ವಜ್ರದ ವ್ಯಾಪಾರಿಯಿಂದ ತುರ್ತು ಪರಿಸ್ಥಿತಿಗೆ ಸೂರತ್ ಗೆ ಹೆಲಿಕಾಪ್ಟರ್ ಕೊಡುಗೆ
ಕುಟುಂಬದವರು ಕೊಟ್ಟ ದುಬಾರಿ ಗಿಫ್ಟ್ ಸಮಾಜಕ್ಕೆ ಕೊಟ್ಟ ಹೃದಯ ಶ್ರೀಮಂತ
Team Udayavani, Feb 4, 2022, 2:38 PM IST
ಅಹಮದಾಬಾದ್: ಪ್ರತಿ ವರ್ಷ ತನ್ನ ಉದ್ಯೋಗಿಗಳಿಗೆ ನೀಡುವ ಭಾರಿ ಬೋನಸ್ ಮತ್ತು ಅದ್ದೂರಿ ಉಡುಗೊರೆಗಳಿಗಾಗಿ ಸುದ್ದಿಯಾಗಿದ್ದ ಸೂರತ್ನ ವಜ್ರದ ವ್ಯಾಪಾರಿ ಇದೀಗ ವೈದ್ಯಕೀಯ ಮತ್ತು ಇತರ ತುರ್ತು ಉಪಯೋಗಕ್ಕಾಗಿ 50 ಕೋಟಿ ರೂಪಾಯಿ ಮೌಲ್ಯದ ಹೊಚ್ಚಹೊಸ ಹೆಲಿಕ್ಯಾಪ್ಟರ್ ಅನ್ನು ಸೂರತ್ ಗೆ ಕೊಡುಗೆಯಾಗಿ ನೀಡಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಾಗಿ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ನಂತರ ಅವರ ಕುಟುಂಬದಿಂದ ಸಜೀವ್ ಧೋಲಾಕಿಯಾ ಅವರಿಗೆ ಆಶ್ಚರ್ಯಕರ ಉಡುಗೊರೆ ಹೆಲಿಕಾಪ್ಟರ್ ನೀಡಲಾಗಿತ್ತು. ಆದರೆ, ಅವರು ಅವರು ಉಡುಗೊರೆಯನ್ನು ಸ್ವಯಂ ಬಳಕೆಗೆ ಬದಲಾಗಿ ಸಾಮಾಜಿಕ ಉದ್ದೇಶಕ್ಕಾಗಿ ದಾನ ಮಾಡಲು ನಿರ್ಧರಿಸಿ ಆದರ್ಶ ಮೆರೆದಿದ್ದಾರೆ.
ಸೂರತ್ ಗುಜರಾತ್ನ ಆರ್ಥಿಕ ರಾಜಧಾನಿಯಾಗಿದೆ ಆದರೆ ತನ್ನದೇ ಆದ ಹೆಲಿಕಾಪ್ಟರ್ ಹೊಂದಿಲ್ಲ. ಹೀಗಾಗಿ, ನಾನು ಈ ಉಡುಗೊರೆಯನ್ನು ಸೂರತ್ನ ಜನರಿಗೆ ಮತ್ತು ಸಾಮಾಜಿಕ ಉದ್ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ ಎಂದು ಧೋಲಾಕಿಯಾ ಹೇಳಿದ್ದಾರೆ.
ಶಾಲೆ ಬಿಟ್ಟ ಧೋಲಾಕಿಯಾ ಅವರು 1977 ರಲ್ಲಿ ಸೂರತ್ಗೆ ರಾಜ್ಯ ಸಾರಿಗೆ ಬಸ್ನಲ್ಲಿ ಟಿಕೆಟ್ ದರವಾಗಿ ಕೇವಲ 12.5 ರೂಪಾಯಿಯೊಂದಿಗೆ ಬಂದು ತಮ್ಮ ಚಿಕ್ಕಪ್ಪನ ವಜ್ರದ ವ್ಯಾಪಾರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. 1992 ರಲ್ಲಿ, ಅವರು ತಮ್ಮ ಕಂಪನಿಯ ಅಡಿಪಾಯವನ್ನು ಹಾಕಿ ಈಗ ವಜ್ರ ಉದ್ಯಮ ಮತ್ತು ಸೂರತ್ ನಗರದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಸೌರಾಷ್ಟ್ರದ ಬಂಜರು ಸರ್ಕಾರಿ ಭೂಮಿಯಲ್ಲಿ ಧೋಲಾಕಿಯಾ ಇದುವರೆಗೆ ಸುಮಾರು 75 ಕೊಳಗಳನ್ನು ನಿರ್ಮಿಸಿದ್ದಾರೆ.
ಕಂಪನಿಯಲ್ಲಿ 25 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಧೋಲಾಕಿಯಾ ಅವರು ಮೂರು ಸಿಬ್ಬಂದಿಗೆ ಮರ್ಸಿಡಿಸ್ -ಬೆಂಜ್ ಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂಬುದನ್ನು ಸ್ಮರಿಸಬಹುದು. ಪ್ರತಿ ವರ್ಷ ಹಬ್ಬದ ಸಂದರ್ಭಗಳಲ್ಲಿ ಅವರು ತಮ್ಮ ಉದ್ಯೋಗಿಗಳಿಗೆ ಅದ್ದೂರಿ ಉಡುಗೊರೆಗಳನ್ನು ನೀಡುತ್ತಾರೆ, ಇದರಲ್ಲಿ ಲಾಯಲ್ಟಿ ಬೋನಸ್ ಕಾರ್ಯಕ್ರಮದ ಭಾಗವಾಗಿ ಕಾರುಗಳು, ಫ್ಲಾಟ್ಗಳು, ಆಭರಣ ಸೆಟ್ಗಳು ಇತ್ಯಾದಿಗಳು ಸೇರಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
MUST WATCH
ಹೊಸ ಸೇರ್ಪಡೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ