ಚಾಮರಾಜನಗರ :55 ಹೊಸ ಪ್ರಕರಣ ದೃಢ, ಓರ್ವ ಸಾವು
Team Udayavani, Aug 31, 2020, 6:30 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 55 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 28 ಮಂದಿ ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ನಂಜನಗೂಡು ತಾಲೂಕಿನ ಪಿ.ಮರಳ್ಳಿ ಗ್ರಾಮದ 48 ವರ್ಷದ ವ್ಯಕ್ತಿ ಆ. 19ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2371 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 1828 ಜನರು ಗುಣಮುಖರಾಗಿದ್ದಾರೆ. 496 ಸಕ್ರಿಯ ಪ್ರಕರಣಗಳಿವೆ. 47 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 181 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ.
ಇಂದಿನ ಪ್ರಕರಣಗಳು -55
ಇಂದು ಗುಣಮುಖ -28
ಒಟ್ಟು ಗುಣಮುಖ -1828
ಇಂದಿನ ಸಾವು -01
ಒಟ್ಟು ಸಾವು -47
ಸಕ್ರಿಯ ಪ್ರಕರಣಗಳು -496
ಒಟ್ಟು ಸೋಂಕಿತರು -2371