ತಲೆಗೆ ಜಾಕ್ ಲಿವರ್ ನಿಂದ ಹೊಡೆದು 40 ಅಡಿ ಆಳಕ್ಕೆ ಎಸೆದರೂ ಬದುಕುಳಿದ ಮಹಿಳೆ : ನಾಲ್ವರ ಬಂಧನ
ಕೊಲೆ ಯತ್ನ : ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ ಪೊಲೀಸರು
Team Udayavani, Sep 19, 2021, 12:55 PM IST
ದಾಂಡೇಲಿ : ಕೊಲೆ ಮಾಡಲು ಪ್ರಯತ್ನಿಸಿದ್ದ ಅಂತರ್ ಜಿಲ್ಲಾ ಆರೋಪಿಗಳನ್ನು 24 ಗಂಟೆಯೊಳಗಡೆ ಬಂಧಿಸಿದ ಘಟನೆ ದಾಂಡೇಲಿ ಗ್ರಾಮೀಣಾ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.
ಘಟನೆಯ ವಿವರ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ವೀರಭದ್ರೇಶ್ವರ ಕೃಷಿ ಕೇಂದ್ರದ ಹತ್ತಿರದ ನಿವಾಸಿ 29 ವರ್ಷ ವಯಸ್ಸಿನ ಗೀತಾ ಇವರು ಅನ್ಯಜಾತಿಯ ಅರ್ಜುನ ಗೌಡಾ ಹೊನ್ನಾಗೌಡ್ರು ಈತನನ್ನು 2016 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ನಂತರದಲ್ಲಿ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ಸೆ:16 ರಂದು ಅರ್ಜುನ ಗೌಡಾ ತನ್ನ ಸಂಬಂಧಿಗಳಾದ ಧಾರವಾಡ ಜಿಲ್ಲೆಯ ಅರಳಿಕಟ್ಟೆ ನಿವಾಸಿ ಬಸವರಾಜ ಗದಿಗೆಪ್ಪಾ ಹೊಸಮನಿ, ಶಿಗ್ಗಾವಿಯ ಮಾರ್ಕೆಟ್ ರಸ್ತೆ ನಿವಾಸಿ ರವಿ ಅಶೋಕ ಬುಳಕ್ಕನವರ, ಶಿಗ್ಗಾವಿ ತಾಲೂಕಿನ ಹಿತ್ಲಮನಿ ನಿವಾಸಿ ಮಂಜುನಾಥ ಬಸವಣ್ಣೆಪ್ಪಾ ಹಿತ್ತಲಮನಿ ಇವರಲ್ಲಿ ತನ್ನ ಹೆಂಡತಿ ಗೀತಾಳನ್ನು ಕೊಲೆ ಮಾಡಿ ಶವವನ್ನು ಬೇರೆ ಕಡೆಗೆ ಹಾಕಿ ಬರಲು ತಿಳಿಸಿದ್ದಾನೆ, ಅದರಂತೆ ಈ ಮೂವರು ಗೀತಾ ಅರವರಿಗೆ ಕರೆ ಮಾಡಿ ಸೆ:16 ರಂದು ಸಂಜೆ 7 ಗಂಟೆಗೆ ಶಿಗ್ಗಾವಿ ಪಟ್ಟಣದ ಹೊರ ವಲಯಕ್ಕೆ ಬರುವಂತೆ ತಿಳಿಸಿದ್ದಾರೆ. ಅದರಂತೆ ಗೀತಾ ಅಲ್ಲಿಗೆ ಬಂದಿದ್ದಾರೆ ಈ ವೇಳೆ ಅವರ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಕಾರಿನ ಜಾಕ್ ಲಿವರ್ ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿ ಬಳಿಕ ಕೆ.ಎ-27, ಎನ್:5562 ಸಂಖ್ಯೆಯ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಶಿಗ್ಗಾವಿಯಿಂದ ಮುಂಡಗೋಡ, ಕಲಘಟಗಿ ಮಾರ್ಗವಾಗಿ ಬಂದು ದಾಂಡೇಲಿಯ ಕರ್ಕಾ ಹಳ್ಳದ ಸೇತುವೆಯ ಮೇಲಿಂದ ಕೆಳಗೆ ಎಸೆದು ಹೋಗಿದ್ದರು.
ಇದನ್ನೂ ಓದಿ :25 ವರ್ಷ ನಂತರ ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ
ಆದರೆ ಸೇತುವೆಯ ಕೆಳಗಡೆ ಬಿದ್ದಿದ್ದ ಗೀತಾ ಅವರು ಅದೇ ದಿನ ರಾತ್ರಿ 12 ಗಂಟೆಗೆ ಹಳ್ಳದಿಂದ ಎದ್ದು ರಸ್ತೆಗೆ ಬಂದು ಸಾರ್ವಜನಿಕರ ಮೂಲಕ ದಾಂಡೇಲಿ ಗ್ರಾಮೀಣ ಠಾಣೆಗೆ ವಿಷಯ ತಿಳಿಸಿದ್ದಾರೆ. ತಕ್ಷಣವೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಗೀತಾರವರನ್ನು 108 ವಾಹನದ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಉಪಚಾರವನ್ನು ನೀಡಿ ಅವರಿಂದ ಹೇಳಿಕೆಯನ್ನು ದಾಖಲಿಸಿ, ನಂತರ ಗ್ರಾಮೀಣ ಠಾಣೆಯಲ್ಲಿ ಕಲಂ: 307,323, 324, 364, 341, 109 ಸಹಿತ 34 ಐಪಿಸಿ ಮತ್ತು ಕಲಂ 3(2) (5) ಎಸ್.ಸಿ/ಎಸ್.ಟಿ ಕಾಯ್ದೆ 1989 ಮತ್ತು ಅಮೆಂಡ್ಮೆಂಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣವನ್ನು ದಾಖಲಿಸಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬದ್ರಿನಾಥ್.ಎಸ್ ಅವರುಗಳ ಮಾರ್ಗದರ್ಶನದಲ್ಲಿ ದಾಮಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಗಣೇಶ್.ಕೆ.ಎಲ್ ಅವರ ನೇತೃತ್ವದಲ್ಲಿ ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸೈಗಳಾದ ಯಲ್ಲಾಲಿಂಗ ಕುನ್ನೂರು, ಐ.ಆರ್.ಗಡ್ಡೇಕರ, ಎಎಸೈ ವೆಂಕಟೇಶ ತಗ್ಗಿನ, ಪೊಲೀಸ್ ಸಿಬ್ಬಂದಿಗಳಾದ ಭೀಮಪ್ಪ, ಉಮೇಶ ತುಂಬರಗಿ, ದಯಾನಂದ ಲೋಂಡಿ, ರೋಹಿತ್ ಮತ್ತು ರವಿ ಚೌವ್ಹಾಣ್ ಅವರುಗಳ ವಿಶೇಷ ತಂಡವನ್ನು ರಚಿಸಿ ಆಪಾದಿತರಾದ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕ್ಷೀಪ್ರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಪೊಲೀಸ್ ವರಿಷ್ಠಧಿಕಾರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಂಭೀರ ಗಾಯಗೊಂಡು, ಕಾರಿನ ಡಿಕ್ಕಿಯಲ್ಲಿ ಬಹಳಷ್ಟು ಹೊತ್ತು ಇದ್ದು, ಆನಂತರದಲ್ಲಿ ಸರಿ ಸುಮಾರು 40 ಅಡಿ ಆಳಕ್ಕೆ ಎಸೆದಿದ್ದರೂ ಗೀತಾರವರು ಬದುಕುಳಿದಿದ್ದೇ ಪವಾಡವಾಗಿದೆ. ಸಹಕರಿಸಿದ ಸಾರ್ವಜನಿಕರು ಮತ್ತು ತಡವರಿಯದೇ ಸ್ಪಂದಿಸಿದ ದಾಂಡೇಲಿ ಗ್ರಾಮೀಣ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ