“ಬ್ರಹ್ಮಪುತ್ರ ಡ್ಯಾಂ’ನಲ್ಲೂ ಚೀನಾ ಡ್ರಾಮಾ! ಯೋಜನೆ ಬಗ್ಗೆ ಆತಂಕ ಬೇಡವೆಂಬ ಸಮಜಾಯಿಷಿ
Team Udayavani, Dec 3, 2020, 9:27 PM IST
ನವದೆಹಲಿ/ಬೀಜಿಂಗ್: ಟಿಬೆಟ್ ಅಂಚಿನಲ್ಲಿ ಬ್ರಹ್ಮಪುತ್ರ ನದಿಗೆ ಅಣೆಕಟ್ಟು ನಿರ್ಮಿಸಿ, ಜಲ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವ ಚೀನಾ, “ಈ ಕುರಿತಾಗಿ ಯಾರಿಗೂ ಆತಂಕ ಬೇಡ’ ಎಂದು ವಿವಾದಕ್ಕೆ ಸಮಜಾಯಿಷಿ ಬಣ್ಣ ಬಳಿದಿದೆ.
“ಬ್ರಹ್ಮಪುತ್ರ ತೀರದ ಭಾರತ, ಬಾಂಗ್ಲಾದೇಶಗಳೊಟ್ಟಿಗೆ ಬೀಜಿಂಗ್ ಉತ್ತಮ ಸಂವಹನ ಇಟ್ಟುಕೊಳ್ಳಲಿದೆ. ಡ್ಯಾಂ ನಿರ್ಮಾಣದ ಯಾರಿಗೂ ಆತಂಕದ ಅಗತ್ಯವಿಲ್ಲ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಹುವಾ ಚುನ್ಯಿಂಗ್ ಗುರುವಾರ ತಿಳಿಸಿದ್ದಾರೆ.
“ಬ್ರಹ್ಮಪುತ್ರ ನದಿಯ ತಗ್ಗಿದ ಪ್ರದೇಶದಲ್ಲಿ ಹೈಡ್ರೋಪವರ್ ಅಭಿವೃದ್ಧಿಪಡಿಸುವುದು ಚೀನಾದ ಕಾನೂನುಬದ್ಧ ಹಕ್ಕು. ಗಡಿಭಾಗದ ನದಿಗಳ ಅಭಿವೃದ್ಧಿ, ನೀರನ್ನು ಬಳಸಿಕೊಳ್ಳುವುದು ನಮ್ಮ ಎಂದಿನ ಹೊಣೆಗಾರಿಕೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
ಭಾರತ ಎಲ್ಲ ನೋಡ್ತಿದೆ…
ಬ್ರಹ್ಮಪುತ್ರ ನದಿ ಕುರಿತಾದ ಇತ್ತೀಚಿನ ಎಲ್ಲ ಬೆಳವಣಿಗೆಗಳನ್ನೂ ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ! ಚೀನಾದ “ಆತಂಕಬೇಡ’ ಎಂಬ ಬಣ್ಣದ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ಕೊಟ್ಟ ತಿರುಗೇಟು ಇದು. “ಕೆಲವು ಮಾಧ್ಯಮಗಳಲ್ಲಿನ ವರದಿಗಳನ್ನು ನಾವು ಅವಲೋಕಿಸಿದ್ದೇವೆ. ಬ್ರಹ್ಮಪುತ್ರ ನದಿ ಕುರಿತಾಗಿ ಟಿಬೆಟ್ನಲ್ಲಿ ಚೀನಾ ನಡೆಸುತ್ತಿರುವ ಎಲ್ಲ ಅಭಿವೃದ್ಧಿ ಯೋಜನೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು ನೆಟ್ಟಿದೆ’ ಎಂದಿದ್ದಾರೆ.
“ಗಡಿನದಿಗಳ ಹಿತ ಕಾಪಾಡಲು ನಾವು ಚೀನಾದೊಂದಿಗೆ ಸಂಪರ್ಕ ಸಾಧಿಸಲಿದ್ದೇವೆ. ನದಿಯ ಮೇಲ್ಭಾಗದ ಪ್ರದೇಶಗಳಲ್ಲಿ ಕೈಗೊಳ್ಳುವ ಯೋಜನೆಗಳಿಂದ ಕೆಳಭಾಗಗಳ ಯಾವುದೇ ಚಟುವಟಿಕೆಗಳಿಗೆ ಹಾನಿಯಾಗಬಾರದು ಎಂದು ಚೀನಾಕ್ಕೆ ಸರ್ಕಾರ ಮನವರಿಕೆ ಮಾಡಲಿದೆ’ ಎಂದೂ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ