ದೋಣಿಮಲೆ ಗಣಿಗಾರಿಕೆ ಶುರು ಮಾಡಲು ರಾಯಧನ ಹಂಚಿಕೆ ಅಡ್ಡಿ?
Team Udayavani, Dec 27, 2020, 9:51 PM IST
ನವದೆಹಲಿ: ಕರ್ನಾಟಕದ ಬಳ್ಳಾರಿಯಲ್ಲಿರುವ ದೋಣಿಮಲೆ ಗಣಿಯಲ್ಲಿ ಎರಡು ವರ್ಷಗಳ ಬಳಿಕ ಕಬ್ಬಿಣದ ಗಣಿಗಾರಿಕೆ ಶೀಘ್ರವೇ ಶುರುವಾಗಲಿದೆ.
2018ರಲ್ಲಿ ರಾಜ್ಯ ಸರ್ಕಾರದ ಜತೆಗೆ ಉಂಟಾಗಿದ್ದ ಕಾನೂನು ಹೋರಾಟ ಶುರುವಾಗಿದ್ದರಿಂದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಎನ್ಡಿಎಂಸಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಮಧ್ಯಂತರ ಒಪ್ಪಂದ ಏರ್ಪಟ್ಟಿದ್ದರೂ, ಗಣಿ ರಾಯಧನ ಹಂಚಿಕೆ ವಿಚಾರದಲ್ಲಿ ಒಮ್ಮತ ಉಂಟಾಗಿಲ್ಲವೆಂದು ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮಧ್ಯಂತರ ಒಪ್ಪಂದದ ಪ್ರಕಾರ ಎನ್ಡಿಎಂಸಿ ಅದಿರು ಮಾರಾಟವಾದ ಬಳಿಕ ಶೇ.37.5ರಷ್ಟು ಮೊತ್ತವನ್ನು ರಾಯಧನವಾಗಿ ನೀಡಬೇಕು. ಅದರಲ್ಲಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರಕ್ಕೆ ನೀಡುವ ಶೇ.15ರಷ್ಟು ಮೊತ್ತವೂ ಸೇರಿಕೊಂಡಿದೆ. 2022ರ ನವೆಂಬರ್ನಲ್ಲಿ ರಾಯಧನ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ನೀಡುವ ವರೆಗೆ ಮಧ್ಯಂತರ ಒಪ್ಪಂದ ಅನುಷ್ಠಾನದಲ್ಲಿರುತ್ತದೆ.
ಇದನ್ನೂ ಓದಿ:ಶ್ರೀನಗರ: ಪೂಂಛ್ ನಲ್ಲಿ ದೇಗುಲ ಸ್ಫೋಟ ಸಂಚು ಬಯಲು; ಮೂವರ ಬಂಧನ
ಮೂಲಗಳ ಪ್ರಕಾರ ಎನ್ಡಿಎಂಸಿ ರಾಯಧನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ತೊಡಗಿದೆ. 2018ರಲ್ಲಿ ರಾಜ್ಯ ಸರ್ಕಾರ ಗಣಿ ಲೀಸ್ ಅನ್ನು 20 ವರ್ಷಗಳಿಗೆ ವಿಸ್ತರಣೆ ಮಾಡಿದ್ದರೂ, ಸರಾಸರಿ ಮಾರಾಟವಾಗುವ ಅದರಿನ ಲಾಭದ ಶೇ.80ರಷ್ಟು ಮೊತ್ತವನ್ನು ನೀಡಬೇಕೆಂದು ಕೇಳಿತ್ತು. ಹೀಗಾಗಿ, ಎನ್ಡಿಎಂಸಿ ಗಣಿಗಾರಿಕೆ ಸ್ಥಗಿತಗೊಳಿಸಿತ್ತು. ಇದೇ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದಾಗ ಸರ್ಕಾರದ ವಾದ ತಿರಸ್ಕೃತಗೊಂಡಿತ್ತು ಮತ್ತು ಲೀಸ್ ವಿಸ್ತರಣೆ ರದ್ದು ಮಾಡಿತ್ತು ರಾಜ್ಯ ಸರ್ಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
MUST WATCH
ಹೊಸ ಸೇರ್ಪಡೆ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ
O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ