ಕಂದಾಹಾರ್ ಜನಪ್ರಿಯ ಹಾಸ್ಯ ನಟನ ಬರ್ಬರ ಹತ್ಯೆ: ತಾಲಿಬಾನ್ ವಿರುದ್ಧ ಆಕ್ರೋಶ
ಹಾಸ್ಯ ನಟ ಮೊಹಮ್ಮದ್ ಅವರ ಹತ್ಯೆ ಘಟನೆಯನ್ನು ಹಲವು ದೇಶಗಳು ಖಂಡಿಸಿವೆ ಎಂದು ವರದಿ ತಿಳಿಸಿದೆ.
Team Udayavani, Jul 28, 2021, 11:48 AM IST
ಕಾಬೂಲ್: ಅಫ್ಘಾನಿಸ್ತಾನದ ಕಂದಾಹಾರ್ ಪ್ರದೇಶದಲ್ಲಿ ಖಾಶಾ ಝ್ವಾನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಹಾಸ್ಯ ನಟ ನಝರ್ ಮೊಹಮ್ಮದ್ ಅವರನ್ನು ಶಂಕಿತ ತಾಲಿಬಾನ್ ಉಗ್ರರು ಹತ್ಯೆಗೈದಿದ್ದು, ಇದೊಂದು ಆಘಾತಕಾರಿ ಸಂಗತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ಶಾಮ್ಲಿ ಗ್ಯಾಂಗ್…ವಿಮಾನದಲ್ಲಿ ಬಂದು ಸರಗಳ್ಳತನ ಮಾಡ್ತಿದ್ರು!
ಈ ಹಿಂದೆ ಕಂದಾಹಾರ್ ಪೊಲೀಸ್ ಇಲಾಖೆಯಲ್ಲಿ ಮೊಹಮ್ಮದ್ ಸೇವೆ ಸಲ್ಲಿಸಿದ್ದರು. ಕಳೆದ ಗುರುವಾರ ರಾತ್ರಿ ಅಪರಿಚಿತ ಶಸ್ತ್ರಧಾರಿ ಗುಂಪು ಮನೆಯೊಳಕ್ಕೆ ನುಗ್ಗಿ ಮೊಹಮ್ಮದ್ ಅವರನ್ನು ಎಳೆದೊಯ್ದು ಹತ್ಯೆಗೈದಿರುವುದಾಗಿ ದ ಟೈಮ್ಸ್ ವರದಿ ಮಾಡಿದೆ.
ಈ ಹತ್ಯೆಗೆ ತಾಲಿಬಾನ್ ಕಾರಣ ಎಂದು ನಟ ಮೊಹಮ್ಮದ್ ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ ಮೊಹಮ್ಮದ್ ಅವರ ಹತ್ಯೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ತಾಲಿಬಾನ್ ತಿಳಿಸಿರುವುದಾಗಿ ವರದಿ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾ ಪಡೆ ಹಿಂದಿರುಗಿದ ನಂತರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ್ ಭದ್ರತಾ ಪಡೆ ವಿರುದ್ಧ ಸಮರ ಸಾರಿದ್ದು, ಶೇ.70ರಷ್ಟು ಅಫ್ಘಾನಿಸ್ತಾನ್ ಪ್ರದೇಶಗಳು ತಮ್ಮ ವಶದಲ್ಲಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ.
Because they don’t want Muslims to laugh,sing, dance or be happy. They need brain-dead muslims who can act as zombies to fight for Islamic State.
Mind you..they don’t spare you even in an Islamic State. This is power hungry unquenchable blood thirst.
RIP brother #NazarMohammad https://t.co/rcgb5yCM9r
— Subuhi Khan (@SubuhiKhan01) July 28, 2021
ತಾಲಿಬಾನ್ ಉಗ್ರರ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಸ್ಯ ನಟ ಮೊಹಮ್ಮದ್ ಅವರ ಹತ್ಯೆ ಘಟನೆಯನ್ನು ಹಲವು ದೇಶಗಳು ಖಂಡಿಸಿವೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?