ನೀರು ಕುಡಿಯಲು ಹೋಗಿ ತೊಟ್ಟಿಯೊಳಗೆ ಬಿದ್ದ ಕಾಡಾನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ
Team Udayavani, Nov 22, 2020, 10:14 PM IST
ಮಳವಳ್ಳಿ: ನೀರು ಕುಡಿಯಲು ಬಂದ ಮರಿ ಆನೆಯೊಂದು ನೀರಿನ ತೊಟ್ಟಿಯೊಳಗೆ ಮುಳುಗಿದ್ದನ್ನು ಕಂಡು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟಿರುವ ಘಟನೆ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಭಾನುವಾರ ಬೆಳಗಿನ ಸಮಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗೆ ಕಾಡಾನೆಗಳ ಗುಂಪು ಗೀಳಿಡುತ್ತಿದ್ದ ಸದ್ದು ಕೇಳಿಸಿತು. ಇದನ್ನು ಆಲಿಸಿದ ಸಿಬ್ಬಂದಿ ಹುಡುಕಿಕೊಂಡು ಹೋದಾಗ ಮಾದನಾಯಕ ಜಮೀನಿನ ಪಕ್ಕ ಇರುವ ನೀರಿನ ತೊಟ್ಟಿಯೊಂದರಲ್ಲಿ ಮರಿ ಕಾಡಾನೆ ಬಿದ್ದಿರುವುದನ್ನು ರಕ್ಷಿಸಲು ಕಾಡಾನೆಗಳ ಗುಂಪು ಪ್ರಯತ್ನ ಪಡುತ್ತಿದ್ದವು. ಬೆಳಕು ಹರಿಯುತ್ತಿದ್ದಂತೆ ಕಾಡಾನೆಗಳು ಕಾಡಿನೊಳಗೆ ಹೋದ ನಂತರ ಜೆಸಿಬಿ ಮೂಲಕ ತೊಟ್ಟಿ ಹೊಡೆದು ಹಾಕಿ ಆನೆ ಮರಿಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಯಿತು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಮಹಾದೇವಸ್ವಾಮಿ ಮತ್ತು ಅರಣ್ಯ ರಕ್ಷಕ ಸಿದ್ದರಾಮ ಪೂಜಾರಿ, ಪೂಜಾರಿ, ಶ್ರೇಯಸ್, ರಾಜಕುಮಾರ, ಸುಮಂತ್, ಲೋಕೇಶ್, ಪ್ರದೀಪ್, ಕೆಂಚಪ್ಪ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ