10 ಗಂಟೆಗೆ ಕಚೇರಿಯಲ್ಲಿರಿ…: ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ
ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ....
Team Udayavani, Jul 25, 2022, 6:50 PM IST
ಬೆಂಗಳೂರು: ನಿಗದಿತ ಸಮಯದ ವೇಳೆ ಕಚೇರಿಯಲ್ಲಿರಬೇಕು, ಕಡ್ಡಾಯ ಕರ್ತವ್ಯಪಾಲನೆ ಮಾಡಬೇಕು ಎಂದು ಸಚಿವಾಲಯದ ನೌಕರರಿಗೆ ಖಡಕ್ ಸೂಚನೆ ನೀಡಲಾಗಿದೆ.
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿರಬೇಕು, ಸಮಯ ಪ್ರಜ್ಙೆ,ಕಾರ್ಯನಿಷ್ಠೆ ಕೊರತೆ ಯಾಗಬಾರದು, ದೂರದೂರುಗಳಿಂದ ಜನ ಸಮಸ್ಯೆ ಹೊತ್ತು ತರುತ್ತಾರೆ. ಆದರೆ, ಆ ವೇಳೆ ಅಧಿಕಾರಿ,ಸಿಬ್ಬಂದಿ ಇಲ್ಲವೆಂಬ ಮಾಹಿತಿಯಿದೆ. ನಿಗದಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವುದು, ಕಚೇರಿ ಅವಧಿಯಲ್ಲಿ ಸ್ಥಳದಲ್ಲಿಲ್ಲದಿರುವುದು ಕಂಡು ಬಂದಿದೆ. ಇನ್ನು ಮುಂದೆ ಕಡ್ಡಾಯವಾಗಿ ಕಚೇರಿಯಲ್ಲಿರಬೇಕು,ಬೇರೆಡೆ ತೆರಳಬೇಕಾದರೆ ಅನುಮತಿ ಕಡ್ಡಾಯ, ಮೇಲ್ವಿಚಾರಕರ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇಲ್ಲವಾದರೆ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಸರಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪದೇ ಪದೇ ಸುತ್ತೋಲೆ ಹೊರಡಿಸಲಾಗಿದೆ, ಪದೇ ಪದೇ ಆರೋಪಗಳು ಕೇಳಿಬಂದಿವೆ, ಹೀಗಾಗಿ ಕಡ್ಡಾಯ ಕರ್ತವ್ಯ ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ