ಸೋನಿಯಾ ಗಾಂಧಿಯ ಮೇಲೆ ಆಣೆ ಮಾಡುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಸವಾಲು
ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?
Team Udayavani, Apr 21, 2022, 3:46 PM IST
ಬೆಂಗಳೂರು : ‘ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ!,ಆಣೆರಾಮಯ್ಯ ‘ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟ್ವೀಟರ್ ನಲ್ಲಿ ಬಿಜೆಪಿ ತಿವಿದಿದೆ.
”ಹಿಂದೂ ಧಾರ್ಮಿಕ ಆಚರಣೆಗಳನ್ನು ಮೌಢ್ಯದ ಸಾಲಿಗೆ ಸೇರಿಸಲು ಹೊರಟಿದ್ದ ಸಿದ್ದರಾಮಯ್ಯ ಅವರಿಗೆ ಈಗ ಇದ್ದಕ್ಕಿದ್ದಂತೆ ಆಣೆ ಪ್ರಮಾಣದ ಬಗ್ಗೆ ನಂಬಿಕೆ ಮೂಡಿದ್ದು ಸ್ವಾಗತಾರ್ಹ.ಯೌವನದಲ್ಲಿ ಮಾಡಿದ ತಪ್ಪುಗಳಿಗೆ ವೃದ್ಧಾಪ್ಯದಲ್ಲಿ ಪಶ್ಚಾತಾಪ ಪಟ್ಟರೆ ತಪ್ಪೇನಿಲ್ಲ! ಆದರೆ ಆಣೆರಾಮಯ್ಯ ಅವರು ಇದನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಅಪಾಯವಿದೆ’ ಎಂದು ವ್ಯಂಗ್ಯವಾಡಿದೆ.
‘ಸಿದ್ದರಾಮಯ್ಯ ಅವರು ತಮ್ಮ ಧಾರ್ಮಿಕ ಹಕ್ಕಿಗಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನೇ ಬಳಸಿಕೊಳ್ಳುತ್ತಿರುವುದರ ಮರ್ಮವೇನು? ಮಾನ್ಯ ಆಣೆರಾಮಯ್ಯ ಅವರೇ, ಆಣೆ – ಪ್ರಮಾಣದ ಮೂಲಕ ಹಳೆಯ ಗುರುವಿನ ತಲೆಯ ಮೇಲೆ ಕೈ ಇಡಲು ಹೊರಟಿದ್ದು ಸಮಂಜಸವೇ?’ ಎಂದು ಪ್ರಶ್ನೆ ಮಾಡಿದೆ.
‘ಮಾನ್ಯ ಆಣೆರಾಮಯ್ಯ ಅವರೇ, ಬೇರೆಯವರ ರಾಜಕೀಯ ನಿರ್ಧಾರದ ಬಗ್ಗೆ ಆಣೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕಿಂತ ನಿಮ್ಮ ಸ್ವಂತಿಕೆ ಪಣಕ್ಕಿಡಿ. ಬಾದಾಮಿ ಕ್ಷೇತ್ರದಿಂದ ವಲಸೆ ಹೋಗುವುದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡುವಿರಾ? ಅಥವಾ ಹಿಂದೂ ದೇವರ ಮೇಲೆ ಅಸಹನೆಯಿದ್ದರೆ ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?ಪ್ರತಿ ಬಾರಿ ಚುನಾವಣೆ ಬಂದಾಗಲೂ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸುವ ಆಣೆ ರಾಮಯ್ಯ ಅವರು ಈ ಬಾರಿಯಾದರೂ ಒಂದು ಗಟ್ಟಿ ಆಣೆ-ಪ್ರಮಾಣ ಮಾಡಲಿ. ಆ ಪ್ರಮಾಣಕ್ಕಾಗಿ ಬೇರೆಯವರ ತಂದೆ-ತಾಯಿಯನ್ನು ಆಯ್ಕೆ ಮಾಡಿಕೊಳ್ಳುವ ಬದಲು ಅಧಿನಾಯಕಿ ಸೋನಿಯಾ ಗಾಂಧಿಯ ಅವರ ಮೇಲೆ ಆಣೆ ಮಾಡುವ ಧೈರ್ಯ ತೋರುವರೇ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು
Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !
Banda; ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ
Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ