Tokyo Olympics ರದ್ದಾಗುವುದೇ? ಲಿಬರಲ್ ಪಕ್ಷದ ಕಾರ್ಯದರ್ಶಿ ಹೇಳಿಕೆಯಿಂದ ಮೂಡಿದ ಗೊಂದಲ
Team Udayavani, Apr 17, 2021, 12:02 AM IST
ಟೋಕಿಯೊ: ಜಪಾನಿನ ರಾಜಧಾನಿ ಟೋಕಿಯೊದಲ್ಲಿ ಜು. 23ರಿಂದ ಆ. 8ರ ವರೆಗೆ ನಡೆಯಬೇಕಿರುವ ಒಲಿಂಪಿಕ್ಸ್, ಈ ಬಾರಿಯೂ ಮುಂದೂಡಲ್ಪಡುವುದೇ ಅಥವಾ ರದ್ದುಗೊಳ್ಳುವುದೇ ಎಂಬ ಆತಂಕ ಶುರುವಾಗಿದೆ. ,ಜಪಾನ್ನಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿರುವುದು ಹಾಗೂ ಕೆಲವು ಜಪಾನೀಯರು “ಒಲಿಂಪಿಕ್ಸ್ ರದ್ದು ಮಾಡಿ’ ಎಂಬ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವುದು ಇದಕ್ಕೆ ಕಾರಣ.
ಸಂಶಯಕ್ಕೆ ಕಾರಣ…
ಪ್ರಸ್ತುತ ಒಲಿಂಪಿಕ್ಸ್ ರದ್ದಾಗುವುದೇ ಎಂಬ ಸಂಶಯ ಬರಲು ಕಾರಣ, ಜಪಾನಿನ ಆಡಳಿತಾರೂಢ ಲಿಬರಲ್ ಡೆಮೊಕ್ರಾಟಿಕ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ತೊಶಿಹಿರೊ ನಿಕಾಯಿ ಅವರ ಹೇಳಿಕೆ. ಒಂದು ವೇಳೆ ಕೊರೊನಾ ಸ್ಥಿತಿಯಲ್ಲಿ ಒಲಿಂಪಿಕ್ಸ್ ಆಯೋಜಿಸುವುದು ಕಷ್ಟ ಎನ್ನುವ ಪರಿಸ್ಥಿತಿ ಉದ್ಭವಿಸಿದರೆ ಅದನ್ನು ರದ್ದು ಮಾಡಲೇಬೇಕಾಗುತ್ತದೆ ಎಂದು ನಿಕಾಯಿ ಹೇಳಿದ್ದಾರೆ. ಒಲಿಂಪಿಕ್ಸ್ನಿಂದ ಕೊರೊನಾ ಹರಡುತ್ತದೆ ಅಂತಾದರೆ ಅದನ್ನು ಆಯೋಜಿಸುವುದರಲ್ಲಿ ಯಾವ ಸಾರ್ಥಕತೆ ಇದೆ ಎನ್ನುವುದು ಅವರ ಪ್ರಶ್ನೆ.
ಆದರೆ ಜಪಾನಿನ ಪ್ರಧಾನಮಂತ್ರಿ ಯೋಶಿಹಿಡೊ ಸುಗಾ ಮತ್ತು ಒಲಿಂಪಿಕ್ ಸಂಘಟನಾ ಸಮಿತಿ ಈ ಕೂಟವನ್ನು ನಡೆಸಿಯೇ ಸಿದ್ಧ ಎಂದು ಹೇಳಿಕೊಂಡಿವೆ. ಸದ್ಯದ ಮಟ್ಟಿಗೆ ಸಂಘಟನಾ ಸಮಿತಿ ಕೂಟ ನಡೆಸುವುದರಿಂದ ಹಿಂದೆ ಸರಿಯುವ ಯಾವುದೇ ಸೂಚನೆಯನ್ನು ನೀಡಿಲ್ಲ.
ಒಲಿಂಪಿಕ್ಸ್ ವಿರೋಧಿ ಅಭಿಯಾನ
ವಿಚಿತ್ರವೆಂದರೆ, ಜಪಾನ್ನಲ್ಲಿ ಕೆಲವರು “ಒಲಿಂಪಿಕ್ಸ್ ಕ್ಯಾನ್ಸಲ್ಡ್’ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದಾರೆ. 50 ಸಾವಿರಕ್ಕೂ ಅಧಿಕ ಮಂದಿ ರದ್ದು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಒಲಿಂಪಿಕ್ಸ್ಗೆ ಬೆಂಬಲ ಸೂಚಿಸಿಯೂ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ ಜಪಾನಿನಲ್ಲಿ ಕೊರೊನಾ ಏರುತ್ತಿದೆ. ನಾಲ್ಕನೇ ಅಲೆ ಹಬ್ಬಿದೆ. ಆದ್ದರಿಂದ 10 ಸಾವಿರಕ್ಕೂ ಅಧಿಕ ಆ್ಯತ್ಲೀಟ್ಗಳು ಸೇರುವ ಕ್ರೀಡಾಕೂಟ ನಡೆಸುವುದು ಹೇಳಿಕೊಳ್ಳುವಷ್ಟು ಸುಲಭವಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ