ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಮುತ್ತಗಿ
Team Udayavani, Dec 17, 2020, 12:30 PM IST
ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಬುಧವಾರವೂ ತೀವ್ರ ತನಿಖೆ ಕೈಗೊಂಡಿದ್ದಾರೆ. ನ್ಯಾಯಾಂಗ ಬಂಧನದಿಂದ ಎರಡು ದಿನಗಳ ಕಾಲ ತಮ್ಮ ಸುಪರ್ದಿಗೆ ಪಡೆದಿರುವ ಚಂದ್ರಶೇಖರ ಇಂಡಿ ಅವರನ್ನು ನಗರದ ಉಪನಗರ ಠಾಣೆಯಲ್ಲಿ ಇಡೀ ದಿನ ವಿಚಾರಣೆಗೆ ಒಳಪಡಿಸಿದರು.
ಈ ಮಧ್ಯೆ ಆರೋಪಿ ಬಸವರಾಜ ಮುತ್ತಗಿ ಸೇರಿ ವಿಜಯ ಕುಲಕರ್ಣಿ, ನಟರಾಜ್ ಸೇರಿದಂತೆ ಹಲವರನ್ನು ಠಾಣೆಗೆ ಕರೆಸಿ
ಸಿಬಿಐ ವಿಚಾರಣೆ ಮಾಡಿತು. ವಿಚಾರಣೆ ಎದುರಿಸಿ ಹೊರ ಬಂದ ಬಸವರಾಜ ಮುತ್ತಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯವನ್ನು ಈಗಲೂ ಜೀರ್ಣಿಸಿಕೊಳ್ಳಲು ಆಗುತ್ತಲೇ ಇಲ್ಲ.
ಕೆಲವರಿಗೆ ಒಂದಿಷ್ಟು ದೌರ್ಬಲ್ಯಗಳಿರುತ್ತವೆ. ನಾವು ಭಾವನೆಗಳಲ್ಲಿ ಬದುಕುವವರು. ಆದರೆ ಕೆಲವರಿಗೆ ಛಾಡಿ ಕೇಳುವ ದೌರ್ಬಲ್ಯ
ಇರುತ್ತದೆ. ಆ ಛಾಡಿ ಕೇಳಿದ್ದರಿಂದಲೇ ಹೀಗೆ ಆಗಿರಬಹುದು. ಚಂದ್ರಶೇಖರ ಇಂಡಿ ಅವರದ್ದು ಮಹಾಭಾರತದ ಶಕುನಿಯ
ಪಾತ್ರ. ನಮ್ಮೆಲ್ಲರ ಬದುಕಿನ ಚಂದು ಮಾಮಾರ ಪಾತ್ರ ಪ್ರವೇಶ ಪಡೆದು ಎಲ್ಲರ ಜೀವನವೂ ಹಾಳು ಮಾಡಿಬಿಟ್ಟಿವೆ. ಈ ಸಂಬಂಧ
ದೂರು ಕೊಡುವ ಬಗ್ಗೆ ನಮ್ಮ ವಕೀಲರೊಂದಿಗೆ ಚರ್ಚೆ ಮಾಡುವುದಾಗಿ ಹೇಳಿ ಅಲ್ಲಿಂದ ತೆರಳಿದರು. ಇನ್ನೂ ವಿಚಾರಣೆ
ಮುಗಿಸಿ ಹೊರ ಬಂದ ವಿಜಯ ಕುಲಕರ್ಣಿ, ಮುತ್ತಗಿ ಹತ್ಯೆಯ ಸುಪಾರಿ ವಿಷಯವನ್ನು ಅಲ್ಲಗೆಳೆದಿದ್ದು, ಇದು ಸತ್ಯಕ್ಕೆ ದೂರವಾದ ವಿಷಯವೆಂದು ಹೇಳಿದರು.
ಇದನ್ನೂ ಓದಿ:ಬಜರಂಗದಳ ಕಂಟೆಂಟ್ ಮೇಲೆ ನಿಷೇಧ ಹೇರುವ ಅಗತ್ಯವಿಲ್ಲ: ಆಯೋಗಕ್ಕೆ ಫೇಸ್ ಬುಕ್ ಇಂಡಿಯಾ
ನಾವು ಜತೆಗೆ ಕುಳಿತು ಸಾಕಷ್ಟು ಸಲ ಊಟ ಮಾಡಿದ್ದೇವೆ. ಎರಡು ಚಮಚ ವಿಷ ಹಾಕಿ ಕೊಟ್ಟಿದ್ದರೆ ತಿಂದು ಬಿಡುತ್ತಿದ್ದೀವಿ.
ಆದರೆ ಈ ರೀತಿ ಅವರು ಒಂದು ವೇಳೆ ಮಾಡಿದ್ದರೆ ಅದು ಅವರಿಗೆ ಶೋಭೆಯಲ್ಲ.
– ಬಸವರಾಜ ಮುತ್ತಗಿ, ಪ್ರಕರಣದ ಆರೋಪಿ
ಬಸವರಾಜ ಮುತ್ತಗಿ ಹಾಗೂ ನಾವೆಲ್ಲರೂ ಕುಟುಂಬ ಸದಸ್ಯರಿದ್ದಂತೆ. ಹೀಗಾಗಿ ಅವರಿಗೆ ಸುಪಾರಿ ಕೊಟ್ಟಿದ್ದೇವು ಎಂಬ
ವಿಷಯವೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಇದನ್ನು ಯಾರು ಹಬ್ಬಿಸಿದ್ದಾರೆಯೋ ಗೊತ್ತಿಲ್ಲ. ಆದರೆ ಇದೆಲ್ಲವೂ ಶುದ್ದ ಸುಳ್ಳು.
– ವಿಜಯ ಕುಲಕರ್ಣಿ, ವಿನಯ ಕುಲಕರ್ಣಿ ಸೋದರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ