ಕರ್ನಾಟಕದಲ್ಲಿ ಎಐಎಂಐಎಂ ಸ್ಪರ್ಧೆ: ಸಿಎಂ ಇಬ್ರಾಹಿಂ ಪ್ರತಿಕ್ರಿಯೆ ಹೀಗಿದೆ
ಭಾರತದಲ್ಲಿ ಯಾವುದೇ ಮುಸ್ಲಿಂ ನಾಯಕನ ಪ್ರತಿಮೆಯನ್ನು ನೋಡಿದ್ದೀರಾ?
Team Udayavani, Nov 13, 2022, 9:19 PM IST
ಬೆಂಗಳೂರು: ”ಎಐಎಂಐಎಂ ಅವರು ಸ್ಪರ್ಧಿಸಲಿ. ಹುಬ್ಬಳ್ಳಿಯಲ್ಲಿ ಟಿಪ್ಪು ಸುಲ್ತಾನ್ ಕಾರ್ಯಕ್ರಮ ನಡೆಸಲು ಎಐಎಂಐಎಂಗೆ ಬಿಜೆಪಿ ಅನುಮತಿ ನೀಡಿದ್ದು ಹೇಗೆ? 90% ಮುಸ್ಲಿಮರು ಜೆಡಿ ಎಸ್ ಗೆ ಸೇರುತ್ತಿದ್ದಾರೆಂದು ತಿಳಿದು ಮುಸ್ಲಿಂ ಮತಗಳನ್ನು ವಿಭಜಿಸಲು ಈ ನಾಟಕ ಆಡುತ್ತಿದ್ದಾರೆ” ಎಂದು ಜೆಡಿ ಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಎ ಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ”ಬೆಂಗಳೂರಿನಲ್ಲಿ ನಡೆದದ್ದು ಕೆಂಪೇಗೌಡರ ಕಾರ್ಯಕ್ರಮವಲ್ಲ, ಅದು ಬಿಜೆಪಿ ಕಾರ್ಯಕ್ರಮ. ಅವರು ರಾಜಕೀಯ ದಿವಾಳಿತನವನ್ನು ಹೊಂದಿದ್ದಾರೆ ಮತ್ತು ಈಗ ಗಿಮಿಕ್ಗಳನ್ನು ಆಡುತ್ತಿದ್ದಾರೆ. ಕನ್ನಡಿಗರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ದೆಹಲಿ ಅಥವಾ ಮುಂಬೈ ಆದೇಶವನ್ನು ಬಯಸುವುದಿಲ್ಲ” ಎಂದರು.
”ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷೀಯ ಚುನಾವಣೆಗೆ ಮತ ಕೇಳಲು ಬಂದರು. ಹೆಚ್.ಡಿ.ದೇವೇಗೌಡರು ಸ್ವಾಗತಿಸಿದರು. ದೇವೇಗೌಡರು ಕರ್ನಾಟಕದ ವಜ್ರ. ತಮ್ಮ ಊರಿನಲ್ಲಿ ಬಿಜೆಪಿ ಮಾಡಿದ್ದು ಅತ್ಯಂತ ದುರದೃಷ್ಟಕರ ಮತ್ತು ಚುನಾವಣೆಯ ಸಮಯದಲ್ಲಿ ಜನರು ಪ್ರತಿಕ್ರಿಯಿಸುತ್ತಾರೆ” ಎಂದರು.
”ಟಿಪ್ಪು ಸುಲ್ತಾನ್ ಅವರ 100 ಅಡಿ ಪ್ರತಿಮೆ ಕುರಿತು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇಸ್ಲಾಂನಲ್ಲಿ ಪ್ರತಿಮೆಗಳ ಸಂಸ್ಕೃತಿ ಇಲ್ಲ. ನೀವು ಭಾರತದಲ್ಲಿ ಯಾವುದೇ ಮುಸ್ಲಿಂ ನಾಯಕನ ಪ್ರತಿಮೆಯನ್ನು ನೋಡಿದ್ದೀರಾ? ನಾವು ಟಿಪ್ಪು ಸುಲ್ತಾನರ ಹೆಸರನ್ನು ಹೊಂದಬಹುದು, ಪ್ರತಿಮೆಯಲ್ಲ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ