ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ; ತಾಕತ್ತು ತೋರಿಸುವುದು ಯಾವಾಗ?
Team Udayavani, Sep 12, 2022, 8:45 PM IST
ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಚ್ಚೆ ಹರುಕ ಎಂದು ಟೀಕಿಸಿರುವ ಬಿಜೆಪಿ ಮುಖಂಡ ಸಿ.ಟಿ.ರವಿ ಅವರಿಗೆ ಕಾಂಗ್ರೆಸ್ ಟ್ವೀಟ್ನಲ್ಲಿ ತಿರುಗೇಟು ನೀಡಿದೆ.
ಸಿ.ಟಿ.ರವಿ ಅವರೇ, ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿ, ನಂತರ ಮಾತನಾಡಲು ಬನ್ನಿ ಎಂದು ವಾಗ್ಧಾಳಿ ನಡೆಸಿದೆ.
ಸಿಡಿಗೆ ತಡೆಯಾಜ್ಞೆ ತಂದವರು, ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು, ಸಾಮಾಜಿಕ ಜಾಲತಾಣ ಗಳಲ್ಲಿ ಸಾಲು, ಸಾಲು ವಿಡಿಯೋಗಳು ಹೊರಬಂದಿದ್ದು ಯಾವ ಪಕ್ಷದವರಿಂದ ಎಂದು ಪ್ರಶ್ನೆ ಮಾಡಿ ಕಚ್ಚೆಹರುಕರು ಯಾರು ಎಂಬುವುದು ಇಡೀ ದೇಶಕ್ಕೆ ತಿಳಿದಿದೆ ಎಂದು ಕಾಂಗ್ರೆಸ್ ಕುಟುಕಿದೆ.
ತಾಕತ್ತು ತೋರಿಸುವುದು ಯಾವಾಗ?: ಪಿಎಸ್ಐ ಹಗರಣ ಸಂಬಂಧ ಟ್ವೀಟ್ನಲ್ಲಿ ವಾಗ್ಬಾಣ ಪ್ರಯೋಗಿಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮ್ಮ ತಾಕತ್ತು, ಧಮ್ ತೋರಿಸುವುದು ಯಾವಾಗ ಎಂದು ಪ್ರಶ್ನೆ ಮಾಡಿದೆ.
ಪಿಎಸ್ಐ ಹಗರಣದಲ್ಲಿ ಸರ್ಕಾರಕ್ಕೆ ಬ್ರೋಕರ್ ಆಗಿದ್ದ ಬಸವರಾಜ ದಡೇಸೂರ ಅವರು 15 ಲಕ್ಷ ರೂ.ಪಡೆದ ಸಂಗತಿಯ ಆಡಿಯೋ ನನ್ನದೇ ಎಂದು ಒಪ್ಪಿ ನಂತರ ಆರೋಪಿಸಿದವರನ್ನು ಬೆದರಿಸಿ ಉಲ್ಟಾ ಹೊಡೆದಿದ್ದರು. ಈ ವಿಡಿಯೋದಲ್ಲಿ ಶಾಸಕರ ಬಂಡವಾಳ ಬಯಲಾಗಿದೆ. ಬಸವರಾಜ ಬೊಮ್ಮಾಯಿ ಅವರೇ, ಈ ಸಂಬಂಧ ವಿಚಾರಣೆ ನಡೆಸುವ ತಾಕತ್ತು ತೋರಿಸಿ ಎಂದು ಸವಾಲು ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್ ಶೋ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ