ತಂದೆ ಶವ ಸಾಗಿಸಲು 60 ಸಾವಿರ ಕೇಳಿದ ಆ್ಯಂಬುಲೆನ್ಸ್ ಸಿಬಂದಿ: ಮಾಂಗಲ್ಯ ಮಾರಲು ಮುಂದಾದ ಮಗಳು
Team Udayavani, Apr 21, 2021, 11:15 PM IST
ಬೆಂಗಳೂರು : ಕೊರೊನಾ ಸೋಂಕಿತ ತಂದೆಯ ಶವ ಸಾಗಿಸಲು ಆ್ಯಂಬುಲೆನ್ಸ್ ಸಿಬಂದಿ 60 ಸಾ.ರೂ. ಕೇಳಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ಮಾಂಗಲ್ಯ ಮಾರಿ ಹಣ ನೀಡಲು ಮುಂದಾದ ಘಟನೆ ನಗರ ಹೆಬ್ಟಾಳದಲ್ಲಿ ನಡೆದಿದೆ.
ಶವವನ್ನು ನಗರದ ಹೆಬ್ಟಾಳದಿಂದ ಪೀಣ್ಯದ ಚಿತಾಗಾರಕ್ಕೆ ಸಾಗಿಸಬೇಕಿತ್ತು. ಇದಕ್ಕಾಗಿ ನಿಗದಿಪಡಿಸಿದ್ದ ಆ್ಯಂಬುಲೆನ್ಸ್ ಸಿಬಂದಿ, 60 ಸಾ.ರೂ. ನೀಡದಿದ್ದರೆ ಶವವನ್ನು ಬೀದಿಯಲ್ಲೇ ಬಿಸಾಡುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ಮಾಂಗಲ್ಯ ಮಾರಿ ಹಣ ನೀಡಲು ಮಗಳು ಮುಂದಾಗಿದ್ದಾರೆ. ಆದರೆ ಆ್ಯಂಬುಲೆನ್ಸ್ ಸಿಬಂದಿ, ತಮಗೆ ಆಭರಣ ಬೇಡ, ಹಣವೇ ಬೇಕು. ಈಗ ಇಲ್ಲದಿದ್ದರೆ ನಾಳೆ ಬೆಳಗ್ಗೆ ನೀಡಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಪಾದಚಾರಿ ಮಾರ್ಗಗಳ ಮೇಲೆ ಪಾರ್ಕಿಂಗ್ ದಂಡನಾರ್ಹ ಅಪರಾಧ: ಹೈಕೋರ್ಟ್