ಬೆಳ್ತಂಗಡಿ: ಪ್ರವಾಹದೂರಿನ ಸಂತ್ರಸ್ತರ ಸೂರಿನ ಕನಸು ನನಸು: ನಾಲ್ಕನೇ ಹಂತದ ಅನುದಾನ ಬಿಡುಗಡೆ


Team Udayavani, Feb 17, 2021, 4:10 AM IST

ಬೆಳ್ತಂಗಡಿ: ಪ್ರವಾಹದೂರಿನ ಸಂತ್ರಸ್ತರ ಸೂರಿನ ಕನಸು ನನಸು: ನಾಲ್ಕನೇ ಹಂತದ ಅನುದಾನ ಬಿಡುಗಡೆ

ಬೆಳ್ತಂಗಡಿ: ಮೂಲ ಸೌಕರ್ಯಗಳಲ್ಲೊಂದಾದ ಸೂರಿನ ಕನಸು ಈಡೇರಿಸಲು ಜೀವನದ ಬಹುತೇಕ ಆಯಸ್ಸು ಕಳೆದುಹೋಗುತ್ತದೆ. ಅಂತಹಾ ಸಮಯದಲ್ಲಿ ಬೆಳ್ತ‌ಂಗಡಿ ತಾಲೂಕಿಗೆ 2019 ಆಗಸ್ಟ್‌ 9ರ ಮಧ್ಯಾಹ್ನ ಅಪ್ಪಳಿಸಿದ ಪ್ರವಾಹ ತಾಲೂಕಿನ 9 ಗ್ರಾಮಗಳ 289 ಮಂದಿಯ ಜೀವನವನ್ನೇ ನರಕ ಸದೃಶ್ಯವಾಗಿಸಿತ್ತು. ಆದರೆ ಇಂದು ಮತ್ತೆ ಅವರ ಮೊಗದಲ್ಲಿ ಚೈತನ್ಯ ಮೂಡಿಸುವ ಕೆಲಸ ಸರಕಾರದಿಂದಾಗುತ್ತಿದೆ.

ಪ್ರವಾಹದ ಊರಿನ ಮೊರೆ ಆಲಿಸಲು ಬಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಳ್ತಂಗಡಿ ತಾಲೂಕಿನ ವಸ್ತುಸ್ಥಿತಿ ಆಲಿಸಿ ರಾಜ್ಯಕ್ಕೇ ಅನ್ವಯವಾಗುವಂತೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ತತ್‌ಕ್ಷಣವೇ 1 ಲಕ್ಷ ರೂ. ಹಾಗೂ ಮನೆ ನಿರ್ಮಿಸುವವರೆಗೆ ಪ್ರತಿ ತಿಂಗಳಿಗೆ ಬಾಡಿಗೆಯನ್ನು ನೀಡುವುದಾಗಿ ಘೋಷಿಸಿದ್ದರು.

ಒಂದೂವರೆ ವರ್ಷ ಕಳೆದರೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಆಗಾಗ ಅಡ್ಡಿಪಡಿಸಿದ್ದರಿಂದ ಮನೆಗಳು ಪೂರ್ಣಗೊಂಡಿರಲಿಲ್ಲ. ಐಪಿಎಸ್‌ ಸಮಸ್ಯೆ, ಸರ್ವೇ ವಿಳಂಬ, ರಾಜೀವಗಾಂಧಿ ನಿಗಮದಿಂದ ಹಣ ಬಿಡುಗಡೆ ತಡವಾಗಿರುವುದು ಸೇರಿದಂತೆ ಅನೇಕ ನೋವು ಅನುಭವಿಸಿದ್ದರು. ಪ್ರಸಕ್ತ ಒಂದೊಂದೇ ಸಮಸ್ಯೆಗಳು ಪೂರ್ಣಗೊಂಡಿದ್ದು, ಸಂಘಸಂಸ್ಥೆಗಳ ನೆರವು, ದಾನಿಗಳ ಪರಿಶ್ರಮ ಎಲ್ಲವೂ ಒಂದಾಗಿ ಸಂತ್ರಸ್ತರ ಬದುಕಿನಲ್ಲಿ ಸೂರಿನ ಕನಸ್ಸು ಈಡೇರಿತ್ತಿದೆ.

ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಲ್ಲಿ ಹಾನಿಯಾದ ಮನೆಗಳ ಪೈಕಿ ಅತೀ ಹೆಚ್ಚು ಹಾನಿಗೊಳಗಾದ 289 ಮನೆಗಳನ್ನು ಪುನರ್ವಸತಿ ಯೋಜನೆ-2019ರಡಿಯಲ್ಲಿ ಗುರುತಿಸಲಾಗಿತ್ತು. 2020 ಜೂನ್‌ 3 ರ ವರೆಗೆ 5,55,00,000 ರೂ. ಹಣ ಬಿಡುಗಡೆಯಾಗಿತ್ತು. ಇದೀಗ ನಾಲ್ಕನೇ ಹಂತದ ಜಿಪಿಎಸ್‌ ಕಾರ್ಯ ನಡೆದು ಹಣ ಸಂದಾಯವಾಗಿದೆ.

ಜಿಪಿಎಸ್‌ ಹಂತ
289ಮನೆಗಳ ಪೈಕಿ 203 ಮನೆ ಸಂಪೂರ್ಣ ಹಾನಿ, 55 ಮನೆ ಭಾಗಶಃ ಹಾನಿ, 31 ಅಲ್ಪ-ಸ್ವಲ್ಪ ಹಾನಿ ಎಂದು ಪರಿಗಣಿಸಿ ಒಟ್ಟು 289 ಮನೆಗಳ ವರದಿ ಸಲ್ಲಿಸಲಾಗಿತ್ತು. ಸಂಪೂರ್ಣ ಮತ್ತು ಭಾಗಶಃ ಹಾನಿಗೊಳಗಾದ ಒಟ್ಟು 258 ಮನೆಗಳ ಪೈಕಿ 255 ಮನೆಗಳಿಗೆ 5 ಲಕ್ಷ ರೂ. ಸರಕಾರ ಘೋಷಿಸಿತ್ತು. ಪ್ರಥಮ ಹಂತವಾಗಿ 1 ಲಕ್ಷ ರೂ. ಹಣ ಬಿಡುಗಡೆಗೊಳಿಸಿದೆ. ಬಳಿಕ ತಳಪಾಯ-ಗೋಡೆ-ಛಾವಣಿ-ಪೂರ್ಣ ಹೀಗೆ ಹಂತವಾರು ಪ್ರಗತಿ ಸಾಧಿಸಿದ ಫಲಾ ನುಭವಿಗಳಿಗೆ ಜಿ.ಪಿ.ಎಸ್‌ ಅಳವಡಿಸಿದ ಅನಂತರ ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ.

ಉಳಿದಂತೆ ಅಲ್ಪ-ಸ್ವಲ್ಪ ಹಾನಿಗೊಳಗಾದ 31 ಮನೆಗಳಿಗೆ ಪ್ರತಿ ಫಲಾನುಭವಿಗೆ 50,000 ರೂ. ಪೂರ್ಣ ಮೊತ್ತದ ಪರಿಹಾರದ ಹಣ ನೀಡಲಾಗಿದೆ. ಹಸು 1 ಕರು ಸೇರಿದಂತೆ 3 ಜಾನುವಾರುಗಳ ಜೀವ ಹಾನಿಗೆ 70,000 ರೂ. ಪರಿಹಾರ, ಬಟ್ಟೆ ಮತ್ತು ಅಡುಗೆ ಪಾತ್ರೆ-ಸಾಮಗ್ರಿಗಳ ಹಾನಿಗೆ 324 ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ 10 ಸಾವಿರ ರೂ. ನಂತೆ ಒಟ್ಟು 32ಲಕ್ಷದ 40 ಸಾವಿರ ರೂ. ನೀಡಿದೆ.

ಪ್ರಸಕ್ತ ತಳಪಾಯ 36 ಮನೆ, ಗೋಡೆ ಹಂತ-67 ಮನೆ, ಛಾವಣಿ ಹಂತ-72 ಮನೆ, ಪೂರ್ಣವಾದ-59 ಮನೆಗಳ ಜಿಪಿಎಸ್‌ ನಡೆಸಲಾಗಿದೆ. ಹಂತಹಂತವಾಗಿ ಅನುದಾನವೂ ಬಿಡುಗಡೆಯಾಗುತ್ತಾ ಬಂದಿದೆ. 18 ಮನೆಗಳಿಗೆ ಆರಂಭಿಕ 1 ಲಕ್ಷ ರೂ. ನಂತೆ ಬಂದಿದ್ದು, ಬಳಿಕ ಮುಂದುವರೆಸಲು ನಾನಾ ಕಾರಣಗಳಿಂದ ಬಾಕಿ ಉಳಿದಿದೆ. ಮಿತ್ತಬಾಗಿಲು ಒಂದೇ ಗ್ರಾಮದಲ್ಲಿ 13 ಮನೆಗಳು ತಳಪಾಯ ಹಂತದಲ್ಲೇ ಉಳಿದಿದೆ. ಈ ಕುರಿತು ಕಂದಾಯ ಇಲಾಖೆ ಅಫಿದಾವಿತ್‌ ಪಡೆದು ಸಂಬಂದಪಟ್ಟ ಇಲಾಖೆಗೆ ಸಲ್ಲಿಸಿದೆ.

ಅಗತ್ಯ ಕ್ರಮ
ವಾರಸುದಾರರು ಮೃತಪಟ್ಟು ಖಾತೆ ಬದಲಾವಣೆ ನಡೆಸುವ ವಿಚಾರ ನನ್ನ ಗಮನಕ್ಕೆ ಬಂದಾಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮನೆ ನಿರ್ಮಾಣವಾಗದೆ ಬಾಕಿ ಉಳಿದ ಸಂತ್ರಸ್ತರ ಸಮಸ್ಯೆ ಆಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

ವಾರಸುದಾರರ ಖಾತೆ ಬದಲಾವಣೆ
ಸಂತ್ರಸ್ತ ವಾರಸುದಾರರು ಮೃತಪಟ್ಟಿದ್ದರಿಂದ ಅವರ ಪತ್ನಿ ಅಥವಾ ಮಕ್ಕಳ ಹೆಸರಿಗೆ ವರ್ಗಾಯಿಸುವಲ್ಲಿ ತಾಂತ್ರಿಕ ತೊಡಕಾಗಿದ್ದರಿಂದ ಕಳೆದ 6 ತಿಂಗಳಿಂದ ಅನುದಾನ ಬಾರದೆ ಮನೆಗಳು ಅರ್ಧಕ್ಕೆ ನಿಂತಿತ್ತು. ಈ ಕುರಿತು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿತ್ತು. ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರು ತಿಮ್ಮನಬೆಟ್ಟು ಅಬ್ದುಲ್‌ ರಫೀಕ್‌, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಅವರು ಮೃತಪಟ್ಟಿದ್ದು, ಜಿಲ್ಲಾಧಿಕಾರಿ ಪತ್ರವನ್ನು ಪರಿಗಣಿಸಿ ಬೆಂಗಳೂರು ರಾಜೀವ ಗಾಂಧಿ ವಸತಿ ನಿಗಮ ತಾಂತ್ರಿಕ ಸಮಸ್ಯೆ ಸರಿಪಡಿಸಿದೆ. ಇದೀಗ ಖಾತೆ ಹೆಸರು ಬದಲಾಗಿದ್ದು, ನಾಲ್ಕನೇ ಕಂತಿನ ಹಣವೂ ಫೆ.16ರಂದು ಬಿಡುಗಡೆಯಾಗಿದೆ ಎಂದು ಸಂತ್ರಸ್ತ ಸತೀಶ್‌ ಕಲ್ಲೊಲೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.