ವಿದಿಶಾ; ರಕ್ಷಿಸಲು ಹೋದ 30 ಜನರು ಬಾವಿಗೆ ಬಿದ್ದ ಘಟನೆ – ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಈ ಸಂದರ್ಭದಲ್ಲಿ ಮೋಟುಗೋಡೆ ಕುಸಿದು ಅವರೂ ಬಾವಿಪಾಲಾಗಿದ್ದಾರೆ. ದುರದೃಷ್ಟ ಇಷ್ಟಕ್ಕೂ ನಿಲ್ಲಲಿಲ್ಲ.
Team Udayavani, Jul 17, 2021, 9:35 AM IST
ವಿದಿಶಾ: ನೀರು ತರಲು ಹೋಗಿದ್ದ 14 ವರ್ಷದ ಹುಡುಗನೊಬ್ಬ ಗುರುವಾರ ರಾತ್ರಿ ಅನಿರೀಕ್ಷಿತವಾಗಿ ಬಾವಿಗೆ ಬಿದ್ದಿದ್ದಾನೆ. ದುರಂತವೆಂದರೆ ಆತನನ್ನು ರಕ್ಷಿಸಲು ಹೋದಾಗ ಸುಮಾರು 30 ಮಂದಿ ಬಾವಿಗೆ ಬಿದ್ದಿದ್ದಾರೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಲಾಲ್ ಪತರ್ ಎಂಬ ಹಳ್ಳಿಯಲ್ಲಿ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:30 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಿದ ಮಹಾನ್ ಪರಿಸರ ಪ್ರೇಮಿ ಈ ‘ಅಂತರ್ಯಾಮಿ’
ಬಾವಿಗೆ ಬಿದ್ದು ಮೃತಪಟ್ಟ ಕುಟುಂಬ ಸದಸ್ಯರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ ಎಂದು ಶನಿವಾರ (ಜುಲೈ 17) ವರದಿ ತಿಳಿಸಿದೆ.
19 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ದಳ ರಕ್ಷಿಸಿದೆ.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮೃತರ ಕುಟುಂಬವರ್ಗಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಆಗಿದ್ದೇನು?: ಗುರುವಾರ ರಾತ್ರಿ ನೀರು ತರಲು ಹೋಗಿದ್ದ ಹುಡುಗ ಅಚಾನಕ್ಕಾಗಿ ಬಾವಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇನ್ನುಳಿದವರು ಬಾವಿಗೆ ಹಾರಿದ್ದಾರೆ. ಇನ್ನೊಂದಷ್ಟು ಮಂದಿ ಬಾವಿಯ ಮೋಟುಗೋಡೆಯ ಮೇಲೆ ನಿಂತು, ಕೆಳಕ್ಕೆ ಹಾರಿದವರಿಗೆ ರಕ್ಷಣೆ ನೀಡಲು ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮೋಟುಗೋಡೆ ಕುಸಿದು ಅವರೂ ಬಾವಿಪಾಲಾಗಿದ್ದಾರೆ. ದುರದೃಷ್ಟ ಇಷ್ಟಕ್ಕೂ ನಿಲ್ಲಲಿಲ್ಲ. ಇವರನ್ನು ರಕ್ಷಿಸಲೆಂದು ರಕ್ಷಣಾಪಡೆಯೊಂದು ಟ್ರ್ಯಾಕ್ಟರ್ನೊಂದಿಗೆ ತೆರಳಿತ್ತು. ಟ್ರ್ಯಾಕ್ಟರ್ ಕೂಡ ಅದರಲ್ಲಿದ್ದ 4 ಪೊಲೀಸರೊಂದಿಗೆ ಬಾವಿಗೆ ಬಿದ್ದಿದೆ. ಇದರಿಂದ ಮೊದಲೇ ಒಳಗಿದ್ದವರು ಈ ಟ್ರ್ಯಾಕ್ಟರ್ನಡಿ ಸಿಲುಕಿಕೊಳ್ಳುವಂತಾಗಿತ್ತು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು