ಮೂರು ಮಾದರಿಯಲ್ಲೂ ಚಾಂಪಿಯನ್‌: ಭಾರತಕ್ಕೆ ಗರಿ


Team Udayavani, Mar 30, 2021, 6:40 AM IST

ಮೂರು ಮಾದರಿಯಲ್ಲೂ ಚಾಂಪಿಯನ್‌: ಭಾರತಕ್ಕೆ ಗರಿ

ಇಂಗ್ಲೆಂಡ್‌ ತಂಡವನ್ನು ಮೂರೂ ಮಾದರಿಯಲ್ಲಿ ಸೋಲಿಸಿ ಗೆದ್ದು ಬೀಗಿದೆ ವಿರಾಟ್‌ ಕೊಹ್ಲಿ ನೇತೃತ್ವದ ಭಾರತೀಯ ತಂಡ. ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಗೆದ್ದು ಭಾರತಕ್ಕೆ ಬಂದಿದ್ದ ಇಂಗ್ಲೆಂಡ್‌ ತನ್ನ ಗೆಲುವಿನ ಸರಣಿಯನ್ನು ಮುಂದುವರಿಸುತ್ತೇನೆಂಬ ಉಮೇದಿನ ಲ್ಲಿತ್ತು. ಆದರೆ ಕೋಹ್ಲಿ ಪಡೆ ಇಂಗ್ಲೆಂಡ್‌ಗೆ ಮತ್ತೂಮ್ಮೆ ಮುಖಭಂಗ ಮಾಡಿದೆ. ಈ ಹಿಂದೆ ಅಂದರೆ 2016-2017ರ ಪ್ರವಾಸದಲ್ಲಿ ಭಾರತ ಇಂಗ್ಲೆಂಡ್‌ ಅನ್ನು ಎಲ್ಲ ಮೂರೂ ಮಾದರಿಯಲ್ಲೂ ಸೋಲಿಸಿತ್ತು.

ಗಮನಾರ್ಹ ಸಂಗತಿಯೆಂದರೆ, ಈ ಬಾರಿ ಇಂಗ್ಲೆಂಡ್‌ ಕೇವಲ ಕ್ರಿಕೆಟ್‌ ತಂಡವಾಗಿ ಅಷ್ಟೇ ಅಲ್ಲದೇ ವಿಶ್ವಚಾಂಪಿಯನ್ನರು ಎಂಬ ಕಿರೀಟವನ್ನೂ ತಲೆಯ ಮೇಲೆ ಹೊತ್ತು ಬಂದಿತ್ತು. ಬ್ರಿಟನ್‌ನ ಕ್ರಿಕೆಟ್‌ ಪಂಡಿತರು, ಮಾಜಿ ಕ್ರಿಕೆಟರ್‌ಗಳೆಲ್ಲರೂ ಭಾರತವನ್ನು ಇಂಗ್ಲೆಂಡ್‌ ಬಗ್ಗುಬಡಿಯಲಿದೆ ಎನ್ನುತ್ತಲೇ ಬಂದಿದ್ದರು. ಆದರೆ ಭಾರತವೂ ಚಾಂಪಿಯನ್‌ ತಂಡವೇ. ಅದರಲ್ಲೂ ಕೆಲವು ತಿಂಗಳುಗಳ ಹಿಂದೆ ನಡೆದ ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹಲವು ಖ್ಯಾತನಾಮ ಆಟಗಾರ ಅನುಪಸ್ಥಿತಿಯಲ್ಲೇ ಹೊಸ ಆಟಗಾರರೊಂದಿಗೆ ಗಾಬ್ಟಾದಲ್ಲಿ ಗೆಲುವಿನ ಬಾವುಟ ಊರಿ ಬಂದದ್ದನ್ನು ಪರಿಗಣಿಸಿದಾಗ, ಭಾರತವೇ ಮೇಲುಗೈ ಸಾಧಿಸಲಿದೆ ಎನ್ನುವುದು ಖಾತ್ರಿಯಾಗಿತ್ತು.

ಗಮನಾರ್ಹ ಸಂಗತಿಯೆಂದರೆ, 2011ರ ವಿಶ್ವಕಪ್‌ ಗೆಲುವಿನ ಅನಂತರ ಭಾರತ ಇಂಗ್ಲೆಂಡಿನ ಎದುರು ಅನುಭವಿಸಿದ್ದ, ಮುಖ ಭಂಗವನ್ನು ಈಗ 2019ರ ವಿಶ್ವಚಾಂಪಿಯನ್‌ ಇಂಗ್ಲೆಂಡ್‌ ಭಾರತದೆದುರು ಅನುಭವಿಸಿದೆ. ಅಂದು ವಿಶ್ವ ಚಾಂಪಿಯನ್‌ ಆಗಿದ್ದ ಭಾರತ, ಅದೇ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆದ ಏಕದಿನ, ಟಿ20 ಮತ್ತು ಟೆಸ್ಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಂಗ್ಲೆಂಡ್‌ಗೆ ತೆರಳಿದಾಗ, ಭಾರತ ಸುಲಭ ಗೆಲುವು ತನ್ನದಾಗಿಸಿಕೊಳ್ಳಲಿದೆ ಎಂದೇ ಕ್ರಿಕೆಟ್‌ ಪಂಡಿತರು ಭಾವಿಸಿದ್ದರು. ಆದರೆ ಎರಡು ತಿಂಗಳುಗಳ ವರೆಗೆ ನಡೆದ ಈ ಮೂರೂ ಮಾದರಿಯ ಪಂದ್ಯಗಳಲ್ಲೂ ಭಾರತ ಸೋಲುಕಂಡಿತ್ತು. ಸರಿಯಾಗಿ 10 ವರ್ಷಗಳ ಅನಂತರ ಭಾರತ ಸೇಡು ತೀರಿಸಿಕೊಂಡಂತಾಗಿದೆ.

ಈ ಬಾರಿ ಟೆಸ್ಟ್‌ ಸರಣಿ ಆರಂಭವಾಗಿ, ಭಾರತ ಜೈತ್ರಯಾತ್ರೆ ಆರಂಭಿಸುತ್ತಿದ್ದಂತೆಯೇ ಭಾರತದ ಪಿಚ್‌ ಸರಿಯಾಗಿಲ್ಲ ಎನ್ನುವ ತಗಾದೆ ಆರಂಭವಾಯಿತು. ಈ ಬಗ್ಗೆ ಇಂಗ್ಲೆಂಡ್‌ ಆಟಗಾರರೇನೂ ದೂರಲಿಲ್ಲವಾದರೂ, ಅಲ್ಲಿನ ಮಾಧ್ಯಮಗಳು ಮಾಜಿ ಕ್ರಿಕೆಟರ್‌ಗಳು ಈ ಸಂಗತಿಯೇ ತಮ್ಮ ತಂಡದ ಸೋಲಿಗೆ ಕಾರಣ ಎನ್ನುವಂತೆ ವಾದಿಸುತ್ತಾ ಬಂದರು. ಆದರೆ ಟೆಸ್ಟ್‌ ಸರಣಿಯಲ್ಲಿ ಭಾರತದ ಸ್ಪಿನ್ನರ್‌ಗಳು, ಟಿ20, ಏಕದಿನದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು-ಬೌಲರ್‌ಗಳು ಪಾರಮ್ಯ ಮೆರೆದದ್ದೇ ಭಾರತದ ಗೆಲುವಿಗೆ ಕಾರಣ. ಆದರೂ, ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್‌ ತಿರುಗಿ ಬಿದ್ದು, ಕೊನೆಯ ಹಂತದವರೆಗೂ ಹೋರಾಡಿದ ರೀತಿ ಶ್ಲಾಘನೀಯ ವಾದದ್ದು. ಎರಡು ಪ್ರಬಲ ತಂಡಗಳ ನಡುವೆ ಪೈಪೋಟಿ ಹೀಗೆಯೇ ಇರಬೇಕು. ಭಾರತ ಇದೇ ಆಗಸ್ಟ್‌ ತಿಂಗಳಲ್ಲಿ 5
ಪಂದ್ಯಗಳ ಟೆಸ್ಟ್‌ ಸರಣಿ ಎದುರಿಸಲು ಯುಕೆ ಪ್ರವಾಸ ಕೈಗೊಳ್ಳುತ್ತಿದ್ದು, ನಿಸ್ಸಂಶಯವಾಗಿಯೂ ಆ ಸರಣಿಯೂ ರೋಚಕವಾಗಿಯೇ ಇರಲಿದೆ.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.