ಕೇಶವ ಕೃಪ ನಂಬಿ ಹೋದರೆ ಅಲ್ಲೂ ಇಲ್ಲ,ಇಲ್ಲೂ ಇಲ್ಲ : ಸಿ.ಎಂ.ಇಬ್ರಾಹಿಂ ಲೇವಡಿ
Team Udayavani, Dec 20, 2021, 11:24 AM IST
ಬೆಳಗಾವಿ : ಸಿಎಂ ಬಸವರಾಜ್ ಬೊಮ್ಮಾಯಿ ಅವರ ಭಾವುಕ ಭಾಷಣಕ್ಕೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದ್ದು, ಇದು ಮುಂದೆ ಜಾಗ ಖಾಲಿಮಾಡುವ ಸೂಚನೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಶಾಶ್ವತವಲ್ಲ ಅಂತ ಹೇಳ್ತಾರೆ, ಜೀವನವೇ ಶಾಶ್ವತವಲ್ಲ, ಕುರ್ಚಿ ಯಾವಾಗ ಶಾಶ್ವತ ಹೇಳಿ ಎಂದರು.
”ನೋಡಿ ಬಸವ ಕೃಪದವರು ಬಸವಕೃಪದಲ್ಲೇ ಇರಿ.ಕೇಶವ ಕೃಪ ನಂಬಿ ಹೋದರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ನಾ ಘರ್ ಕಾ, ನಾ ಘಾಟ್ ಕಾ, ಬಸ್ ಸ್ಟಾಂಡ್ ಕಾ… ಆಗುತ್ತದೆ’ ಎಂದು ಎಂದಿನ ತನ್ನ ಶೈಲಿಯಲ್ಲಿ ಲೇವಡಿ ಮಾಡಿದರು.