ಮಣಿಪಾಲ ಪ್ರೆಸ್ಗೆ ಭಾಗವತ್ ಭೇಟಿ, ಮೆಚ್ಚುಗೆ
Team Udayavani, Mar 3, 2021, 6:05 AM IST
ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ|ಮೋಹನ್ ಭಾಗವತ್ಜಿ ಅವರು ಮಂಗಳವಾರ ಮಣಿಪಾಲ್ ಟೆಕ್ನಾಲಜೀಸ್ ಲಿ. (ಎಂಟಿಎಲ್)ನ ಯುನಿಟ್ 5ಕ್ಕೆ ಭೇಟಿ ನೀಡಿ ಯುನಿಟ್ನ ವಿವಿಧ ವಿಭಾಗಗಳನ್ನು ವೀಕ್ಷಿಸಿ ಮುದ್ರಣ ಕ್ಷೇತ್ರದಲ್ಲಿರುವ ಅತ್ಯಾಧುನಿಕತೆಗೆ ಮೆಚ್ಚುಗೆ ಸೂಚಿಸಿದರು.
ಎಂಟಿಎಲ್ ಕಾರ್ಯ ನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈಯವರು ಭಾಗವತ್ ಅವರನ್ನು ಪರಿಚಯಿಸಿ, ಮಣಿಪಾಲ ಸಮೂಹವು 80 ವರ್ಷಗಳಿಂದ ಮಣಿಪಾಲದ ಮುದ್ರಣಾಲಯ, 50 ವರ್ಷಗಳಿಂದ ಉದಯವಾಣಿ ಸಮೂಹವನ್ನು ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಎಂಟಿಎಲ್ ಆಡಳಿತ ನಿರ್ದೇಶಕ, ಸಿಇಒ ಅಭಯ್ ಗುಪೆ¤ ಅವರು ಸ್ವಾಗತಿಸಿ ಕಂಪೆನಿಯು ಸರಕಾರಗಳ ವಿವಿಧ ಕಾರ್ಯಯೋಜನೆಗಳಿಗೆ ನೀಡು ತ್ತಿರುವ ಸಹಯೋಗದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಯನ್ನು ವಿವರಿಸಿದರು. ಎಂಎಂಎನ್ಎಲ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ, ಆಡಳಿತ ನಿರ್ದೇಶಕ, ಸಿಇಒ ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಎಲ್.ಕೆ. ಆಡ್ವಾಣಿಯವರು ಕರ್ನಾಟಕಕ್ಕೆ ಬಂದಾಗ ತಾವು ಬೆಂಗಳೂರಿನಲ್ಲಿ ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದ ಸಂದರ್ಭ
ವನ್ನು ನೆನಪಿಸಿಕೊಳ್ಳುತ್ತಿದ್ದರು. “ಉದಯವಾಣಿ’ ಶಿರೋನಾಮೆ ಯನ್ನು ಓದಲು ಬರುತ್ತದೆ. ಇನ್ನಷ್ಟು ದಿನ ಬೆಂಗಳೂರಿನ ಜೈಲಿನಲ್ಲಿದ್ದಿದ್ದರೆ ಕನ್ನಡವನ್ನು ಓದಲು ಬರುತ್ತಿತ್ತು ಎಂದು ಹೇಳುತ್ತಿದ್ದರು. ಮಂಗಳೂರಿನ ಜ್ಞಾನಭಾರತೀ ಟ್ರಸ್ಟ್ಗೂ “ಉದಯವಾಣಿ’ಗೂ ಉತ್ತಮ ಸಂಬಂಧವಿದೆ’ ಎಂದು ಆರೆಸ್ಸೆಸ್ ಸಹಸರಕಾರ್ಯವಾಹ ಮುಕುಂದ್ ಸಿ.ಆರ್. ಹೇಳಿದರು.
ಎಂಇಐಎಲ್ನ ಎಂಡಿ ಮತ್ತು ಸಿಇಒ ಸಾಗರ್ ಮುಖೋಪಾಧ್ಯಾಯ, ಆರೆಸ್ಸೆಸ್ನ ಕರ್ನಾಟಕ ದಕ್ಷಿಣದ ಸಹಪ್ರಾಂತ ಕಾರ್ಯವಾಹ ಪ್ರಕಾಶ್, ದಿಲ್ಲಿ ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕ ಶೇಷಾದ್ರಿ ಚಾರಿ, ಹಿರಿಯರಾದ ಮಾಧವ ನಲಪತ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ