ಅತೃಪ್ತರಿಗೆ ಸಿಎಂ ಭೋಜನದ ಸಾಂತ್ವನ : ಗೈರಾದ ಹಲವು ಶಾಸಕರು
Team Udayavani, Feb 3, 2021, 6:30 AM IST
ಬೆಂಗಳೂರು: ಸಚಿವ ಸ್ಥಾನ ಸಿಗದಿರುವುದು, ಸಿಕ್ಕಿರುವ ಖಾತೆಯಲ್ಲಿ ತೃಪ್ತಿ ಹೊಂದದಿರುವುದು ಸಹಿತ ಹಲವು ಕಾರಣಗಳಿಂದ ತನ್ನೊಂದಿಗೆ ಮುನಿಸಿಕೊಂಡಿರುವ ಶಾಸಕರ ವಿಶ್ವಾಸ ಗಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಭೋಜನ ಕೂಟ ಏರ್ಪಡಿಸಿದ್ದು, ಹಲವು ಮಂದಿ ಗೈರಾಗಿದ್ದಾರೆ.
ಅಧಿವೇಶನ ನಡೆಯುತ್ತಿರುವುದ ರಿಂದ ಪಕ್ಷದ ಎಲ್ಲ ಶಾಸಕರು ಬೆಂಗಳೂರಿ ನಲ್ಲಿಯೇ ಇದ್ದ ಕಾರಣ ರಾಜಕೀಯ ಗೊಂದಲ ಮರೆತು ಶಾಸಕರಿಗೆ ವಿಶೇಷ ಭೋಜನ ಏರ್ಪಡಿಸಿದ್ದರು. ಸಿಎಂ ಯಡಿಯೂರಪ್ಪ ಎಲ್ಲ ಶಾಸಕರೊಂದಿಗೆ ರಾಜಕೀಯ ಬಿಟ್ಟು ಉಭಯ ಕುಶಲೋಪರಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರು ಕುಳಿತುಕೊಳ್ಳಲು ದುಂಡು ಮೇಜಿನ ವ್ಯವಸ್ಥೆ ಮಾಡಿದ್ದರಿಂದ ಮುಖ್ಯಮಂತ್ರಿಗಳು ಎಲ್ಲ ಟೇಬಲ್ಗಳಿಗೂ ತೆರಳಿ ಶಾಸಕರೊಂದಿಗೆ ಉಭಯ ಕುಶಲೋಪರಿ ಚರ್ಚಿಸಿದರು ಎಂದು ತಿಳಿದು ಬಂದಿದೆ.
ಗೈರಾದವರು
ಮಹಾಂತೇಶ ದೊಡ್ಡಗೌಡ, ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್ , ಕಳಕಪ್ಪ ಬಂಡಿ, ಅರವಿಂದ ಬೆಲ್ಲದ್, ದಿನಕರ ಶೆಟ್ಟಿ, ಸುನೀಲ್ ನಾಯ್ಕ…, ಸಿ.ಎಂ. ಉದಾಸಿ, ಅರುಣ್ ಕುಮಾರ್, ಸಚಿವ ಆನಂದ್ ಸಿಂಗ್, ಸೋಮಶೇಖರ್ ರೆಡ್ಡಿ, ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಕರುಣಾಕರ ರೆಡ್ಡಿ, ಸತೀಶ್ ರೆಡ್ಡಿ, ಉದಯ ಗರುಡಾಚಾರ್, ಸಚಿವ ಸುರೇಶ್ ಕುಮಾರ್, ಎಂ.ಪಿ. ಕುಮಾರಸ್ವಾಮಿ, ಸಿ.ಟಿ. ರವಿ, ಡಿ.ಎಸ್. ಸುರೇಶ್, ಸಚಿವ ಜೆ.ಸಿ. ಮಾಧುಸ್ವಾಮಿ, ಎಚ್. ನಾಗೇಶ್, ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ