ಚಮೋಲಿ ದುರಂತಕ್ಕೆ ವಿಕಿರಣ ಕಾರಣ? ರೈನಿ ಗ್ರಾಮಸ್ಥರ ಅನುಮಾನ
Team Udayavani, Feb 10, 2021, 7:10 AM IST
ಡೆಹ್ರಾಡೂನ್/ಜೋಶಿಮಠ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ದುರಂತಕ್ಕೆ 1965ರಲ್ಲಿ ಪತ್ತೆಯಾಗಿದ್ದ ವಿಕಿರಣಶೀಲ ಸಾಧನವೇ ಕಾರಣವಾಗಿರಬಹುದು ಎಂದು ರೈನಿ ಗ್ರಾಮಸ್ಥರು ಈಗ ಸಂಶಯ ವ್ಯಕ್ತಪಡಿಸತೊಡಗಿದ್ದಾರೆ.
ಚೀನದ ಮೇಲೆ ನಿಗಾ ಇರಿಸಲು ಅಮೆರಿಕದ ಸಿಐಎ ಮತ್ತು ಕೇಂದ್ರ ಸರಕಾರದ ಇಂಟೆಲಿಜೆನ್ಸ್ ಬ್ಯೂರೋ ಜಂಟಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದವು. ಅದಕ್ಕಾಗಿ ಕಾಂಚನಜುಂಗಾ ಪರ್ವತದಲ್ಲಿ ವಿಕಿರಣಶೀಲ ಉಪಕರಣವೊಂದನ್ನು ಇರಿಸಲು ತೀರ್ಮಾನಿಸಲಾಗಿತ್ತು. ಪರ್ವತ ಏರಿದ ಜಂಟಿ ತಂಡ ಆ ಉಪಕರಣವನ್ನು ಪರ್ವತದಲ್ಲಿ ಇರಿಸಿ ಬಂದಿತ್ತು.
ಘಟನೆ ಸಂಭವಿಸಿದ ದಿನ ರೈನಿ ಗ್ರಾಮದ ಜನರಿಗೆ ಗಾಳಿಯ ಮೂಲಕ ಕಟು ವಾಸನೆಯ ಅನುಭವ ಉಂಟಾಗಿತ್ತು. ಅದರಿಂದಾಗಿ ಉಸಿರಾಡಲೂ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ವಿಕಿರಣ ಹೊರಸೂಸುವ ವಸ್ತುವೇ ಕಾರಣ ಎಂದಿದ್ದಾರೆ.
31ಕ್ಕೆ ಏರಿಕೆ
ಅಸುನೀಗಿದವರ ಸಂಖ್ಯೆ 31ಕ್ಕೆ ಏರಿದೆ. ತಪೋವನದ ಎನ್ಟಿಪಿಸಿ ಸುರಂಗದಲ್ಲಿ ಮಣ್ಣು, ಕೆಸರನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ತೆಗೆದು ಸಿಲುಕಿರುವವರಿಗಾಗಿ ಶೋಧ ಮುಂದುವರಿದಿದೆ. 2.5 ಕಿ.ಮೀ. ಉದ್ದದ ಸುರಂಗದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ಒಟ್ಟು 175 ಮಂದಿ ನಾಪತ್ತೆಯಾಗಿದ್ದಾರೆ.
ಗ್ರಾಮಗಳಿಗೆ ಪರಿಹಾರ
ಪ್ರವಾಹದಿಂದ ಸಂಪರ್ಕ ಕಡಿದುಕೊಂಡ 13 ಗ್ರಾಮಗಳಿಗೆ ಹೆಲಿಕಾಪ್ಟರ್ ಮೂಲಕ 100ಕ್ಕೂ ಅಧಿಕ ಪಡಿತರ ಕಿಟ್ಗಳನ್ನು ವಿತರಿಸಲಾಗಿದೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹಾನಿಗೆ ಒಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
ಯುದ್ಧದೋಪಾದಿ ರಕ್ಷಣೆ
ಯುದ್ಧದೋಪಾದಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯ ನಡೆಯುತ್ತಿದೆ. 450ಕ್ಕೂ ಅಧಿಕ ಮಂದಿ ಯೋಧರು ರಕ್ಷಣೆಯಲ್ಲಿ ಭಾಗವಹಿಸಿದ್ದಾರೆ ಎಂದು ಸಂಸತ್ನಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?