ದಿಲ್ಲಿಯಲ್ಲಿ ಉಷ್ಣದಲೆ : 40.1 ಡಿಗ್ರಿ ಸೆ. ಗರಿಷ್ಠ ತಾಪಮಾನ
Team Udayavani, Mar 30, 2021, 6:55 AM IST
ಹೊಸದಿಲ್ಲಿ : ಹೋಳಿ ಹಬ್ಬದ ದಿನವಾದ ರವಿವಾರ ರಾಜಧಾನಿ ತೀವ್ರ ಉಷ್ಣದ ಅಲೆಗೆ ಸಿಲುಕಿದ್ದು, 40.1 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ)ತಿಳಿಸಿದೆ.
ಇದು ದಿಲ್ಲಿಯಲ್ಲಿ ಕಳೆದ 76 ವರ್ಷಗಳಲ್ಲಿ ದಾಖಲಾದ ಮಾರ್ಚ್ ತಿಂಗಳ ಅತೀ ಗರಿಷ್ಠ ತಾಪಮಾನ ಎಂದು ಐಎಂಡಿ ತಿಳಿಸಿದೆ. ರವಿವಾರ ದಾಖಲಾದ ತಾಪಮಾನವು ವಾಡಿಕೆಗಿಂತ 8 ಡಿಗ್ರಿ ಅಧಿಕ ಎಂದೂ ಅದು ಹೇಳಿದ್ದು, 1945ರ ಮಾ. 31ರಂದು 40.5 ಡಿಗ್ರಿ ಸೆ. ಉಷ್ಣತೆ ದಾಖಲಾಗಿತ್ತು ಎಂದಿದೆ.
ಇದೇ ವೇಳೆ ಪ. ರಾಜಸ್ಥಾನ, ಹಿಮಾಚಲ ಪ್ರದೇಶ, ಪೂರ್ವ ಗುಜರಾತ್, ಸೌರಾಷ್ಟ್ರ, ಕಛ… ಮತ್ತು ಮ.ಪ್ರದೇಶ, ವಿದರ್ಭಗಳ ಕೆಲವು ಭಾಗ ಗಳಲ್ಲಿ ಮಾ. 30ರಂದು ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಕರಾವಳಿಯಲ್ಲಿ ಮಳೆ
ಸೋಮವಾರ ದಕ್ಷಿಣ ಕನ್ನಡದ ಬಹುತೇಕ ಕಡೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ, ಮಾಳ ಮತ್ತಿತರ ಕಡೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಗಾಳಿ, ಸಿಡಿಲು ಸಹಿತ ಸುರಿದ ಮಳೆ ತಂಪೆರೆದಿದೆ. ಬೆಳ್ತಂಗಡಿಯ ಮದ್ದಡ್ಕದಲ್ಲಿ ಭಾರೀ ಗಾಳಿಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಸಂಚಾರಕ್ಕೆ ತೊಡಕಾಯಿತು.
ಸಿಡಿಲು ಬಡಿದು ಯುವಕ ಸಾವು
ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಆಯನೂರಿನಲ್ಲಿ ರವಿವಾರ ಸಂಭವಿಸಿದೆ. ಶಿವಮೊಗ್ಗ ಅಣ್ಣಾನಗರದ ನಿವಾಸಿ ಆದಿಲ್ ಮೃತ ಯುವಕ. ಮಳೆಯಿಂದ ಶುಂಠಿ ರಕ್ಷಿಸಲೆಂದು ಟಾರ್ಪಲ್ ಮುಚ್ಚಲು ಕಣಕ್ಕೆ ತೆರಳಿದ್ದ ಆದಿಲ್ ಸಿಡಿಲಾಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ