ಚೀನಕ್ಕೆ ಅಮೆರಿಕದ ಸವಾಲು; ಜಾಗತಿಕ ಪಡೆಗಳ ಮರುನಿಯೋಜನೆಗೆ ಸಿದ್ಧತೆ

ಆಗ್ನೇಯ ಏಷ್ಯಾ ಭಾಗದ ದೇಶಗಳಿಗೆ ಸೇನಾ ಬೆಂಬಲ, ಚೀನ ವಿರುದ್ಧ ಅಮೆರಿಕ-ಇಯು ಒಗ್ಗಟ್ಟು?

Team Udayavani, Jun 27, 2020, 6:00 AM IST

ಚೀನಕ್ಕೆ ಅಮೆರಿಕದ ಸವಾಲು; ಜಾಗತಿಕ ಪಡೆಗಳ ಮರುನಿಯೋಜನೆಗೆ ಸಿದ್ಧತೆ

ವಾಷಿಂಗ್ಟನ್‌: ಭಾರತ ಮತ್ತು ಚೀನ ನಡುವಣ ಎಲ್‌ಎಸಿಯಲ್ಲಿ ಎರಡೂ ದೇಶಗಳ ಸೇನಾಪಡೆಗಳ ನಡುವಣ ಘರ್ಷಣೆಯು ಜಾಗತಿಕ ಮಟ್ಟದಲ್ಲಿಯೂ ಪರಿಣಾಮಗಳನ್ನು ಬೀರಲಾರಂಭಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಅಮೆರಿಕವು ಜರ್ಮನಿಯಲ್ಲಿ ನಿಯೋಜನೆಗೊಂಡಿದ್ದ ತನ್ನ ಮೂರು ಸಮರ ನೌಕೆಗಳು ಮತ್ತು ಸೇನೆಯನ್ನು ದಕ್ಷಿಣ ಚೀನ ಸಮುದ್ರಕ್ಕೆ ಕಳುಹಿಸಿಕೊಟ್ಟಿದೆ.

ಈ ಮೂಲಕ ಈಗಾಗಲೇ ನೆರೆ ದೇಶಗಳ ಜತೆಗೆ ತಿಕ್ಕಾಟ ಆರಂಭಿಸಿರುವ ಚೀನಕ್ಕೆ ಪರೋಕ್ಷವಾಗಿ ಸಮರದ ಬೆದರಿಕೆಯೊಡ್ಡಿದೆ. ಅಷ್ಟೇ ಅಲ್ಲ, ಚೀನ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಮಾತುಕತೆ ಆರಂಭಿಸುವುದಾಗಿ ಅಮೆರಿಕ ಹೇಳಿದೆ.

ಕೋವಿಡ್ -19 ಕಾಟದ ನಡುವೆಯೇ ಬೇರೆ ಬೇರೆ ದೇಶಗಳ ಭೂಭಾಗಗಳನ್ನು ಒತ್ತುವರಿ ಮಾಡಿ ಕೊಳ್ಳುವ ಮೂಲಕ ಚೀನವು ಪಾಕ್‌ ಬಿಟ್ಟು ಬಹುತೇಕ ನೆರೆ ರಾಷ್ಟ್ರಗಳೊಂದಿಗೆ ಕಾಲು ಕೆರೆಯು ತ್ತಿದೆ. ಅಮೆರಿಕ ಜತೆಗೂ ಕೋವಿಡ್ -19 ವಿಚಾರದಲ್ಲಿ ಬಹುದೊಡ್ಡ ಜಗಳಕ್ಕೆ ನಿಂತಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಡಿ ಸಂಘರ್ಷ
ವಿಚಾರದಲ್ಲೂ ಭಾರತದ ಜತೆ ನಿಲ್ಲುವ ಮುನ್ಸೂಚನೆ ನೀಡಿರುವ ಅಮೆರಿಕವು ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದೆ. ಚೀನದಿಂದ ತೊಂದರೆ ಅನುಭವಿಸುತ್ತಿರುವ ಎಲ್ಲ ದೇಶಗಳಿಗೂ ಸೇನಾ ಬೆಂಬಲ ನೀಡುವುದಾಗಿ ಘೋಷಿಸಿದೆ.

ಚೀನವನ್ನು “ರಕ್ಕಸ ರಾಷ್ಟ್ರ’ ಎಂದೇ ಜರೆದಿದ್ದ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೋಂಪೆಯೊ ಇದೇ ಮೊದಲ ಬಾರಿಗೆ ಯುದ್ಧದ ಮುನ್ಸೂಚನೆ ನೀಡಿದ್ದಾರೆ. ಪಿಎಲ್‌ಎ ಎದುರಿಸಲು ಸಮರ್ಥರಿದ್ದೇವೆ. ನಮ್ಮ ಕಾಲದ ಸವಾಲುಗಳ ಬಗ್ಗೆ ಚಿಂತಿಸಿ, ಅವುಗಳನ್ನು ಎದುರಿಸಲು ಸಾಕಷ್ಟು ಸಂಪನ್ಮೂಲಗಳು ಇವೆ ಎಂಬುದನ್ನೂ ಈಗಾಗಲೇ ಖಾತರಿಪಡಿಸಿಕೊಂಡಿದ್ದೇವೆ ಎಂದು ಅವರು “ಬ್ರಸೆಲ್ಸ್‌ ಫೋರಂ- 2020’ರ ವರ್ಚುವಲ್‌ ಸಭೆಯಲ್ಲಿ ಹೇಳಿದ್ದಾರೆ.

ಚೀನದ ವಸ್ತು ಮುಕ್ತ ಹಬ್ಬ
ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಲು ಅಖೀಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ವಿನೂತನ ಹೆಜ್ಜೆ ಇಟ್ಟಿದೆ. ಚೀನ ಉತ್ಪನ್ನಮುಕ್ತ ಹಬ್ಬಕ್ಕೆ ಕರೆಕೊಟ್ಟಿದೆ. ರಕ್ಷಾಬಂಧನ, ಜನ್ಮಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ ಸಹಿತ ಎಲ್ಲ ಉತ್ಸವಗಳಲ್ಲಿ ಚೀನದ ವಸ್ತುಗಳ ಬಳಕೆ ನಿಲ್ಲಿಸಲು ಸೂಚಿಸಿದೆ. ದೇಶೀ ನಿರ್ಮಿತ ವಸ್ತುಗಳನ್ನಷ್ಟೇ ಮಾರಲು ನಿರ್ಧರಿಸಿದೆ. ಶತಮಾನಗಳಷ್ಟು ಹಳೆಯದಾದ ಭಾರತೀಯ ಸಂಸ್ಕೃತಿಯಲ್ಲಿ ಚೀನದ ಸರಕುಗಳ ಹಾವಳಿ ಹೆಚ್ಚಾಗಿದೆ. ಅವು ಗಳನ್ನು ಬಹಿಷ್ಕರಿಸುವ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಾಂಡೇಲ್ವಾಲ್‌ ಹೇಳಿದ್ದಾರೆ.

ಲೇಹ್‌ನಲ್ಲಿ ಐಎಎಫ್ ಗಸ್ತು
ಭಾರತೀಯ ವಾಯುಪಡೆ ಲೇಹ್‌ನಲ್ಲಿ ಕಾರ್ಯಚಟುವಟಿಕೆ ಹೆಚ್ಚಿಸಿದೆ. ಎಲ್‌ಎಸಿ ಬಳಿ ಭಾರತದ ಸೇನಾ ಹೆಲಿಕಾಪ್ಟರ್‌ ಮತ್ತು ಯುದ್ಧ ವಿಮಾನಗಳ ಗಸ್ತು ತೀವ್ರವಾಗಿದೆ. ಸೇನೆಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ವಾಯುಪಡೆಯ ಸಮರ ವಿಮಾನಗಳು ಸಾಗಾಟ ಮಾಡುತ್ತಿವೆ.

ಮೂರು ಸಮರ ನೌಕೆ ರವಾನೆ
ಅಮೆರಿಕದ ಮೂರು ಸಮರ ನೌಕೆಗಳು ದಕ್ಷಿಣ ಚೀನ ಸಮುದ್ರದತ್ತ ಸಾಗಿರುವುದು ಸೇನೆಯ ಮರುನಿಯೋಜನೆಗಿಂತ ಪ್ರಮುಖ ವಿಚಾರ. ಇವುಗಳಲ್ಲಿ ಥಿಯೊಡೋರ್‌ ರೂಸ್‌ವೆಲ್ಟ್ ಸಮರ ನೌಕೆ ಅತ್ಯಂತ ದೊಡ್ಡದು. ಇದನ್ನೇ ರವಾನಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಏನೇ ಪರಿಸ್ಥಿತಿ ಎದುರಾದರೂ ಎದುರಿಸಲೇಬೇಕು ಎಂಬ ನಿರ್ಧಾರಕ್ಕೆ ಅಮೆರಿಕ ಬಂದಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಮರನೌಕೆ ರೂಸ್‌ವೆಲ್ಟ್ ವಿಶೇಷ
ಯುಎಸ್‌ಎಸ್‌ ರೂಸ್‌ವೆಲ್ಟ್ ಸಮರ ನೌಕೆಯು ಭಾರತ ಮತ್ತು ಚೀನದ ಸಮರ ನೌಕೆಗಳಿಗಿಂತ ಮೂರು ಪಟ್ಟು ದೊಡ್ಡದು. ಇದರಲ್ಲಿ ಕ್ರೂéಸರ್ಸ್‌, ವಿನಾಶಕ ಸ್ಕ್ವಾಡ್ರನ್‌ ಮತ್ತು ಸಬ್‌ಮೆರಿನ್‌ಗಳನ್ನು ಒಯ್ಯಬಹುದು. ಒಂದು ವೇಳೆ ಚೀನ ಮತ್ತು ಪಾಕ್‌ ಒಂದಾಗಿ ದಾಳಿ ಮಾಡಿದರೂ ಇದೇ ನೌಕೆ ಬಳಸಿಕೊಂಡು ಪ್ರತಿದಾಳಿ ನಡೆಸಬಹುದಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಎಲ್ಲೆಲ್ಲಿ ನಿಯೋಜನೆ?
ಜರ್ಮನಿಯಿಂದ ಬಂದಿರುವ ಈ ಮೂರು ಸಮರ ನೌಕೆಗಳನ್ನು ಬೇರೆ ಬೇರೆ ಕಡೆಗಳಲ್ಲಿ ನಿಯೋಜಿಸಲಾಗಿದೆ. ಒಂದು ನೌಕೆ ಪೆಸಿಫಿಕ್‌ ಕರಾವಳಿ, ಮತ್ತೂಂದು ಫಿಲಿಪ್ಪೀನ್ಸ್‌ ಬಳಿ ಮತ್ತು ಮೂರನೆಯದನ್ನು ವಿಯೆಟ್ನಾಂ ಬಳಿ ನಿಯೋಜಿಸಲಾಗಿದೆ. ಸಮರವೇನಾದರೂ ಆರಂಭವಾದರೆ ಈ ಮೂರನ್ನೂ ಮಲಕ್ಕಾ ಖಾರಿ ಮತ್ತು ಬಂಗಾಲಕೊಲ್ಲಿಗೆ ಕಳುಹಿಸಲಾಗುತ್ತದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿಂಗ್‌ – ಜ| ನರವಾಣೆ ಭೇಟಿ
ರಷ್ಯಾದ ವಿಕ್ಟರಿ ಪರೇಡ್‌ನ‌ಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಭಾರತಕ್ಕೆ ಮರಳಿದ್ದಾರೆ. ಎರಡು ದಿನ ಲಡಾಖ್‌ನಲ್ಲಿದ್ದು ಎಲ್‌ಎಸಿಯ ವಾಸ್ತವ ಸ್ಥಿತಿ ಪರಿಶೀಲಿಸಿರುವ ಸೇನಾಪಡೆಗಳ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಅವರು ರಕ್ಷಣಾ ಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಶೀಘ್ರವೇ ಸಚಿವರು, ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.

ಜರ್ಮನಿಯಲ್ಲಿ ಸೈನಿಕರ ಇಳಿಕೆ
ಅಧ್ಯಕ್ಷ ಟ್ರಂಪ್‌ ನಿರ್ದೇಶನದ ಮೇರೆಗೆ ಸೇನೆ ನಿಯೋಜನೆಯ ಮರುಪರಿಶೀಲನೆ ನಡೆಸುತ್ತಿದ್ದೇವೆ. ಇದರ ಭಾಗವಾಗಿ ಅಮೆರಿಕ ಜರ್ಮನಿ ಯಲ್ಲಿ ಸೈನಿಕರ ಸಂಖ್ಯೆಯನ್ನು 52 ಸಾವಿರದಿಂದ 25 ಸಾವಿರಕ್ಕೆ ಇಳಿಸುತ್ತಿದೆ ಎಂದು ಪೋಂಪೆಯೊ ಹೇಳಿದ್ದಾರೆ.

ಪೋಂಪೆಯೊ ಹೇಳಿದ್ದೇನು?
ಚೀನವು ಈಗ ಭಾರತದ ಜತೆ ಜಗಳಕ್ಕೆ ನಿಂತಿದೆ. ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ಗಳಿಗೂ ಬೆದರಿಕೆ ಹಾಕುತ್ತಿದೆ. ಈ ರಾಷ್ಟ್ರಗಳಿಗೆ ಬೆಂಬಲವಾಗಿ ಅಮೆರಿಕ ಪಡೆಗಳು ಕೆಲಸ ಮಾಡಲಿವೆ. ಮಿತ್ರ ರಾಷ್ಟ್ರ ಮತ್ತು ಐರೋಪ್ಯ ರಾಷ್ಟ್ರಗಳ ಸಲಹೆ, ಬೆಂಬಲ ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ ಪೋಂಪೆಯೊ.

ಚೀನ ಬಹಿಷ್ಕಾರ ಬಲವತ್ತರ!
ಭಾರತೀಯ ಯೋಧರಿಗೆ ಬುಲೆಟ್‌ ಪ್ರೂಫ್ ಜಾಕೆಟ್‌ ತಯಾರಿಸುವ ಕಾನ್ಪುರ ನಗರವೂ ಚೀನದ ವಸ್ತುಗಳನ್ನು ಬಹಿಷ್ಕರಿಸಿದೆ. ಇಲ್ಲಿನ ಸಂಸ್ಥೆಗಳು ಚೀನದಿಂದ ಆಮದು ಮಾಡಿಕೊಂಡ ಕಚ್ಚಾವಸ್ತುಗಳನ್ನು ಈ ಜಾಕೆಟ್‌ ತಯಾರಿಗೆ ಬಳಸುತ್ತಿದ್ದವು. ಈಗ ಇವು ಯುರೋಪ್‌ ಮತ್ತು ಅಮೆರಿಕದ ಸಂಸ್ಥೆಗಳತ್ತ ಮುಖ ಮಾಡಿವೆ ಎಂದು ಪಿಟಿಐ ವರದಿ ಮಾಡಿದೆ.

ಟಾಪ್ ನ್ಯೂಸ್

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

ISREL

Hamas ದಾಳಿ ತಡೆಗೆ ವಿಫ‌ಲ: ಇಸ್ರೇಲ್‌ ಸೇನಾ ಗುಪ್ತಚರ ಮುಖ್ಯಸ್ಥ ರಾಜೀನಾಮೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.