ಕೋವಿಡ್ ಜಾಗೃತಿಗೆ ತುಮಕೂರಿನ ಪೊಲೀಸರಿಂದ ಕಾಲ್ನಡಿಗೆ ಗಸ್ತು
Team Udayavani, Jun 2, 2021, 8:40 PM IST
ತುಮಕೂರು : ಲಾಕ್ ಡೌನ್ ವೇಳೆಯಲ್ಲಿಯೂ ಪೊಲೀಸರ ಕಣ್ಣುತಪ್ಪಿಸಿ ಬೈಕ್ ಗಳಲ್ಲಿ ಅಡ್ಡಾಡುವವರಿಗೆ ಮತ್ತು ಮಾಸ್ಕ್ ಹಾಕಿಕೊಳ್ಳದೇ ತಿರುಗುವವರಿಗೆ ಜಾಗೃತಿ ಮೂಡಿಸಿ ಅಗತ್ಯ ಬಿದ್ದರೆ ದಂಡ ಹಾಕುವ ಪ್ರಕ್ರಿಯೆಗೆ ಜಿಲ್ಲಾ ಪೊಲೀಸರಿಂದ ಕಾಲ್ನಡಿಗೆ ಗಸ್ತಿಗೆ ಚಾಲನೆ ದೊರೆಯಿತು.
ಕೊರೊನಾ ಕಟ್ಟಿಹಾಕಲು ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ.ಆದರೆ ಪೊಲೀಸರಿಗೆ ಒಂದಲ್ಲ ಒಂದು ಸುಳ್ಳು ಹೇಳಿ ಜನ ತಪ್ಪಿಸಿಕೊಳ್ಳುತ್ತಾರೆ. ಇನ್ನು ಮುಂದೆ ತುಮಕೂರು ಜನರ ಸುಳ್ಳು ಹೇಳಲು ಆಗಲ್ಲಾ,.. ಬೀದಿ .. ಗಲ್ಲಿ ಗಳಲ್ಲಿ ಓಡಾಡೋ ಜನರು ಇನ್ನೂ ಮುಂದೆ ಹುಷಾರಾಗಿ ಇರಬೇಕು.ಯಾಕೆ ಅಂದರೆ ಪೊಲೀಸ್ ಕಾಲ್ನಡಿಗೆ ಗಸ್ತು ತಿರುಗುತ್ತಿದ್ದಾರೆ
ಈ ನೂತನ ಪ್ರಯೋಗಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಕೋ.ನಂ.ವಂಸಿ ಕೃಷ್ಣ ಅವರು ಮೆಳೆಕೋಟೆ ರಸ್ತೆಯಿಂದ ಚಾಲನೆ ನೀಡಿದ್ದಾರೆ.
ಜಿಲ್ಲೆ ಯ ಎಲ್ಲಾ ಪೊಲೀಸ್ ಠಾಣೆಗಳಿಂದ ಐದು ಜನರ ತಂಡ ರಚಿಸಿ ಕೋವಿಡ್ 19 ರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಮುನ್ನೆಚ್ಚರಿಕೆ, ಹಾಗೂ ಮಾಸ್ಕ್ ಧರಿಸಿಕೂಳ್ಳದಿರುವವರ ಮೇಲೆ ದಂಡ ಕೂಡ ಹಾಕಲಾಗುತ್ತದೆ.
ಇದನ್ನೂ ಓದಿ :ಯೋಗಿ ಆದಿತ್ಯನಾಥ್ ಬಿಜೆಪಿಯ ಪ್ರಶ್ನಾತೀತ ನಾಯಕ : ಬಿ.ಎಲ್.ಸಂತೋಷ್
ನಗರದ ಪ್ರಮುಖ ರಸ್ತೆ ಗಳಲ್ಲಿ ಚೆಕ್ ಪಾಯಿಂಟ್ ಹಾಕಲಾಗಿದ್ದು ಇಲ್ಲಿ ರಸ್ತೆಯಲ್ಲಿ ವಾಹನಗಳಲ್ಲಿ ಸುಮ್ಮನೆ ತಿರುಗುತ್ತಿರುವ ವಿಚಾರಣೆ ಮತ್ತು ದಂಡ ಹಾಕಲಾಗುತ್ತದೆ, ಆದರೆ ಗಲ್ಲಿ ರಸ್ತೆಯಲ್ಲಿ ಪೋಲೀಸರು ಕಾಲ್ನಡಿಗೆ ಮೂಲಕ ಹೋದರೆ ಸಾರ್ವಜನಿಕರಿಗೆ ಅರಿವುಮೂಡಿಸಬಹುದು ಹಾಗೂ ಪೊಲೀಸ್ ಸಿಬ್ಬಂದಿಗಳು ಕೂಡ ನಡಿಗೆಯಲ್ಲಿ ತೂಡಗಿಸಿಕೂಂಡು ಅವರುಗಳ ಆರೋಗ್ಯ ಕೂಡ ವೃಧ್ದಿಸುತ್ತದೆ .
ಈ ಕಾಲ್ನಡಿಗೆ ಗಸ್ತಿನಲ್ಲಿ ಅಡಿಷನಲ್ ಎಸ್ಪಿ ಟಿ.ಜೆ.ಉದೇಶ, ಹಾಗೂ ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.