ಬೆಳ್ತಂಗಡಿಯಲ್ಲಿ ಮತ್ತೆ ಗಾಳಿ, ಮಳೆ : ವಿವಿಧೆಡೆಗಳಲ್ಲಿ ಅಂಗಡಿ, ಮನೆ, ಅಡಿಕೆ ತೋಟಗಳಿಗೆ ಹಾನಿ
Team Udayavani, Apr 15, 2021, 12:36 AM IST
ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಬುಧವಾರವೂ ಭಾರಿ ಗಾಳಿ ಮಳೆಯಾಗಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.
ಮದ್ದಡ್ಕ ಸಮೀಪ ಅಂಗಡಿ ಮುಂಗಟ್ಟು, ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಅಡಕೆ ಮರಗಳು ಧರೆಗುರುಳಿವೆ. ಓಡಿಲಾ°ಳ ಗ್ರಾಮದ ಕೆರೆಕೋಡಿ ಜಾನಕಿ ಅವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿದೆ. ರೇಷ್ಮೆ ರಸ್ತೆಯಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಮರ ತೆರವುಗೊಳಿಸಿದ್ದು, ಮೆಸ್ಕಾಂ ಇಲಾಖೆ ವಿದ್ಯುತ್ ತಂತಿ ತೆರವುಗೊಳಿಸಿದೆ.
ವಿಪರೀತ ಗಾಳಿಗೆ ಓಡಿಲಾ°ಳ ಗ್ರಾಮದ ಪದ್ಮ ಮೂಲ್ಯ ಪರಾರಿ ಅವರ ಅಡಿಕೆ ತೋಟದಲ್ಲಿ 20ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, ಸಮೀಪದ ತೋಟಗಳಿಗೂ ಹಾನಿಯಾಗಿದೆ. ಲತಾ ರಾಜೇಶ್ ಶೆಟ್ಟಿ ಅವರ ಶೀಟ್ ಹಾಸಿದ ಮೇಲ್ಛಾವಣಿ ಸಂಪೂರ್ಣ ಗಾಳಿಗೆ ಧ್ವಂಸವಾಗಿದೆ. ಕಳಿಯ ಗ್ರಾ.ಪಂ. ವ್ಯಾಪ್ತಿಯ ಗೇರುಕಟ್ಟೆ ಪೇಟೆಯಲ್ಲಿರುವ ಸತೀಶ್ಕುಮಾರ್ ಬೆಳಿಬೈಲು ಅವರ ಮಾಲಕತ್ವದ ಕಟ್ಟಡದಲ್ಲಿರುವ ಕೋಳಿ ಅಂಗಡಿ, ವೆಲ್ಡಿಂಗ್ ಶಾಪ್, ವಾಹನ ಹೊಗೆ ತಪಾಸಣಾ ಕೇಂದ್ರ, ಸೆಲೂನ್ ಅಂಗಡಿ, ದಿನಸಿ ಅಂಗಡಿ ವಿಪರೀತ ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯರಾದ ಕೆ.ಎಂ.ಅಬ್ದುಲ್ ಕರೀಮ್, ಹರೀಶ್ಕುಮಾರ್ ಭೇಟಿ ನೀಡಿ ಕಂದಾಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!