ವನಿತಾ ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆ ಅನಗತ್ಯ: ಶಿಖಾ ಪಾಂಡೆ


Team Udayavani, Jun 29, 2020, 5:45 AM IST

ವನಿತಾ ಕ್ರಿಕೆಟ್‌ನಲ್ಲಿ ಭಾರೀ ಬದಲಾವಣೆ ಅನಗತ್ಯ: ಶಿಖಾ ಪಾಂಡೆ

ಹೊಸದಿಲ್ಲಿ: ವನಿತಾ ಕ್ರಿಕೆಟಿನ ಆಕರ್ಷಣೆ ಹೆಚ್ಚಿಸಲು ಹಾಗೂ ಇದನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕೆಂಬ ಕಾರಣಕ್ಕಾಗಿ ಯದ್ವಾತದ್ವ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂಬುದಾಗಿ ಭಾರತದ ಸೀನಿಯರ್‌ ಪೇಸ್‌ ಬೌಲರ್‌ ಶಿಖಾ ಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ನ್ಯೂಜಿಲ್ಯಾಂಡ್‌ ವನಿತಾ ತಂಡದ ನಾಯಕಿ ಸೋಫಿ ಡಿವೈನ್‌, ಭಾರತದ ಉದಯೋನ್ಮುಖ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಅವರೆಲ್ಲ ವನಿತಾ ಕ್ರಿಕೆಟ್‌ ಜನಪ್ರಿಯತೆಗೆ ನಾನಾ ಸಲಹೆ ಗಳನ್ನು ಮುಂದಿರಿಸಿದ್ದರು. ಸಣ್ಣ ಚೆಂಡು, ಕಿರಿದಾದ ಬೌಂಡರಿ, ಕ್ರೀಸ್‌ ಅಂತರವನ್ನು ಕಡಿಮೆಗೊಳಿಸುವುದು… ಹೀಗೆ ವಿವಿಧ ಸಲಹೆಗಳನ್ನು ಮಾಡಿದ್ದರು.

“ಈ ಸಲಹೆಗಳನ್ನೆಲ್ಲ ಗಮನಿಸಿದ್ದೇನೆ. ವನಿತಾ ಕ್ರಿಕೆಟ್‌ ಬೆಳವಣಿಗೆ ಹಾಗೂ ಆಕರ್ಷಣೆಯ ನಿಟ್ಟಿನಲ್ಲಿ ಇಂಥ ಬದಲಾವಣೆ ತರಬೇಕೆಂದು ಸೂಚಿಸ ಲಾಗಿದೆ. ಆದರೆ ವೈಯಕ್ತಿಕವಾಗಿ ಹೇಳಬೇ ಕೆಂದರೆ, ಇವೆಲ್ಲವೂ ಅತಿಯಾಗಿವೆ…’ ಎಂಬುದಾಗಿ ಇಂಡಿಯನ್‌ ಏರ್‌ ಫೋರ್ಸ್‌ನಲ್ಲಿ ಆಫೀಸರ್‌ ಆಗಿ ಕರ್ತವ್ಯ ನಿಭಾಯಿಸುತ್ತಿರುವ 31ರ ಹರೆಯದ ಶಿಖಾ ಪಾಂಡೆ ಹೇಳಿದರು.

“ಒಲಂಪಿಕ್ಸ್‌ನಲ್ಲಿ ವನಿತಾ ಸ್ಪ್ರಿಂಟರ್ 100 ಮೀ. ರೇಸ್‌ ವೇಳೆ ಕೇವಲ 80 ಮೀ. ಓಡಿ ಪದಕವನ್ನೇನೂ ಗೆಲ್ಲುವುದಿಲ್ಲ. ಅವರೂ ಪುರುಷರಂತೆ 100 ಮೀ. ದೂರವನ್ನೇ ಕ್ರಮಿಸಬೇಕು. ಹೀಗಿರುವಾಗ ವನಿತಾ ಕ್ರಿಕೆಟ್‌ನಲ್ಲಿ ಬದಲಾವಣೆ ತರುವ ಉದ್ದೇಶ ಅರ್ಥವಾಗುತ್ತಿಲ್ಲ…’ ಎಂದರು.

“ದಯವಿಟ್ಟು ಬೌಂಡರಿ ಅಂತರವನ್ನು ಕಡಿಮೆ ಮಾಡಬೇಡಿ. ವನಿತೆಯರಲ್ಲೂ ಈಗ ಸಾಕಷ್ಟು ಮಂದಿ ಪವರ್‌ ಹಿಟ್ಟರ್ ಇದ್ದಾರೆ. ಇವರ ಸಾಮರ್ಥ್ಯವನ್ನೊಮ್ಮೆ ನೋಡಿ. ಇದು ಕೇವಲ ಆರಂಭ ಮಾತ್ರ. ನಾವು ಇನ್ನಷ್ಟು ಸುಧಾರಿತ, ರೋಚಕ ಪ್ರದರ್ಶನ ನೀಡಲಿದ್ದೇವೆ. ಅಲ್ಲಿಯ ತನಕ ದಯವಿಟ್ಟು ತಾಳ್ಮೆಯಿಂದಿರಿ…’ ಎಂದಿದ್ದಾರೆ ಶಿಖಾ ಪಾಂಡೆ.

ತಂತ್ರಜ್ಞಾನಗಳೇಕಿಲ್ಲ?
“ವನಿತಾ ಕ್ರಿಕೆಟ್‌ನಲ್ಲೇಕೆ ಡಿಆರ್‌ಎಸ್‌, ಸ್ನಿಕೊ, ಹಾಟ್‌ಸ್ಪಾಟ್‌ ಮೊದಲಾದ ತಂತ್ರ ಜ್ಞಾನಗಳನ್ನು ಇನ್ನೂ ಸಮರ್ಪಕವಾಗಿ ಜಾರಿಗೆ ತಂದಿಲ್ಲ? ನಾವು ಆಡುವ ಎಲ್ಲ ಪಂದ್ಯಗಳನ್ನೇಕೆ ನೇರ ಪ್ರಸಾರ ಮಾಡುವುದಿಲ್ಲ? ಇವುಗಳಿಂದಲೂ ವನಿತಾ ಕ್ರಿಕೆಟನ್ನು ಜನಪ್ರಿಯಗೊಳಿಸಲು ಸಾಧ್ಯವಿಲ್ಲವೇ?’ ಎಂದು ಶಿಖಾ ಪಾಂಡೆ ಪ್ರಶ್ನೆಗಳ ಸುರಿಮಳೆಗೈದರು.

ವಿಶ್ವಕಪ್‌ ಫೈನಲ್‌ ಒಂದೇ ಸಾಕು…
“ಎಂಸಿಜಿಯಲ್ಲಿ ಕಳೆದ ಮಾ. 8ರಂದು ನಡೆದ ಭಾರತ-ಆಸ್ಟ್ರೇಲಿಯ ನಡುವಿನ ಟಿ20 ವಿಶ್ವಕಪ್‌ ಫೈನಲ್‌ಗೆ 86 ಸಾವಿರದಷ್ಟು ವೀಕ್ಷಕರು ಸಾಕ್ಷಿಯಾಗಿದ್ದಾರೆ, ಈ ಪಂದ್ಯವನ್ನು ಲಕ್ಷಾಂತರ ಮಂದಿ ಟೆಲಿವಿಷನ್‌ನಲ್ಲಿ ವೀಕ್ಷಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ? ನಮ್ಮ ಆಟದಲ್ಲೇನೋ ವಿಶೇಷವಿದೆ ಎಂಬುದು ಇದರರ್ಥವಲ್ಲವೇ…’ ಎಂದು ಶಿಖಾ ಪಾಂಡೆ ಕೇಳಿದರು.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.