ಪರಂಪರೆಗೆ ಡಿಜಿಟಲ್‌ ಸ್ಪರ್ಶ! ಸಾಕ್ಷಾತ್‌ ಅನುಭವಕ್ಕಾಗಿ ನಂದಿಬೆಟ್ಟದಲ್ಲಿ ತಲೆಯೆತ್ತಲಿದೆ ಮೆಟಾವರ್ಸ್‌

ಕೆಂಪೇಗೌಡ ಪ್ರತಿಮೆ, ಹಂಪಿಯ ಡಿಜಿಟಲ್‌ ಮರು ಸೃಷ್ಟಿಗೆ ಮಾತುಕತೆ

Team Udayavani, Nov 28, 2022, 7:23 AM IST

ಪರಂಪರೆಗೆ ಡಿಜಿಟಲ್‌ ಸ್ಪರ್ಶ! ಸಾಕ್ಷಾತ್‌ ಅನುಭವಕ್ಕಾಗಿ ನಂದಿಬೆಟ್ಟದಲ್ಲಿ ತಲೆಯೆತ್ತಲಿದೆ ಮೆಟಾವರ್ಸ್‌

ಬೆಂಗಳೂರು: ಕೃಷ್ಣದೇವ ರಾಯರ ಕಾಲದಲ್ಲಿ ಹಂಪಿಯ ವೈಭವ ಹೇಗಿತ್ತು? ಶತಮಾನಗಳ ಹಿಂದೆ ಆಂಧ್ರಪ್ರದೇಶದ ಐತಿಹಾಸಿಕ ಲೇಪಾಕ್ಷಿ ದೇವಾಲಯ ಹೇಗೆ ಕಾಣುತ್ತಿತ್ತು? 450 ವರ್ಷಗಳ ಹಿಂದಿನ ಗೋವಾದ ಅತಿದೊಡ್ಡ ಮಂಗೇಶಿ ದೇವಸ್ಥಾನದ ವೈಶಿಷ್ಟ್ಯ ಏನು?

– ಡಿಜಿಟಲ್‌ ತಂತ್ರಜ್ಞಾನ ಸ್ಪರ್ಶದಿಂದ ಇಂತಹ ಹತ್ತು ಹಲವು ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಮರುಸೃಷ್ಟಿಗೆ ತಂಡವೊಂದು ಮುಂದಾಗಿದೆ. ಶೀಘ್ರದಲ್ಲೇ ನಗರದ ಹೊರವಲಯದಲ್ಲಿರುವ ನಂದಿಬೆಟ್ಟದಲ್ಲಿ ಈ ತಾಣಗಳ ಯಥಾವತ್‌ ಅನುಭವ (ವರ್ಚುವಲ್‌ ರಿಯಾಲಿಟಿ) ನೀಡುವ ಮೆಟಾವರ್ಸ್‌ ಕೂಡ ತಲೆಯೆತ್ತಲಿದೆ.
ಹೌದು, ಸಾಫ್ಟ್ವೇರ್‌ ಎಂಜಿನಿಯರ್‌ಗಳು, ಇತಿಹಾಸ ತಜ್ಞರು, ದೇವಾಲಯಗಳ ವಾಸ್ತುಶಿಲ್ಪಿಗಳು ಒಂದೇ ವೇದಿಕೆಯಲ್ಲಿ ಬಂದು “ಹು ವಿಆರ್‌’ ಎಂಬ ಕಂಪೆನಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಗತಕಾಲದ ದೇವಾಲಯಗಳು, ಪಾರಂಪರಿಕ ತಾಣಗಳನ್ನು ಡಿಜಿಟಲ್‌ ತಂತ್ರಜ್ಞಾನದಿಂದ ಯಥಾವತ್ತಾಗಿ ಮರುಸೃಷ್ಟಿಸಿ ಈಗಿನ ಪೀಳಿಗೆಗೆ ಪರಿಚಯಿಸುತ್ತಿದ್ದಾರೆ. ಇಂಥ ಪ್ರಯತ್ನ ದೇಶದಲ್ಲಿ ಇದೇ ಮೊದಲುಎನ್ನಲಾಗಿದೆ. ದೇಶದಲ್ಲಿ ಸಾವಿರಾರು ದೇವಾಲಯಗಳು, ಪಾರಂಪರಿಕ ತಾಣಗಳಿವೆ.

ಅವೆಲ್ಲವುಗಳಿಗೆ ಒಂದೊಂದು ಇತಿಹಾಸ ಇದೆ. ಅವುಗಳಲ್ಲಿ ಬಹುತೇಕ ಹಾಳಾಗಿವೆ. ಉದಾಹರಣೆಗೆ ಹಂಪಿ ಕಣ್ಮುಂದೆಯೇ ಇದೆ. ಕೃಷ್ಣದೇವ ರಾಯನ ಕಾಲದಲ್ಲಿ ಹೇಗಿತ್ತು ಎಂಬುದನ್ನು ಕೇಳಿದ್ದೇವೆಯೇ ವಿನಾ ಕಣ್ಣಲ್ಲಿ ಕಂಡಿಲ್ಲ. ಈಗಿರುವ ಸ್ಥಿತಿ ಯಲ್ಲೇ ಆ ತಾಣಗಳ ಅಧ್ಯಯನ ನಡೆಸಿ, ಆ್ಯನಿಮೇಷನ್‌ ಸೇರಿದಂತೆ ಡಿಜಿಟಲೀಕರಣದಿಂದ ಅದನ್ನು ಮತ್ತೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದು “ಹು ವಿಆರ್‌ ಸಂಸ್ಥಾಪಕ ಅಜಿತ್‌ ಪದ್ಮನಾಭ್‌ ತಿಳಿಸುತ್ತಾರೆ.

“ಸುಮಾರು 9 ಜನರಿರುವ ಕಂಪೆನಿ ಇದಾಗಿದ್ದು, ಇತಿಹಾಸ ತಜ್ಞರು, ದೇವಾಲಯಗಳ ವಾಸ್ತುಶಿಲ್ಪಿಗಳು, ನರವಿಜ್ಞಾನಿಗಳು, ಟೆಕಿಗಳು, ಚಿತ್ರ ನಿರ್ಮಾಪಕರು, ಸಂಗೀತಗಾರರು ಇದ್ದಾರೆ. ಅವರು ಗತಕಾಲದ ಈ ದೇವಾಲಯಗಳು ಅಥವಾ ತಾಣಗಳ ಅಧ್ಯಯನ ನಡೆಸಿ ವಿನ್ಯಾಸ ಸಿದ್ಧಪಡಿಸುತ್ತಾರೆ. ಅನಂತರ ತಂತ್ರಜ್ಞಾನದ ಸಹಾಯದಿಂದ ಅದನ್ನು ಮರುಸೃಷ್ಟಿ ಮಾಡಿ ಈಗಿನ ಪೀಳಿಗೆಗೆ ಪರಿಚಯಿಸಲಾಗುವುದು. ಈಗಾಗಲೇ ಹಂಪಿ, ಗೋವಾದ ಮಂಗೇಶಿ ದೇವಸ್ಥಾನ, ಲೇಪಾಕ್ಷಿ ಸೇರಿ ದಂತೆ ಆರು ತಾಣಗಳನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಅನಂತರ ವರ್ಚುವಲ್‌ ರಿಯಾಲಿಟಿ ಮೂಲಕ ಅದರ ಅನುಭವ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.
ಈಚೆಗೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಅನಾವರಣಗೊಂಡ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ, ಆಂಧ್ರಪ್ರದೇಶದ 175 ದೇವಾಲಯಗಳು, ಹಂಪಿಯ ಮರುಸೃಷ್ಟಿ ಯೋಜನೆಗಳಿಗೆ ಸಂಬಂ ಧಿಸಿ ಸರಕಾರಗಳೊಂದಿಗೆ ಮಾತುಕತೆ ನಡೆದಿದೆ.

ಇದಲ್ಲದೆ ಅಯೋಧ್ಯೆ ರಾಮ ಮಂದಿರ ವಸ್ತುಸಂಗ್ರಹಾಲಯ, ಏಕತಾ ಪ್ರತಿಮೆ, ಮೈಸೂರು ಪರಂಪರೆ ಬಗ್ಗೆಯೂ ಚರ್ಚೆ ನಡೆದಿದೆ. ಈ ಮಧ್ಯೆ ಮುಂದಿನ ಐದಾರು ತಿಂಗಳುಗಳಲ್ಲಿ ನಂದಿಬೆಟ್ಟದಲ್ಲಿ ಪಾರಂಪರಿಕ ತಾಣಗಳ ಅನುಭವ ಕೇಂದ್ರವನ್ನು ತೆರೆಯಲಾಗುತ್ತಿದೆ. ಅಲ್ಲಿಗೆ ಬರುವ ಜನ ಪ್ರಕೃತಿ ಸೌಂದರ್ಯದ ಜತೆಗೆ ಪರಂಪರೆಯ ಸವಿಯನ್ನೂ ಸವಿಯಬಹುದು. ಹೀಗೆ ಬರುವವರಿಗೆ 3ಡಿ ತಂತ್ರಜ್ಞಾನದಿಂದ ತಯಾರಿಸಿದ ಆಯಾ ತಾಣಗಳ ಪ್ರತಿ ಮೆಯೂ ಮಾರಾಟಕ್ಕೆ ಲಭ್ಯ ಎಂದೂ ಅಜಿತ್‌ ಪದ್ಮನಾಭ್‌ ಹೇಳಿದ್ದಾರೆ.

ಪ್ರವಾಸೋದ್ಯಮಕ್ಕೂ ಪೂರಕ
ಇಂಗ್ಲೆಂಡ್‌, ಅಮೆರಿಕ ಸರಕಾರ ಗಳೊಂದಿಗೂ ಮಾತುಕತೆ ನಡೆದಿದೆ. ಇಲ್ಲಿನ ತಾಣಗಳನ್ನು ಡಿಜಿಟಲ್‌ ರೂಪದಲ್ಲಿ ತಯಾರಿಸಿ ಆ ದೇಶಗಳಿಗೆ ಕಳುಹಿಸಲಾಗುವುದು. ಅಲ್ಲಿನ ಪ್ರತಿನಿಧಿಗಳು ಸ್ಥಳೀಯವಾಗಿ ಪ್ರಚುರಪಡಿಸುತ್ತಾರೆ. ಆಗ ಅಲ್ಲಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಹೀಗೆ ಇದು ಪ್ರವಾ ಸೋದ್ಯಮ ಬೆಳವಣಿಗೆಗೂ ಪೂರಕ ವಾಗಲಿದೆ ಎಂದು ಹೇಳಿದರು.

“ಬಹುತೇಕ ಹಿರಿಯ ನಾಗರಿಕರಿಗೆ ಈ ತಾಣಗಳಿಗೆ ತೆರಳಲು ಆಗುವು ದಿಲ್ಲ. ಅಂತಹವರು ತಾವಿದ್ದಲ್ಲಿಯೇ ಅದರ ಅನುಭವವನ್ನು ಪಡೆಯ ಬಹುದು. ನಿಗದಿತ ಶುಲ್ಕ ವಿಧಿಸ ಲಾಗುವುದು’ ಎಂದು ಅಜಿತ್‌ ಪದ್ಮನಾಭ್‌ ತಿಳಿಸಿದ್ದಾರೆ.

 - ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.