ಹೆಸರಿಗೆ ಮಾತ್ರ ಹೈಟೆಕ್‌; ಇರೋದು ಓಬಿರಾಯನ ಕಾಲದ ವ್ಯವಸ್ಥೆ


Team Udayavani, Mar 24, 2021, 3:20 AM IST

ಹೆಸರಿಗೆ ಮಾತ್ರ ಹೈಟೆಕ್‌; ಇರೋದು ಓಬಿರಾಯನ ಕಾಲದ ವ್ಯವಸ್ಥೆ

ಬೈಂದೂರು: ತಾಲೂಕು ಕೇಂದ್ರವಾದ ಬೈಂದೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದೊಂದು ತಿಂಗಳಿಂದ ತಾಂತ್ರಿಕ ಸಮಸ್ಯೆಯಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಹೆಸರಿಗೆ ಮಾತ್ರ ಹೈಟೆಕ್‌ ಆಡಳಿತ, ಕಚೇರಿಯಲ್ಲಿ ಮಾತ್ರ ಓಬಿರಾಯನ ಕಾಲದ
ವ್ಯವಸ್ಥೆ ಇದೆ ಎನ್ನುವುದು ಸಾಮಾನ್ಯ ಜನರ ಅಳಲಾಗಿದೆ.

ನಿರಂತರ ಕೈ ಕೊಡುತ್ತಿರುವ ಸರ್ವರ್‌
ಬೈಂದೂರಿನ ಜನರ ಪಾಲಿಗೆ ನೋಂದಣಿ ಎನ್ನುವುದು ಗಗನ ಕುಸುಮದಂತೆ ಭಾಸವಾಗಿದೆ. ಬೆಂಗಳೂರಿಗೆ ತೆರಳಿಯಾದರೂ ಕಚೇರಿ ಕೆಲಸ ಮಾಡಿ ಬರಬಹುದು. ಆದರೆ ಬೈಂದೂರಿನ ಕಚೇರಿಗಳಲ್ಲಿ ಸಣ್ಣ ಕೆಲಸವೂ ಆಗುತ್ತಿಲ್ಲ. ತಾಲೂಕು ಕೇಂದ್ರದ ಪ್ರಮುಖ ನೋಂದಣಿ ಕಚೇರಿಯಲ್ಲಿ ಸರ್ವರ್‌ ಇದ್ದರೆ ಕಂಪ್ಯೂಟರ್‌ ಸರಿ ಇರುವು ದಿಲ್ಲ, ಕಂಪ್ಯೂಟರ್‌ ಸರಿ ಇದ್ದರೆ ಸರ್ವರ್‌ ಸಮಸ್ಯೆ. ಒಟ್ಟಾರೆಯಾಗಿ ಸಾಲದ ನೋಂದಣಿ, ಬ್ಯಾಂಕ್‌ ವ್ಯವಹಾರ, ಸಾಲುಪಟ್ಟಿ, ಭೂಮಿ ನೋಂದಣಿ ಸೇರಿದಂತೆ ಹತ್ತಾರು ವ್ಯವಹಾರಗಳಿಗೆ ನೂರಾರು ಜನರು ಕಳೆದ ಒಂದು ತಿಂಗಳಿಂದ ಬೈಂದೂರಿನ ಕಚೇರಿಗೆ ಅಲೆಯುವಂತಾಗಿದೆ.

ನಿಗದಿಪಡಿಸಿದ ನೋಂದಣಿಗಳು ಬಾಕಿ
ಕಳೆದ ಬಾರಿ ರಾಜ್ಯ ವ್ಯಾಪ್ತಿ ನೋಂದಣಿ ಸಮಸ್ಯೆ ಇರುವುದನ್ನು ಸರಿಪಡಿಸಿದ ಬಳಿಕ ಸೋಮವಾರ ಕಡತವೊಂದು ಕಂಪ್ಯೂಟರ್‌ನಲ್ಲಿ ಬಾಕಿಯಾದ ಹಿನ್ನೆಲೆಯಲ್ಲಿ ನಿಗದಿಪಡಿಸಿದ ನೋಂದಣಿಗಳು ಬಾಕಿ ಉಳಿದು ಬಿಟ್ಟಿದೆ. ಕರಾವಳಿ ಭಾಗದಲ್ಲಿ ಒಂದು ಕುಟುಂಬದಲ್ಲಿ ನೂರಾರು ಸದಸ್ಯರಿರುತ್ತಾರೆ.ಜಾಗ ವಿಕ್ರಯಿಸುವಾಗ ಎಲ್ಲ ಸದಸ್ಯರ ಸಹಿ ಬೇಕಾಗಿರುವುದರಿಂದ ವಯೋವೃದ್ಧರನ್ನು ಕೂಡ ಮುಂಚಿತವಾಗಿ ಕಚೇರಿಗೆ ಕರೆ ತಂದು ಕುಳ್ಳಿರಿಸಿ ಕಾಯುವುದು ನಿತ್ಯ ಕತೆ ಯಾಗಿದೆ. ಅದರಲ್ಲೂ ನೋಂದಣಿ ಕಚೇರಿಯಲ್ಲಿ ಮೂಲ ಸೌಕರ್ಯಗಳಿಲ್ಲದೆ ಮಹಿಳೆಯರು, ಹಿರಿಯರು ಫ‌ಜೀತಿ ಪಡುವಂತಾಗಿದೆ. ದೂರದ ಊರಿನಿಂದ ನೋಂದಣಿಗಾಗಿ ಒಂದು ದಿನದ ಮಟ್ಟಿಗೆ ಬಂದವರ ಪರಿಸ್ಥಿತಿ ಹೇಳತೀರದಾಗಿದೆ.

ತಾಲೂಕು ಕಚೇರಿಯಲ್ಲಿ ಸಿಬಂದಿಯಿಲ್ಲ
ನೋಂದಣಿ ಕಚೇರಿ ಪರಿಸ್ಥಿತಿ ಈ ರೀತಿಯಾದರೆ ಇನ್ನು ತಾಲೂಕು ಕಚೇರಿ ಅವ್ಯವಸ್ಥೆ ಹೇಳತೀರದಾಗಿದೆ. ಕಳೆದ ಹಲವು ದಿನಗಳಿಂದ ಹರತಾಳ ನಡೆಸುವ ಸರ್ವೇ ಸಿಬಂದಿಯಿಂದಾಗಿ ತಟಸ್ಥವಾದರೆ, ಪ್ರಮುಖ ಕಚೇರಿಯಲ್ಲಿ ಸಿಬಂದಿ ಕೊರತೆಯಿಂದ ಇರುವ ಮೂರ್‍ನಾಲ್ಕು ಸಿಬಂದಿ ಅಧಿಕ ಒತ್ತಡದ ಕೆಲಸ ನಿರ್ವಹಿಸುವಂತಾಗಿದೆ. ಈ ಕುರಿತು ಸುದಿನ ಹಿಂದೆ ಕೂಡ ವರದಿ ಮಾಡಿತ್ತು. ಇದುವರೆಗೆ ಬೈಂದೂರಿನಲ್ಲಿ ಖಾಯಂ ತಹಶೀಲ್ದಾರರು ಕೂಡ ಇಲ್ಲ, ಕೆಲಸದ ಒತ್ತಡದಿಂದ ತಾಲೂಕು ಕಚೇರಿ ಸಿಬಂದಿಯೋರ್ವ ಹೃದಯಾಘಾತ ಉಂಟಾಗಿ ಆಸ್ಪತ್ರೆ ಸೇರಿರುವ ಘಟನೆ ಕೂಡ ನಡೆದಿದೆ. ಆದರೂ ಸಹ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ.
ಒಟ್ಟಾರೆಯಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಫಾಲೋಅಫ್‌ ಕೊರತೆಯಿಂದ ತಾಲೂಕು ಕೇಂದ್ರದ ಆಡಳಿತ ವ್ಯವಸ್ಥೆ ಹಳಿ ತಪ್ಪಿರುವುದು ಬೈಂದೂರಿನ ಭವಿಷ್ಯದ ಬೆಳವಣಿಗೆಗೆ ಹೊಡೆತ ನೀಡುವು ದರಲ್ಲಿ ಎರಡು ಮಾತಿಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.

ತಾತ್ಕಾಲಿಕ ತಾಂತ್ರಿಕ ಸಮಸ್ಯೆ
ಬೈಂದೂರು ಕಚೇರಿಯಲ್ಲಿ ತಾತ್ಕಾಲಿಕ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ನೋಂದಣಿ ವಿಳಂಬವಾಗಿದೆ. ಕಳೆದ ವಾರ ಸರ್ವರ್‌ ಸಮಸ್ಯೆ ರಾಜ್ಯದ ಎಲ್ಲ ಕಡೆ ಉಂಟಾಗಿದ್ದು ಪ್ರಸ್ತುತ ಕಂಪ್ಯೂಟರ್‌ ಸಮಸ್ಯೆ ಸರಿಪಡಿಲಾಗುವುದು.ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ನೀಡಲಾಗುವುದು.
-ಮಧು ಸೂ ದನ್‌,ಉಪ ನೋಂದಣಾಧಿಕಾರಿ ಬೈಂದೂರು

– ಅರುಣ್‌ ಕುಮಾರ್‌ ಶಿರೂರು

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.