ಗಣಿಗಾರಿಕೆ ಸ್ಫೋಟ: ಇಬ್ಬರ ಸಾವು ಮತ್ತೂಬ್ಬನ ಸ್ಥಿತಿ ಗಂಭೀರ
Team Udayavani, Apr 5, 2021, 6:50 AM IST
ಹೊಳೆನರಸೀಪುರ : ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಡೆದ ಗಣಿ ಸ್ಫೋಟ ಪ್ರಕರಣಗಳು ಹಸುರಾಗಿರುವಾಗಲೇ ಹಾಸನ ಜಿಲ್ಲೆಯಲ್ಲೂ ಇಂಥದ್ದೇ ದುರಂತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಚಾಕೇನಹಳ್ಳಿಕಟ್ಟೆ ಗ್ರಾಮದಲ್ಲಿ ರವಿವಾರ ಅಪರಾಹ್ನ ಕಲ್ಲು ಗಣಿಗಾರಿಕೆ ಸಾಮಗ್ರಿಗಳು ಸ್ಫೋಟಗೊಂಡು ಇಬ್ಬರು ಜೀವ ಕಳೆದುಕೊಂಡರೆ, ಮತ್ತೂಬ್ಬನ ಸ್ಥಿತಿ ಗಂಭೀರವಾಗಿದೆ.
ಸಂಪತ್ ಎಂಬಾತ ಸ್ಥಳದಲ್ಲೇ ಮೃತಪಟ್ಟರೆ, ನಟರಾಜ್ ಆಸ್ಪತ್ರೆಗೆ ಕರೆದೊಯ್ಯುವಾಗ ಅಸುನೀಗಿದ್ದಾನೆ. ಮತ್ತೂಬ್ಬ ಗಾಯಾಳುವನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಅನ್ಲೋಡ್ ವೇಳೆ ಸ್ಫೋಟ
ಸಿ.ಎಚ್. ನಾಗೇಶ್ ಎಂಬವರು ಕಲ್ಲು ಗಣಿಗಾರಿಕೆ ಸ್ಫೋಟಕಗಳ ಸಂಗ್ರಹ ಮತ್ತು ಮಾರಾಟಕ್ಕೆ ಪರವಾನಗಿ ಪಡೆದಿದ್ದು, ಚಂದಾಪುರ ಗ್ರಾಮದ ಬಳಿ ಜಿಲೆಟಿನ್, ಎಲೆಕ್ಟ್ರಾನಿಕ್ ಡಿಟೋನೇಟರ್ ಮತ್ತಿತರ ಸ್ಫೋಟಕಗಳ ಸಂಗ್ರಹಕ್ಕೆ ಗೋದಾಮು ನಿರ್ಮಿಸಿದ್ದರು. ರವಿವಾರ ಅಪರಾಹ್ನ 3.50ರ ಸಮಯದಲ್ಲಿ ವಾಹನದಿಂದ ಡಿಟೊನೇಟರ್ ಬಾಕ್ಸ್ಗಳನ್ನು ಇಳಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸಂಪತ್ನ ಮೃತದೇಹ ಸುಮಾರು 300 ಮೀ. ದೂರಕ್ಕೆ ಚಿಮ್ಮಿ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPCC: ಮೋದಿ, ರಾಜನಾಥ್ಸಿಂಗ್ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ