ಜನರ ಕಲ್ಯಾಣವಾಗಬೇಕು; ಉಪದ್ರವವಾಗಬಾರದು: ಪರ್ಯಾಯ ಕೃಷ್ಣಾಪುರ ಶ್ರೀ ಸಂದೇಶ
Team Udayavani, Jan 17, 2022, 1:36 PM IST
ಉಡುಪಿ: ಹತ್ತು ಜನರ ಕಲ್ಯಾಣದ ಉದ್ದೇಶದಿಂದ ನಾವು ಪರ್ಯಾಯ ಸ್ವೀಕರಿಸುತ್ತಿದ್ದು, ಪ್ರಾರಂಭದಲ್ಲೇ ಹತ್ತು ಜನರಿಗೆ ಉಪದ್ರವವಾಗುವ ಕಾರ್ಯಕ್ರಮವಾಗಬಾರದು, ಎಲ್ಲಾ ಕಾರ್ಯಕ್ರಮಗಳು ಲೋಕೋಪಯೋಗಿಯಾಗಿರಬೇಕು ಎಂದು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಸೋಮವಾರ ಅನುಗ್ರಹ ಸಂದೇಶ ನೀಡಿದ್ದಾರೆ.
ಕೋವಿಡ್ ಕಾಲಘಟ್ಟದಲ್ಲಿ ಬಂದಿರತಕ್ಕಂತಕ ಪರ್ಯಾಯ ಸರಳವಾಗಿ ನಡೆಯಲಿದೆ. ಜನರೆಲ್ಲರೂ ಸರಕಾರದ ಮಾರ್ಗದರ್ಶನ ಪಾಲಿಸಬೇಕು ಎಂಬುದು ನಮ್ಮ ಅನಿಸಿಕೆ. ನಿಮ್ಮೆಲ್ಲರಿಂದ ವಿಶೇಷವಾದ ಸ್ಪಂದನೆ ನೀರಿಕ್ಷಿಸುತ್ತಿದ್ದೇನೆ. ಮಧ್ವಾಚಾರ್ಯರು, ವಾದಿರಾಜರು ಹಾಕಿಕೊಟ್ಟ ಮಾರ್ಗದರ್ಶನ ಅನುಸರಿಸಿ ಹರಿ,ಗುರುಗಳ ಆಶೀರ್ವಾದಕ್ಕೆ ಭಾಜನರಾಗಬೇಕು ಎಂದರು.
ಪರ್ಯಾಯ ಎಂದರೆ ದೇವರ ಪೂಜೆ ವಹಿಸುವ ಉತ್ಸವ, ವ್ಯಕ್ತಿಗಾಗಿ ಉತ್ಸವ ಅಲ್ಲ. ಭಗವಂತ ಸಕಲರಿಗೂ ಶ್ರೇಯಸ್ಸು ಮಾಡಬೇಕು , ಜಗತ್ತಿನಲ್ಲೆಲ್ಲ ಕಲ್ಯಾಣವಾಗಬೇಕು. ಈ ಉತ್ಸವದಿಂದ ಲೋಕಕ್ಕೆ ಕಲ್ಯಾಣವಾಗುತ್ತದೆ ಎಂದರು.
ಇದನ್ನೂ ಓದಿ : ಪರ್ಯಾಯ ಮಹೋತ್ಸವ: 5ಡಿವೈಎಸ್ಪಿ, 62 ಮಂದಿ ಎಎಸ್ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು
ಸರಕಾರದ ನಿಯಮ ಪಾಲಿಸಿ ಜನರೆಲ್ಲರೂ ಆರೋಗ್ಯದ ಅನುಸೂಚನೆಗಳನ್ನು ಪಾಲಿಸಿ ಉತ್ಸವದಲ್ಲಿ ಭಾಗಿಯಾಗಬೇಕು. ಸರಕಾರದ ಮಾರ್ಗದರ್ಶನ ಅನುಸರಿಸಿ ಜನರು ಲೋಕಕ್ಕೆ ಉಪಕಾರ ಮಾಡಬೇಕೆಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ