ಕೇರಳ ರಾಜಕೀಯವಾಗಿ ಬದಲಾಗಲು ಈಗ ಸಕಾಲ : ಡಿಸಿಎಂ ಅಶ್ವತ್ಥನಾರಾಯಣ
Team Udayavani, Mar 1, 2021, 11:05 PM IST
ಕೊಚ್ಚಿ: ಕೇರಳದಲ್ಲಿ ರಾಜಕೀಯ ಬದಲಾವಣಿಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದೂ ಅಲ್ಲ. ಕಳೆದ 73 ವರ್ಷಗಳಿಂದ ರಾಜ್ಯವನ್ನು ಕತ್ತಲೆಯಲ್ಲಿ ಇಟ್ಟಿರುವ ಎಲ್ಡಿಎಫ್ ಮತ್ತು ಯುಡಿಎಫ್ ಕೂಟಗಳನ್ನು ತಿರಸ್ಕರಿಸುವ ಸಮಯ ಬಂದಿದೆ ಎಂದು ಕೇರಳದ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪ್ಪುಳದಲ್ಲಿ ಸಂಜೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಎಪ್ಪತ್ತುಮೂರು ವರ್ಷಗಳ ದುರಾಡಳಿತ ಸಾಕು. ಒಬ್ಬಾರಾದ ಮೇಲೋಬ್ಬರು ಕೇರಳವನ್ನು ಕತ್ತಲೆಯಲ್ಲಿಟ್ಟು ಹಾಳು ಮಾಡಿದ್ದು ಸಾಕು. ಇನ್ನಾದರೂ ಹೊಸ ರಾಜಕೀಯ ಶಕ್ತಿ ಉದಯಕ್ಕೆ ಅವಕಾಶ ನೀಡಿ ಎಂದು ಜನತೆಗೆ ಕರೆ ನೀಡಿದರು.
ದೇಶ ಮುಂದೆ ಹೋಗುತ್ತಿದೆ, ಕೇರಳ ಹಿಂದೆ ಬಿದ್ದಿದೆ!:
ಭಾರತ ಇವತ್ತು ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ಯಾರ ಊಹೆಗೂ ನಿಲುಕದಂತೆ ಇಡೀ ದೇಶವೇ ಮುಂದೆ ಹೋಗುತ್ತಿದ್ದರೆ, ಕೇರಳ ಮಾತ್ರ ಹಿಂದೆ ಬಿದ್ದಿದೆ. ಹೂಡಿಕೆಗಳಿಲ್ಲ, ಕೈಗಾರಿಕೆಗಳಿಲ್ಲ, ಉದ್ಯೋಗ ಸೃಷ್ಟಿ ಇಲ್ಲ. ಹೀಗಾದರೆ ಜನರ ಜೀವನ ಮಟ್ಟ ಸುಧಾರಿಸುವುದು ಹೇಗೆ? ಹೊಸತನವನ್ನು ಮೈಗೂಡಿಸಿಕೊಂಡು ಇತರೆ ರಾಜ್ಯಗಳಂತೆ ಪ್ರಗತಿಯತ್ತ ದಾಪುಗಾಲು ಇಡುವುದು ಹೇಗೆ? ಎಂದು ಡಿಸಿಎಂ ಪ್ರಶ್ನಿಸಿದರು.
ಕೇವಲ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅದ್ಭುತಗಳನ್ನೇ ಸೃಷ್ಟಿ ಮಾಡಲಾಗಿದೆ. ಕಳೆದ ಎಪ್ಪತ್ತಮೂರು ವರ್ಷಗಳಲ್ಲಿ ಸಾಧ್ಯವಾಗದ್ದು ಕೇವಲ ಆರು ವರ್ಷಗಳಲ್ಲಿ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಒಮ್ಮೆ ಯೋಚಿಸಿ. ದೇಶಕ್ಕಾಗಿ ಚಿಂತನೆ ಮಾಡುವ ಹಾಗೂ ದೂರದೃಷ್ಟಿಯುಳ್ಳ ಸಮರ್ಥ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಇಡೀ ಜಗತ್ತೇ ಭಾರತದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಕಂಡು ಬೆರಗಾಗಿದೆ ಎಂದು ಡಿಸಿಎಂ ಪ್ರತಿಪಾದಿಸಿದರು.
ಇದನ್ನೂ ಓದಿ:ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ
ಸ್ವಾವಲಂಭನೆಯತ್ತ ಭಾರತ
ಅನೇಕ ಕ್ಷೇತ್ರಗಳಲ್ಲಿ, ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಅನೇಕ ದೇಶಗಳನ್ನು ಅವಲಂಭಿಸಿದ್ದೆವು. ಆದರೆ ಇಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಾವು ಸ್ವಾವಲಂಭನೆ ಸಾಧಿಸಿದ್ದೇವೆ. ನಮಗೆ ಅಗತ್ಯವಿರುವ ಎಲ್ಲ ಉತ್ಪನ್ನಗಳೂ ನಮ್ಮಲ್ಲೇ ತಯಾರಾಗುತ್ತಿವೆ. ಆತ್ಮನಿರ್ಭರ ಭಾರತ ಕಲ್ಪನೆಯಡಿ ಭಾರತ ಸಂಪೂರ್ಣವಾಗಿ ಸ್ವಾವಲಂಭನೆಯತ್ತ ಸಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ಒತ್ತಿ ಹೇಳಿದರು.
ಕೆಲವರು ಭಯೋತ್ಪಾದಕರನ್ನು ಬೆಳೆಸುತ್ತಿದ್ದರು, ಉತ್ತೇಜಿಸುತ್ತಿದ್ದರು. ನಾವು ಅವರನ್ನು ಅವರನ್ನು ನಾಶಪಡಿಸಿದ್ದೇವೆ. ಚೀನಾ ಹಿಂದೆ ದೊಡ್ಡ ಶಕ್ತಿಯಾಗಿತ್ತು, ಈಗಲ್ಲ. ಭಾರತವು ಆ ದೇಶವನ್ನು ಮೀರಿ ಬೆಳೆಯುತ್ತಿದೆ. ನಮ್ಮ ತಾಕತ್ತು ಏನು ಎಂಬುದನ್ನು ಅವರಿಗೆ ತೋರಿಸಿದ್ದೇವೆ. ನಮ್ಮ ದೇಶದ ಒಂದು ಇಂಚು ಭೂಭಾಗವನ್ನೂ ಕಬಳಿಸಲು ಅವರಿಗೆ ಸಾಧ್ಯವಾಗಿಲ್ಲ ಎಂದರೆ ಬಾರತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಊಹೆ ಮಾಡಬಹುದು ಎಂದು ಡಿಸಿಎಂ ನುಡಿದರು.
ಕೇರಳ ಬಿಜೆಪಿಯ ಹಲವಾರು ನಾಯಕರು, ಇಡುಕ್ಕಿ ಜಿಲ್ಲೆಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!
ಬಾಕ್ಸಿಂಗ್ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕಿದ್ದ ವ್ಯಕ್ತಿ ಇಂದು ಆಟೋ ಚಾಲಕ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುತ್ತೆ ವಿಶೇಷ ಪ್ರಸಾದ!
ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ