ಪರಿಷತ್ ಘನತೆ ಎತ್ತಿ ಹಿಡಿಯಲು ಪ್ರಯತ್ನ: ಹೊರಟ್ಟಿ
"ಉದಯವಾಣಿ' ಕಚೇರಿಯಲ್ಲಿ ಸಂವಾದ
Team Udayavani, Feb 11, 2021, 7:10 AM IST
ಬೆಂಗಳೂರು: ವಿಧಾನ ಪರಿಷತ್ನ ಘನತೆಯನ್ನು ಎತ್ತಿ ಹಿಡಿಯಲು, ಅದರ ಪರಂಪರೆ ಮುಂದುವರಿಸಲು, ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಪ್ರಯತ್ನಿಸುತ್ತೇನೆ. ಸರಕಾರಕ್ಕೂ ಮುಜುಗರ ಉಂಟು ಮಾಡದೆ, ವಿಪಕ್ಷಕ್ಕೂ ಅವಕಾಶ ನೀಡಿ ಎಲ್ಲರನ್ನೂ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ ಎಂದು ನೂತನ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಉದಯವಾಣಿ ಬೆಂಗಳೂರು ಕಚೇರಿಯಲ್ಲಿ “ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಷತ್ತಿನ ಘನತೆ ಎತ್ತಿ ಹಿಡಿಯುವ ಕೆಲಸವಾಗಬೇಕಿದೆ. ಇದೊಂದು ಗಂಜಿ ಕೇಂದ್ರ, ವೃದ್ಧಾಶ್ರಮ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಸದನದ ಬಗ್ಗೆ ಸಾಮಾನ್ಯರಿಗೂ ಗೌರವ ಮೂಡುವಂತೆ ಮಾಡುವ ಪ್ರಯತ್ನಿಸಲಾಗುವುದು. ಕಚೇರಿಯಲ್ಲಿ ಕೆಳ ಹಂತದಿಂದ ಮೇಲ್ವರ್ಗ ದವರೆಗೂ ಇರುವ ಅಧಿಕಾರಿಗಳಲ್ಲಿ ಎಲ್ಲರಿಗೂ ಗೌರವ ದೊರೆಯುವಂತೆ ಮಾಡುತ್ತೇನೆ. ಬಹಳ ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿರು ವವರನ್ನು ವರ್ಗಾಯಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇವೆ ಎಂದರು.
ಈ ಸದನದಲ್ಲಿ ಅನೇಕ ಮಹಾನ್ ನಾಯಕರು ಆಗಿ ಹೋಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರು ಕೆಲಸ ಮಾಡಿದ್ದಾರೆ. ಆದರೆ, ಈಗ ಈ ಸದನಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೋತವರು ಬರುವಂತಹ ಪರಿಸ್ಥಿತಿ ಉಂಟಾಗಿದೆ. ಕಲೆ, ಸಂಗೀತ, ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರ ದವರು ಬರುತ್ತಿದ್ದರು. ಈಗ ಎಲ್ಲ ರಾಜಕೀಯ ಪಕ್ಷಗಳು ಈ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಬೇಕಿದೆ. ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದವರನ್ನು ಗುರುತಿಸುವ ಕೆಲಸವಾಗಬೇಕಿದೆ. ಸದ್ಯಕ್ಕೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ಅಸಹಾಯಕತೆ ಇದ್ದರೂ ಭರವಸೆ ಇದೆ. ಮುಂದೊಂದು ದಿನ ಪ್ರಕೃತಿಯೇ ಈ ವ್ಯವಸ್ಥೆ ಯನ್ನು ಬದಲಾಯಿಸಬಹುದು ಎಂದರು.
ಎಲ್ಎಚ್ ಸಮಸ್ಯೆಗೆ ಪರಿಹಾರ
ಶಾಸಕರ ಭವನದಲ್ಲಿ 15 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಬೇಕಾಗುವಷ್ಟು ನೀರು ಮತ್ತು ವಿದ್ಯುತ್ ಬಳಕೆಯಾಗುತ್ತದೆ. ಆದರೆ, ಅಲ್ಲಿ ಶೇ. 15ರಷ್ಟು ಶಾಸಕರು ಮಾತ್ರ ಉಳಿದುಕೊಳ್ಳುತ್ತಾರೆ. ಉಳಿದಂತೆ ಅವರ ಆಪ್ತರು, ಗನ್ಮ್ಯಾನ್ಗಳು ಉಳಿದುಕೊಳ್ಳುತ್ತಾರೆ.
ಅಲ್ಲಿ ನಿರಂತರ ಅಭಿವೃದ್ಧಿ ಹೆಸರಿನಲ್ಲಿ ಕೆಲಸಗಳು ನಡೆಯುತ್ತಿರುತ್ತವೆ. ಅದು ಅನಗತ್ಯ ವೆಚ್ಚ ಮಾಡಲಾಗುತ್ತದೆ. ಶಾಸಕರ ರೂಮುಗಳ ನವೀಕರಣದ ಹೆಸರಿನಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆ ರೀತಿಯ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಒಮ್ಮೆಲೆ ಎಲ್ಲವನ್ನೂ ಸರಿಪಡಿಸುವ ಭ್ರಮೆ ಇಲ್ಲ. ಹಂತ ಹಂತವಾಗಿ ಶಾಸಕರ ಮನ ಪರಿವರ್ತನೆಯನ್ನೂ ಮಾಡುವ ಮೂಲಕ ಬದಲಾವಣೆಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಅಧಿವೇಶನದ ಸಂದರ್ಭ ಎಲ್ಲ ಸದಸ್ಯರು ತಮ್ಮ ವಿಷಯ ಇಲ್ಲದಿದ್ದರೂ, ಸದನ ದಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಪ್ರೇರೇಪಿಸುವುದು. ಪ್ರತಿದಿನ ಕಾರ್ಯ ಸೂಚಿಯನ್ನು ಅಂದೇ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು .
-ಬಸವರಾಜ ಹೊರಟ್ಟಿ, ಸಭಾಪತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ