ಹೊಟ್ಟೆಗೆ ಏನು ತಿನ್ನುತ್ತಿಯಾ : ಕಸ ಎಸೆದವನಿಗೆ ಸಿ.ಟಿ.ರವಿ ತರಾಟೆ
Team Udayavani, Dec 27, 2021, 6:16 PM IST
ಚಿಕ್ಕಮಗಳೂರು : ರಸ್ತೆ ಬದಿಯ ಹಳ್ಳಕ್ಕೆ ಕಸ ಎಸೆದ ಯುವಕನಿಗೆ ಶಾಸಕ ಸಿ.ಟಿ.ರವಿ ಅವರು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆ ಉಪ್ಪಳ್ಳಿ ಚಿತಾಗಾರ ಸಮೀಪದ ಹಳ್ಳಕ್ಕೆ ಕಸ ಎಸೆದ ಯುವಕನನ್ನ ಮತಗಟ್ಟೆಗೆ ತೆರಳುವ ಸಮಯದಲ್ಲಿ ನೋಡಿದ ಸಿ.ಟಿ.ರವಿ ಅವರು ಕಾರ್ ನಿಂದ ಇಳಿದು ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡರು , ಹೊಟ್ಟೆಗೆ ಏನು ತಿನ್ನುತ್ತಿ, ನೀನು ಯಾರ ಮಗ , ಇನ್ನೊಮ್ಮೆ ಕಸ ಎಸೆದದ್ದು ನೋಡಿದರೆ.. ಎಂದು ತರಾಟೆಗೆ ತೆಗೆದುಕೊಂಡರು.
ಯಗಚಿ ನದಿಗೆ ಸೇರುವ ಹಳ್ಳವಾಗಿದ್ದು, ಇಲ್ಲಿ ಭಾರಿ ಪ್ರಮಾಣದಲ್ಲಿ ಕಸ ಎಸೆಯುವುದು ಕೆಲವರಿಗೆ ಚಾಳಿಯಾಗಿ ಬಿಟ್ಟಿದೆ.