ಮೃತಪಟ್ಟು 4 ತಿಂಗಳ ಬಳಿಕ ಕೋವಿಡ್ ಲಸಿಕೆ!
Team Udayavani, Jan 25, 2022, 10:50 AM IST
ಕುಷ್ಟಗಿ: ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ. ತೋಟಮ್ಮ ಕಲಕಬಂಡಿ ನಿಧನ ಹೊಂದಿ 4 ತಿಂಗಳು ಕಳೆದ ಬಳಿಕ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿರುವ ಮೆಸೇಜ್ ಬಂದಿದೆ.
ತೋಟಮ್ಮ ಕಲಕಬಂಡಿ ಪುರಸಭೆ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಕಳೆದ 9ನೇ ಸೆಪ್ಟೇಬರ್ 2021ರಂದು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಅವರ ಪುತ್ರ ಅಮರೇಶ ಕಲಕಬಂಡಿ ಅವರ ಮೊಬೈಲ್ ಗೆ ಎರಡನೇ ಡೋಸ್ ಲಸಿಕೆ ತೋಟಮ್ಮ ಅವರಿಗೆ ಯಶಸ್ವಿಯಾಗಿರುವ ಮೆಸೇಜ್ ಬಂದಿದೆ.
ತೋಟಮ್ಮ ನಿಧನರಾಗಿ ನಾಲ್ಕು ತಿಂಗಳಾಗಿದ್ದು ಲಸಿಕೆ ಹಾಕಿಸಿಕೊಳ್ಳದೇ ಈ ರೀತಿಯ ಮೆಸೇಜ್ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ತೋಟಮ್ಮ ಪುತ್ರ ಅಮರೇಶ ಕಲಕಬಂಡಿ ಅವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿಲ್ಲ ಆದರೆ ಸೋಮವಾರ ಲಸಿಕೆ ಹಾಕಿಸಿಕೊಂಡಿರುವ ಮೆಸೇಜ್ ಬಂದಿರುವುದು ಆರೋಗ್ಯ ಇಲಾಖೆಯ ತಾಂತ್ರಿಕ ಪವಾಡ ಎನ್ನುವಂತಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಈ ರೀತಿ ಮೆಸೇಜ್ ಗಳು ಬಂದರೆ ಹಾಕಿಸಿಕೊಳ್ಳದವರಿಗೆ ವರದಾನವಾಗುವುದರಲ್ಲಿ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದ ಆರೋಗ್ಯ ಇಲಾಖೆ ಈ ರೀತಿಯ ಯಡವಟ್ಟುಗಳನ್ನು ಮಾಡದಂತೆ ಅಮರೇಶ ಕಲಕಬಂಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್