ಶಿರಸಿ: ಕಾಲೇಜು ಹೊರಟಿದ್ದ ಯುವತಿ ಅಪಹರಣ
Team Udayavani, Nov 16, 2021, 10:55 AM IST
ಶಿರಸಿ: ಕಾಲೇಜಿಗೆ ಹೊರಟಿದ್ದ ಯುವತಿಯೋರ್ವಳನ್ನುಕಾರಿನಲ್ಲಿ ಬಂದು ಅಪಹರಿಸಿದ ಘಟನೆ ನಗರದಲ್ಲಿ ನಡೆದಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಬನವಾಸಿ ರಸ್ತೆ ಟಿಪ್ಪು ನಗರ ಕ್ರಾಸ್ ಬಳಿ ಕಾರ್ ನಲ್ಲಿ ಬಂದು ಬಲವಂತವಾಗಿ ಮೂರು ಜನರು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಗ್ರಾಮೀಣ ಠಾಣೆ ಯಲ್ಲಿ ತಾಯಿ ರೇಣುಕಾ ಪರಮೇಶ್ವರ ಮುಕ್ಕಣ್ಣನವರ್ ಪ್ರಕರಣ ದಾಖಲಿಸಿದ್ದಾರೆ.