ಆಸ್ತಿ ವಿಚಾರಕ್ಕೆ ಘರ್ಷಣೆ: ಗಾಯಾಳು ಸಾವು
Team Udayavani, Mar 6, 2023, 5:29 AM IST
ವಿಟ್ಲ: ವಿಟ್ಲಕಸಬಾ ಗ್ರಾಮದ ದಾಸರಬೆಟ್ಟು ಎಂಬಲ್ಲಿ ಆಸ್ತಿ ವಿಚಾರಕ್ಕೆ ಸಂಬಂ ಧಿಸಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಇಬ್ರಾಹಿಂ (88) ಮೃತಪಟ್ಟಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಸುಲೈಮಾನ್, ಅಬೂಬಕ್ಕರ್, ಹಸೈನಾರ್ ಹಾಗೂ ನಾಸೀರ್ ಆರೋಪಿಗಳು. ಈ ಪೈಕಿ ಸುಲೈಮಾನ್ ಮತ್ತು ನಾಸೀರ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿ ಸಿದ್ದು, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.
ಪ್ರಕರಣದ ವಿವರ
ಇಬ್ರಾಹಿಂ ಮತ್ತು ಅವರ ಅಣ್ಣ ದಿ| ಮಮ್ಮದೆ ಬ್ಯಾರಿ ಅವರ ಮಕ್ಕಳಾದ ಸುಲೈಮಾನ್, ಅಬೂಬಕ್ಕರ್ ಹಾಗೂ ಹಸೈನಾರ್ ಅವರ ನಡುವೆ ಜಮೀನಿಗೆ ಸಂಬಂಧಿಸಿ ಗಲಾಟೆ ನಡೆಯುತ್ತಿತ್ತು. ಒಮ್ಮೆ ರಾಜಿ ಸಂಧಾನ ನಡೆದಿತ್ತಾದರೂ ಮಮ್ಮದೆ ಬ್ಯಾರಿ ಅವರ ಜಮೀನು ನೋಂದಣಿಗೆ ಬಾಕಿ ಇತ್ತು. ಅವರ ಮಕ್ಕಳು ಈ ಬಗ್ಗೆ ತಕರಾರು ಮಾಡುತ್ತಿದ್ದರು. ಫೆ.21ರಂದು ಇಬ್ರಾಹಿಂ ಅವರು ಬೆಳಗ್ಗೆ ತೋಟಕ್ಕೆ ಹೋಗಿದ್ದಾಗ ಸುಲೈಮಾನ್, ಅಬೂಬಕ್ಕರ್, ಹಸೈನಾರ್ ಹಾಗೂ ನೆರೆಯ ನಾಸೀರ್ ಅವರು ಗಲಾಟೆ ನಡೆಸಿದ್ದರು. ಆರೋಪಿಗಳು ತೋಟದಲ್ಲಿದ್ದ ಕಲ್ಲು ಹಾಗೂ ಮರದ ತುಂಡೊಂದನ್ನು ಇಬ್ರಾಹಿಂ ಅವರತ್ತ ಎಸೆದಾಗ ಮರದ ಅವರ ತಲೆಯ ಬಲಭಾಗಕ್ಕೆ ತಾಗಿ ಗಂಭಿರ ಗಾಯಗೊಂಡಿದ್ದರು. ಅವರನ್ನು ಪುತ್ರ ಅಬ್ದುಲ್ ಲತೀಫ್ ಆಸ್ಪತ್ರೆಗೆ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ