ಬಡ್ಡಿ ವಿನಾಯಿತಿ: ಸುಪ್ರೀಂ ತೀರ್ಪು ಅನುಷ್ಠಾನದಿಂದ 2 ಸಾವಿರ ಕೋಟಿ ರೂ. ಹೊರೆ
Team Udayavani, Apr 4, 2021, 10:00 PM IST
ನವದೆಹಲಿ: ಬ್ಯಾಂಕ್ಗಳಲ್ಲಿ ಸಾಲ ಮಾಡಿದವರಿಗೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದನ್ನು ಅನುಷ್ಠಾನ ಮಾಡುವುದರಿಂದ 1,800 ಕೋಟಿ ರೂ.ಗಳಿಂದ 2 ಸಾವಿರ ಕೋಟಿ ರೂ.ಗಳ ವರೆಗೆ ಹೆಚ್ಚುವರಿಯಾಗಿ ವಿತ್ತೀಯ ಹೊರೆ ಅನುಭವಿಸಲಿವೆ. ಹೀಗಾಗಿ, ನೆರವು ನೀಡುವಂತೆ ಭಾರತೀಯ ಬ್ಯಾಂಕಿಂಗ್ ಒಕ್ಕೂಟ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಕೊರೊನಾ ಹಿನ್ನೆಲೆಯಲ್ಲಿ 2020ರ ಮಾರ್ಚ್ನಿಂದ ಆಗಸ್ಟ್ ವರೆಗೆ ಸಾಲದ ಕಂತು ಪಾವತಿ ಮಾಡದಂತೆ ಬ್ಯಾಂಕ್ಗಳು ವಿನಾಯಿತಿ ನೀಡಿದ್ದವು. ಬ್ಯಾಂಕಿಂಗ್ ಕ್ಷೇತ್ರದ ಮೂಲಗಳ ಪ್ರಕಾರ ಆರಂಭದಲ್ಲಿ ಶೇ.60 ಮಂದಿ ಗ್ರಾಹಕರು ಸಾಲದ ಕಂತು ಪಾವತಿಸದೇ ಇರುವುದನ್ನು ಆಯ್ಕೆ ಮಾಡಿದ್ದರು. ಲಾಕ್ಡೌನ್ ತೆರವುಗೊಳಿಸಿದ ಬಳಿಕ ಕೇಂದ್ರ ಸರ್ಕಾರ ಪ್ರಕಟಿಸಿದ ಸೌಲಭ್ಯವನ್ನು ಪಡೆಯುವ ಗ್ರಾಹಕರ ಪ್ರಮಾಣ ಶೇ.40ಕ್ಕೆ ಕುಸಿದವು. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳಲ್ಲಿನ ಕಾರ್ಪೊರೇಟ್ ಸಾಲಕ್ಕೆ ಸಂಬಂಧಿಸಿದಂತೆ ವಿನಾಯಿತಿ ಬಯಸಿದ್ದು ಕೇವಲ ಶೇ.25 ಮಂದಿ ಮಾತ್ರ.
ಇದನ್ನೂ ಓದಿ :ಮಹಿಳಾ ಸಹಪಾಠಿಗೆ ಲೈಂಗಿಕ ಕಿರುಕುಳ: ಐಐಟಿ ವಿದ್ಯಾರ್ಥಿ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್