HDK ಮಾಡಿದ 5 ಕೋಟಿ ಡೀಲ್ ಆರೋಪದಿಂದ ನೊಂದು ದೂರು ವಾಪಸ್ ಪಡೆದಿದ್ದೇನೆ: ದಿನೇಶ್ ಕಲ್ಲಹಳ್ಳಿ
ಕುಮಾರಸ್ವಾಮಿ ಮಾಡಿದ 5 ಕೋಟಿ ಡೀಲ್ ಆರೋಪದಿಂದ ನೊಂದಿದ್ದೇನೆ
Team Udayavani, Mar 7, 2021, 3:19 PM IST
ಬೆಂಗಳೂರು : ಕುಮಾರಸ್ವಾಮಿ ಮಾಡಿದ 5 ಕೋಟಿ ಡೀಲ್ ಆರೋಪದಿಂದ ನಾನು ನೊಂದಿದ್ದು ದೂರನ್ನು ವಾಪಸ್ ಪಡೆದಿದ್ದೇನೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಹೇಳಿಕೆ ನೀಡಿದ್ದಾರೆ.
ನನ್ನ ಮೇಲೆ ಕುಮಾರಸ್ವಾಮಿ 5 ಕೋಟಿಯ ಆರೋಪವನ್ನು ಹೊರಿಸಿದ್ದಾರೆ. ನಾನು ಇದರಿಂದ ಹೊರಗೆ ಬರಬೇಕು. ಅಲ್ಲದೆ ಈ ಐದು ಕೋಟಿ ಡೀಲ್ ಬಗ್ಗೆ ತನಿಖೆಯಾಗಬೇಕು ಎಂದು ಕಲ್ಲಹಳ್ಳಿ ಹೇಳಿಕೆ ನೀಡಿದ್ದಾರೆ.
ರಮೇಶ್ ಸಚಿವ ಸ್ಥಾನ ಹೋಗಬೇಕೆಂದು ನಾನು ಹೀಗೆ ಮಾಡಿಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದು ನಾನು ಹೀಗೆ ಮಾಡಿದೆ. ಯುವತಿಯನ್ನು ಸಮಾಜ ಸಂಶಯದಿಂದ ನೋಡುವಂತಾಗಿದೆ ಎಂದು ದಿನೇಶ್ ಹೇಳಿಕೆ ನೀಡಿದ್ದಾರೆ.