಹೋಟೆಲ್ಗೆ ಕರೆಸಿ ಒಪ್ಪಂದ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಅದಕ್ಕಾಗಿ ಆರೋಪಿ ಚೆನ್ನೈನಿಂದ ಬರಲು ವಿಮಾನ ಟಿಕೆಟ್ ಅನ್ನು ಸಹ ಅಮರನಾಥ್ ಕಾಯ್ದಿರಿಸಿದ್ದರು.
ಇದನ್ನೂ ಓದಿ:ಎರಡು ಖಾಸಗಿ ಸುದ್ದಿ ವಾಹಿನಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್
ಅ.6ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅರಮನೆ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ವೊಂದಕ್ಕೆ ಆರೋಪಿಗಳು ಬಂದಿದ್ದು, ಮೊಹಮ್ಮದ್ ಜುನಾಯತ್, ವರ್ಷಾ ಅವರನ್ನು ಪ್ರಣೀತಾ ಅವರ ಮ್ಯಾನೆಜರ್ಎಂದು ಪರಿಚಯಿಸಿದ್ದಾನೆ. ಬಳಿಕ ವರ್ಷಾ, ಪ್ರಣೀತಾ ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಜುನಾಯತ್ಗೆ ಹಣ ಕಳುಹಿಸಿದರೆ ಕೇವಲ 20 ನಿಮಿಷದಲ್ಲಿಯೇ ಒಪ್ಪಂದದ ಕರಾರು ಪತ್ರ ಸಿದ್ದಪಡಿಸುವುದಾಗಿ ನಂಬಿಸಿದ್ದಾಳೆ.
ಅದನ್ನು ನಂಬಿದ ಅಮರನಾಥ್ 13.5 ಲಕ್ಷ ರೂ. ಅನ್ನು ಆರೋಪಿಗೆ ನೀಡಿದ್ದಾರೆ. ಹಣ ಪಡೆಯುತ್ತಿದ್ದಂತೆ ಹೋಟೆಲ್ನ ಕೊಠಡಿಗೆ ಹೋಗಿದ್ದಾರೆ. ಒಂದು ಗಂಟೆ ಕಳೆದರೂ ವಾಪಸ್ ಬಂದಿಲ್ಲ. ನಂತರ ಕೊಠಡಿಗೆ ಹೋಗಿ ನೋಡಿದಾಗ ಮೊಹಮ್ಮದ್ ಜುನಾಯತ್ ಹಾಗೂ ವರ್ಷಾ ಇರಲಿಲ್ಲ. ಆರೋಪಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಹಣ ಪಡೆದು ಪರಾರಿಯಾಗಿರುವುದು ಗೊತ್ತಾಗಿದೆ.
ತಕ್ಷಣವೇ ಅಮರನಾಥ್, ಸ್ನೇಹಿತ ಪ್ರಶಾಂತ್ಗೆ ಕರೆ ಮಾಡಿ ಮೊಹಮ್ಮದ್ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಪ್ರಶಾಂತ್ ಮೊಹಮ್ಮದ್ ತಂದೆಗೆ ಫೋನ್ ಮಾಡಿ ವಿಚಾರಿಸಿದಾಗ ಮೊಹಮ್ಮದ್ ಜುನಾಯತ್ ಬಳಿಯೇ ಹಣವಿದೆ. ನಮ್ಮ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಮೊಹಮ್ಮದ್ ತಂದೆ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಅಮರನಾಥ್, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಒಂದೆರಡು ದಿನಗಳಲ್ಲಿ ಬಂಧಿಸುವುದಾಗಿ ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ