ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 2.31 ಲಕ್ಷ ಮಂದಿಗೆ ಕೋವಿಡ್ ಲಸಿಕೆ : ಸಚಿವ ಕೆ. ಸುಧಾಕರ್
Team Udayavani, Apr 17, 2021, 11:18 PM IST
ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ ಬರೋಬ್ಬರಿ 2.31 ಲಕ್ಷ ಮಂದಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ.
ಈ ಹಿಂದೆ ಒಂದೇ ದಿನ 2.1 ಲಕ್ಷ ಮಂದಿಗೆ ಲಸಿಕೆ ನೀಡಲಾಗಿತ್ತು. ಶನಿವಾರ ದಾಖಲೆಯ 2,31,870 ಮಂದಿ ಲಸಿಕೆ ಪಡೆದಿದ್ದಾರೆ.
ಒಟ್ಟು ಈವರೆಗೂ ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಸೇರಿ ಒಟ್ಟು 67.18 ಲಕ್ಷ ಡೋಸ್ ಲಸಿಕೆ ವಿತರಿಸಲಾಗಿದೆ. ಲಸಿಕೆ ಕೊರತೆ ಹಿನ್ನೆಲೆ ಹೆಚ್ಚುವರಿಗೆ 1.4 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ರಾಜ್ಯಕ್ಕೆ ಬಂದಿದೆ. ಸದ್ಯ 15 ಲಕ್ಷ ಡೋಸ್ ಲಸಿಕೆ ದಾಸ್ತಾನು ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ತುರ್ತು ನಿಗಾದಲ್ಲಿರುವ ಸೋಂಕಿತರಿಗೆ ನೀಡುವ ರೆಮಿಡಿಸಿವಿರ್ ಔಷಧ ಬೇಡಿಕೆ ಇತ್ತು. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ಸುಮಾರು 33 ಆಸ್ಪತ್ರೆಗಳು ರೆಮಿಡಿಸಿವಿರ್ ಔಷಧ ಪೂರೈಕೆಗೆ ಬೇಡಿಕೆ ಇಟ್ಟಿದ್ದು, ಭಾನುವಾರ ಪ್ರತಿ ಆಸ್ಪತ್ರೆಗೆ 100 ವೈಯಲ್ ಗಳಷ್ಟು ಔಷಧ ಸರಬರಾಜು ಮಾಡಲಾಗುವುದು” ಎಂದಿದ್ದಾರೆ.
ಇದನ್ನೂ ಓದಿ :ಕೋವಿಡ್ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗೆ ರಾಜ್ಯ ಸರಕಾರ 566 ಕೋಟಿ ರೂ. ಬಿಡುಗಡೆ
ಇಂದು ಸಂಜೆ 8:30ರ ವೇಳೆಗೆ ರಾಜ್ಯಾದ್ಯಂತ
ಒಟ್ಟು 67,18,709 ಡೋಸ್ ಲಸಿಕೆ ವಿತರಿಸಲಾಗಿದ್ದು ಇಂದು ಒಂದೇ ದಿನ 2,31,870 ಡೋಸ್ ಲಸಿಕೆ ವಿತರಿಸಲಾಗಿದೆ.ಇಂದು ಸಂಜೆ 8 ಗಂಟೆ ವೇಳೆಗೆ ಮತ್ತೊಂದು ಕಂತಿನಲ್ಲಿ ಸುಮಾರು 1.4 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಕರ್ನಾಟಕ ತಲುಪಿದೆ.
— Dr Sudhakar K (@mla_sudhakar) April 17, 2021