ಗೂಗಲ್‌ ಹುಡುಕಾಟ ಅಪಾಯ ತಂದೊಡ್ಡದಿರಲಿ


Team Udayavani, Mar 13, 2021, 6:25 AM IST

ಗೂಗಲ್‌ ಹುಡುಕಾಟ ಅಪಾಯ ತಂದೊಡ್ಡದಿರಲಿ

ನಕಲಿ ಯುಆರ್‌ಎಲ್‌, ವೆಬ್‌ಸೈಟ್‌, ಆ್ಯಪ್‌ಗ್ಳತ್ತ ಇರಲಿ ಸದಾ ಎಚ್ಚರ
ಮಾಹಿತಿಗಳ ಅಗತ್ಯವಿದ್ದಾಗ ನಾವು ನೇರವಾಗಿ ಗೂಗಲ್‌ ಮೊರೆ ಹೋಗುತ್ತೇವೆ. ಅದು ವಿಳಾಸಗಳಾಗಿರಲಿ ಅಥವಾ ವೆಬ್‌ಸೈಟ್‌, ಅರ್ಜಿಗಳು, ಚಲನಚಿತ್ರಗಳು ಸಹಿತ ಯಾವುದೇ ಮಾಹಿತಿ ಬೇಕಾದರೂ ಗೂಗಲ್‌ನ ಸರ್ಚ್‌ ಬಟನ್‌ ಪ್ರಸ್‌ ಮಾಡಿ ಆಯ್ತು. ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಹೀಗಾಗಿ ಗೂಗಲ್‌ ನಮ್ಮ ಅತ್ಯುತ್ತಮ ಸ್ನೇಹಿತ. ಆದರೆ ಗೂಗಲ್‌ನ ಹುಡುಕಾಟ ಕೆಲವೊಮ್ಮೆ ಅಪಾಯವನ್ನು ತಂದಿಡುವ ಸಾಧ್ಯತೆ ಇದೆ. ಅಲ್ಲಿ ಪಡೆಯಲಾಗುವ ಮಾಹಿತಿಯನ್ನು ನಾವು ಸಮರ್ಪಕವಾಗಿ ಪರಿಶೀಲಿಸದೆ ಇರುವುದು ಇದಕ್ಕೆ ಕಾರಣ. ಗೂಗಲ್‌ ಹುಡುಕಾಟದ ವೇಳೆ ನೀವು ನಕಲಿ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್‌ ಮಾಡುವ ಅಪಾಯ ಇದೆ. ಇದು ನಿಮ್ಮ ಹಾದಿಯನ್ನು ತಪ್ಪಿಸುವ ಸಾಧ್ಯತೆ ಇದೆ. ಗೂಗಲ್‌ನಲ್ಲಿ ಲಭ್ಯವಿರುವ ಎಲ್ಲ ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಕಷ್ಟ. ಏಕೆಂದರೆ ಗೂಗಲ್‌ ಹುಡುಕಾಟವು ಕೇವಲ ಆನ್‌ಲೈನ್‌ ಪ್ಲಾಟ್‌ಫಾರ್ಮ್ ಆಗಿದ್ದು, ನಿಮಗೆ ಅಗತ್ಯವಿರುವ ಮಾಹಿತಿಯನ್ನು ನೀಡುವ ವೆಬ್‌ಸೈಟ್‌ಗಳನ್ನು ನೀವು ಕಂಡುಕೊಳ್ಳುತ್ತೀರಿ. ವಿಷಯಕ್ಕಿಂತ ಹೆಚ್ಚಾಗಿ ಗೂಗಲ್‌ ಹುಡುಕಾಟದಲ್ಲಿ ನೀವು ಯಾವ ಫ‌ಲಿತಾಂಶ(ಸರ್ಚ್‌ ರಿಸಲ್ಟ್)ಗಳನ್ನು ಪಡೆಯುತ್ತೀರಿ ಎಂಬುದರ ಹಿಂದೆ ಇವು ದೊಡ್ಡ ಪಾತ್ರವನ್ನು ವಹಿಸುತ್ತವೆ. ಹೀಗಾಗಿ ಗೂಗಲ್‌ನಲ್ಲಿ ಹುಡುಕುವ ನೀವು ಈ ಎಂಟು ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದಿರಬೇಕಾಗಿದೆ.

ತೂಕ ಇಳಿಸುವ ಮಾಹಿತಿಗಳನ್ನು ಕುರುಡಾಗಿ ನಂಬಬೇಡಿ
ಪ್ರತಿಯೊಂದು ಮಾನವ ದೇಹವು ವಿಶಿಷ್ಟವಾಗಿದೆ ಮತ್ತು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ತೂಕ ನಷ್ಟ ಅಥವಾ ಪೌಷ್ಟಿಕಾಂಶದ ಕುರಿತಂತೆ ಗೂಗಲ್‌ ಹುಡುಕಾಟದ ವೇಳೆ ಸಿಕ್ಕಿದ ಮಾಹಿತಿ ಅಥವಾ ಸಲಹೆಗಳನ್ನು ಪಾಲಿಸಬೇಡಿ. ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಲು ನೀವು ಬಯಸಿದರೆ ಆಹಾರ ತಜ್ಞರನ್ನು ಭೇಟಿ ಮಾಡಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ವೈದ್ಯರಿಂದ ಸಲಹೆ ತೆಗೆದುಕೊಂಡು ಅನಂತರ ಮುಂದುವರಿಯಿರಿ.

ವೈಯಕ್ತಿಕ ಹಣಕಾಸು (ಪರ್ಸನಲ್‌ ಫೈನಾನ್ಸ್‌), ಸ್ಟಾಕ್‌ ಮಾರುಕಟ್ಟೆ ಮಾಹಿತಿಗಳು
ಆರೋಗ್ಯದಂತೆ ವೈಯಕ್ತಿಕ ಹಣಕಾಸು ಕೂಡ ಬಹಳ ಮುಖ್ಯವಾಗಿದೆ. ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡುವ ಒಂದು ಹೂಡಿಕೆ ಯೋಜನೆ ಎಂದಿಗೂ ಇರಲಾರದು ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಹೂಡಿಕೆ ಮಾಡುವಂಥ ಸಂದರ್ಭ ಬಂದಾಗ ಅಥವಾ ಯೋಚಿಸುತ್ತಿದ್ದರೆ ಗೂಗಲ್‌ ಮೊರೆ ಹೋಗುವುದರ ಬದಲು ಮಾರುಕಟ್ಟೆ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದೇ ಉತ್ತಮ.

ಕಸ್ಟಮರ್ ಕೇರ್‌ ಸಂಪರ್ಕ ಸಂಖ್ಯೆಗಳು
ಸದ್ಯ ಅತೀ ಹೆಚ್ಚು ದುರ್ಬಳಕೆಯಾಗುತ್ತಿರುವ ಕ್ಷೇತ್ರ ಇದು. ವಂಚಕರು ಸಂಸ್ಥೆಗಳ ಹೆಸರನ್ನು ನಕಲಿಯಾಗಿ ರಚಿಸಿ ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಪೋಸ್ಟ್‌ ಮಾಡಿರುತ್ತಾರೆ. ಗೂಗಲ್‌ನಲ್ಲಿ ಹುಡುಕುವ ಧಾವಂತದಲ್ಲಿ ಜನರು ಅವುಗಳನ್ನು ಮೂಲ ಗ್ರಾಹಕ ಸಂಖ್ಯೆಗಳೆಂದೇ ನಂಬುತ್ತಾರೆ. ಹೆಚ್ಚಿನ ತಾಣಗಳು ನಕಲಿ ಸಂಪರ್ಕ ಸಂಖ್ಯೆಯನ್ನೇ ಹೊಂದಿದ್ದು, ನೀವು ಕರೆ ಮಾಡುವ ಯಾವುದೇ ಸಂಪರ್ಕ ಸಂಖ್ಯೆಯನ್ನು ಸಹ ಹೊಂದಿರುವುದಿಲ್ಲ. ಇಂಥ ಸಂದರ್ಭ ಮೈಮರೆಯಬಾರದು.

ಯುಆರ್‌ಎಲ್‌ಗ‌ಳನ್ನು ಎರಡೆರಡು ಬಾರಿ ಪರಿಶೀಲಿಸಿ
ಇದು ಪ್ರತೀ ನಿತ್ಯ ಪಾಲಿಸಲೇಬೇಕಾದ ನಿಯಮವಾಗಿದೆ. ನೀವು ಗೂಗಲ್‌ನಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳನ್ನು ಬಳಸುವುದಾದರೆ ಯುನಿಫಾರ್ಮ್ ರಿಸೋರ್ಸ್‌ ಲೊಕೇಟರ್‌(URL) ಅನ್ನು ಎರಡೆರಡು ಬಾರಿ ಪರಿಶೀಲಿಸಬೇಕು. ನಿಖರವಾದ ಅಧಿಕೃತ ಯುಆರ್‌ಎಲ್‌ ವಿಳಾಸ ನಿಮಗೆ ತಿಳಿದಿಲ್ಲದಿದ್ದರೆ ಬ್ಯಾಂಕ್‌ನ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ ಅನ್ನು ಹುಡುಕದೇ ಇರುವುದು ಹೆಚ್ಚು ಸೂಕ್ತ. ನಿಮ್ಮ ಲಾಗಿನ್‌ ವಿವರಗಳನ್ನು ಪಡೆಯಲು ಸ್ಕ್ಯಾಮರ್‌ಗಳು ನಕಲಿ ಆನ್‌ಲೈನ್‌ ಬ್ಯಾಂಕಿಂಗ್‌ ವೆಬ್‌ಸೈಟ್‌ಗಳನ್ನು ರಚಿಸಿಕೊಳ್ಳುತ್ತವೆ ಎಂಬುದು ಗಮನದಲ್ಲಿರಬೇಕು. ಹೀಗಾಗಿ ಈ ಅಪಾಯದಿಂದ ಪಾರಾಗಲು ಬ್ಯಾಂಕ್‌ನ ಆನ್‌ಲೈನ್‌ ಬ್ಯಾಂಕಿಂಗ್‌ ಪೋರ್ಟಲ್‌ನ ಅಧಿಕೃತ ಖೀRಔ ಅನ್ನೇ ತಿಳಿದು ನಮೂದಿಸಿ.

ಆ್ಯಪ್ಸ್‌, ಸಾಫ್ಟ್ವೇರ್‌ಗಳನ್ನು ಡೌನ್‌ಲೋಡ್‌ ಮಾಡುವಾಗ ಎಚ್ಚರ
ಗೂಗಲ್‌ನಲ್ಲಿ ಆ್ಯಪ್ಲಿಕೇಶನ್‌ಗಳು, ಸಾಫ್ಟ್ವೇರ್‌ ಅಥವಾ ಇತರ ಫೈಲ್‌ಗ‌ಳನ್ನು ಹುಡುಕುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಆ್ಯಂಡ್ರಾಯ್ಡಗಾಗಿ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಐಫೋನ್‌ಗಳಿಗಾಗಿ ಆ್ಯಪ್‌ ಸ್ಟೋರ್‌ನಂತಹ ಅಧಿಕೃತ ಆ್ಯಪ್ಲಿಕೇಶನ್‌ ಸ್ಟೋರ್‌ಗಳಲ್ಲಿ ಮಾತ್ರ ಆ್ಯಪ್ಸ್‌ ಅನ್ನು ಹುಡುಕಿ. ಯಾಕೆಂದರೆ ಗೂಗಲ್‌ನಲ್ಲಿ ನಕಲಿ ಆ್ಯಪ್‌ಗ್ಳು ಮತ್ತು ಸಾಫ್ಟ್ವೇರ್‌ಗಳನ್ನು ಸ್ಕ್ಯಾಮರ್ಸ್‌ ಅಪ್‌ಲೋಡ್‌ ಮಾಡಿರುತ್ತಾರೆ. ಇವುಗಳ ಮೂಲಕ ನಿಮ್ಮ ಗೌಪ್ಯ ಮಾಹಿತಿಗಳನ್ನು ಕದಿಯುತ್ತಾರೆ.

ಔಷಧಗಳನ್ನು ಹುಡುಕುವ ಬದಲು ವೈದ್ಯರನ್ನು ಸಂಪರ್ಕಿಸಿ
ಅನಾರೋಗ್ಯದಿಂದ ಬಳಲುತ್ತಿದ್ದರೆ ವೈದ್ಯರ ಬಳಿಗೆ ಹೋಗಿ. ಅನಾರೋಗ್ಯವಾಗಿದ್ದರೆ ಅದನ್ನು ಹೇಳಲು ಗೂಗಲ್‌ ಸರಿಯಾದ ಸ್ಥಳವಲ್ಲ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ರೋಗದ ಬಗ್ಗೆ ತಿಳಿಯಲು ಗೂಗಲ್‌ನಲ್ಲಿ ಹುಡುಕಾಡುವುದರ ಬದಲು ನೇರವಾಗಿ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಅಲ್ಲದೆ ಗೂಗಲ್‌ನಲ್ಲಿ ಹೇಳಲಾದ ಔಷಧಗಳನ್ನು ಖರೀದಿಸುವುದು ಅಪಾಯಕಾರಿ. ಆರೋಗ್ಯದಂಥ ವಿಚಾರದಲ್ಲಿ ಎಚ್ಚರ ವಹಿಸಿದಷ್ಟೂ ಕಡಿಮೆಯೇ.

ಸರಕಾರಿ ವೆಬ್‌ಸೈಟ್‌ಗಳನ್ನು ಯಾವಾಗಲೂ ಪರಿಶೀಲಿಸಿ
ಬ್ಯಾಂಕಿಂಗ್‌ ವೆಬ್‌ಸೈಟ್‌ಗಳಂತೆ, ಸರಕಾರಿ ವೆಬ್‌ಸೈಟ್‌ಗಳಾದ ಪಾಲಿಕೆಗಳ ತೆರಿಗೆ, ಬಿಲ್‌ಗ‌ಳು ಸಹಿತ ಇತ್ಯಾದಿಗಳು
ಹ್ಯಾಕರ್ಸ್‌ಗಳ ಪ್ರಮುಖ “ಟಾರ್ಗೆಟೆಡ್‌ ಏರಿಯಾ’ಗಳಾ ಗಿವೆ. ಕೆಲವು ಸಂದರ್ಭ ಯಾವ ವೆಬ್‌ಸೈಟ್‌ ಅಸಲಿ ಎಂದು ಗುರುತಿಸುವುದೇ ಕಷ್ಟವಾದ್ದರಿಂದ ಯಾವುದೇ ನಿರ್ದಿಷ್ಟ ಸರಕಾರಿ ವೆಬ್‌ಸೈಟ್‌ ಅನ್ನು ಗೂಗಲ್‌ನಲ್ಲಿ ಹುಡುಕುವ ಬದಲು ಯುಆರ್‌ಎಲ್‌ ವಿಳಾಸ ತಿಳಿದುಕೊಂಡು ನೇರವಾಗಿ ಭೇಟಿ ನೀಡಲು ಮುಂದಾಗಿ.

ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಕೂಪನ್‌ ಮತ್ತು ಆಫ‌ರ್‌ಗಳು
ಇ-ಕಾಮರ್ಸ್‌ ವೆಬ್‌ಸೈಟ್‌ಗಳ ಕೊಡುಗೆಗಳೆಂದು ಕರೆಯಲ್ಪಡುವ ನಕಲಿ ವೆಬ್‌ ಪುಟಗಳು ಗೂಗಲ್‌ನಲ್ಲಿ ರಾಶಿ ಬಿದ್ದುಕೊಂಡಿವೆ. ಇದು ಜನರನ್ನು ಮೋಸದ ಜಾಲಕ್ಕೆ ಸೆಳೆಯುವ ಮತ್ತೂಂದು ದೊಡ್ಡ ಹಗರಣವಾಗಿದೆ. ಇದು ಜನರ ಆನ್‌ಲೈನ್‌ ಬ್ಯಾಂಕಿಂಗ್‌ ಲಾಗಿನ್‌ ವಿವರಗಳನ್ನು ಕದಿಯಲು ಯತ್ನಿಸುತ್ತವೆ. ಹಬ್ಬಗಳಂಥ ವಿಶೇಷ ಸಂದರ್ಭದಲ್ಲಿ ಇಂಥ ಆಫ‌ರ್‌ಗಳ ಹೆಸರಿನ ಕೆಲವು ತಾತ್ಕಾಲಿಕವಾದ ಜಾಲತಾಣಗಳು ತಲೆ ಎತ್ತುವುದನ್ನು ನೋಡಿದ್ದೀರಿ. ಇಂಥವುಗಳಿಗೆ ಮರುಳಾಗಬೇಡಿ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.