ಬ್ಯಾಂಕ್ ವಂಚನೆ ಪ್ರಕರಣ : ಟ್ರಾನ್ಸ್ಸಿಟಿ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ
Team Udayavani, Dec 19, 2020, 9:03 PM IST
ಹೈದ್ರಾಬಾದ್: 7,926 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಟಿಡಿಪಿ ನಾಯಕ ರಾಯಪಾಟಿ ಸಾಂಬಶಿವ ರಾವ್ ಅವರ ಹೈದ್ರಾಬಾದ್ ಮೂಲದ ನಿರ್ಮಾಣ ಕಂಪನಿ ಟ್ರಾನ್ಸ್ಸ್ಟೋರಿ ಲಿಮಿಟೆಡ್ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶನಿವಾರ ಸಿಬಿಐ ತನಿಖೆ ಆರಂಭಿಸಿದೆ. ಈ ವಿಚಾರದಲ್ಲಿ ಸಾಲದಾತ ಬ್ಯಾಂಕ್ಗಳ ನೇತೃತ್ವ ವಹಿಸಿದ್ದ ಕೆನರಾ ಬ್ಯಾಂಕ್ ಕಂಪನಿಯು ಇತ್ತೀಚೆಗೆ ಎಫ್ಐಆರ್ ದಾಖಲಿಸಿತ್ತು.
ಬ್ಯಾಂಕ್ನ ಪ್ರಕಾರ, ಆರೋಪಿಗಳು ಖಾತೆ ಪುಸ್ತಕಗಳು, ಸ್ಟಾಕ್ ಸ್ಟೇಟ್ಮೆಂಟ್ಗಳ ಜತೆಗೆ, ಬ್ಯಾಲೆನ್ಸ್ ಶೀಟ್ಗಳನ್ನು ತಿರುಚಿದ್ದಷ್ಟೇ ಅಲ್ಲದೇ, ಹಣವನ್ನು ಅನ್ಯ ಕಾರಣಗಳಿಗೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಟ್ರಾನ್ಸ್ಸ್ಟೋರಿ ಲಿಮಿಟೆಡ್ನ ಕಚೇರಿ ಹಾಗೂ ಆರೋಪಿಗಳ ನಿವಾಸಗಳಲ್ಲಿ ಹುಡುಕಾಟ ನಡೆಸಿದೆ. ಜತೆಗೆ, ಇದು ನೀರವ್ ಮೋದಿಗಿಂತಲೂ ದೊಡ್ಡ ಹಗರಣ ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ:ಕೊಡವರು ಗೋ ಮಾಂಸ ತಿನ್ನುತ್ತಾರೆಂದು ನಾನು ಹೇಳಲಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್