ಪ್ರವಾಹದ ನೀರಿನಲ್ಲಿ ಬರೋಬ್ಬರಿ 16ಗಂಟೆ ಸಿಲುಕಿಕೊಂಡ ವ್ಯಕ್ತಿಯನ್ನು ರಕ್ಷಿಸಿದ ವಾಯುಪಡೆ
Team Udayavani, Aug 17, 2020, 3:03 PM IST
ಛತ್ತೀಸ್ ಗಡ : ಅಣೆಕಟ್ಟಿನಿಂದ ಹೊರ ಬಿಟ್ಟ ನೀರಿಗೆ ಜಿಗಿದ ವ್ಯಕ್ತಿಯೊಬ್ಬ ನೀರಿನಿಂದ ದಡಕ್ಕೆ ಬರಲಾಗದೆ ಬರೋಬ್ಬರಿ 16 ಗಂಟೆ ನೀರಿನಲ್ಲಿ ಮರದ ಕೊಂಬೆಯ ರಕ್ಷಣೆ ಪಡೆದು ಬಳಿಕ ವಾಯುಪಡೆಯ ಸಹಾಯದೊಂದಿಗೆ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಛತ್ತೀಸ್ ಗಡದ ಬಿಲಾಸ್ಪುರ ದಲ್ಲಿ ರವಿವಾರ ನಡೆದಿದೆ.
ಛತ್ತೀಸ್ ಗಡ್ ನ ಬಿಲಾಸ್ ಪುರ ಜಿಲ್ಲೆಯಲ್ಲಿ ರವಿವಾರ ಭಾರಿ ಮಳೆಯಾಗುತ್ತಿದ್ದು ಪರಿಣಾಮ ಜಿಲ್ಲೆಯ ಪ್ರವಾಸಿ ತಾಣವಾದ ಖುತಘಾಟ್ ಅಣೆಕಟ್ಟಿನಲ್ಲಿ ನೀರಿನ ಹರಿವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತಿದ್ದಾರೆ ಆದರೆ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ಅಣೆಕಟ್ಟಿನಿಂದ ಹೆಚ್ಚಿನ ನೀರನ್ನು ಹೊರಗೆ ಬಿಡಲಾಗಿದೆ ಈ ಸಂದರ್ಭ ಸ್ಥಳದಲ್ಲಿ ನೆರೆದಿದ್ದ ಪ್ರವಾಸಿಗರಲ್ಲಿ ಓರ್ವ ನೀರಿಗೆ ಜಿಗಿದಿದ್ದಾನೆ ಆದರೆ ಆತನಿಗೆ ಈಜಿ ದಡ ಸೇರಲು ಸಾಧ್ಯವಾಗದೆ ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಮರದ ಕೊಂಬೆಯನ್ನು ಹಿಡಿದ ವ್ಯಕ್ತಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ.
ನೀರಿನ ಪ್ರವಾಹ ಹೆಚ್ಚಿದ್ದ ಪರಿಣಾಮ ರಕ್ಷಣೆ ಮಾಡುವುದು ಕಷ್ಟದ ಕೆಲಸವಾಗಿತ್ತು ಸ್ಥಳಕ್ಕೆ ಬಿಲಾಸ್ಪುರ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣೆಗಾಗಿ ತೆರಳಿದ್ದರು ಸಂಜೆಯಾದ ಪರಿಣಾಮ ಮಳೆಯ ಅಬ್ಬರ ಜೋರಾಗಿತ್ತು ಹಾಗಾಗಿ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಕೂಡಲೇ ಪೊಲೀಸ್ ಅಧಿಕಾರಿಗಳು ವ್ಯಕ್ತಿಯ ರಕ್ಷಣೆಗಾಗಿ ಭಾರತೀಯ ವಾಯುಸೇನೆಯ ನೆರವನ್ನು ಕೇಳಿಕೊಂಡಿದ್ದಾರೆ ಆದರೆ ಪ್ರತಿಕೂಲ ಹವಾಮಾನ ಇರದ ಪರಿಣಾಮ ಸೋಮವಾರ ಮುಂಜಾನೆ ರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲಾಯಿತು ಸೋಮವಾರ ಬೆಳಿಗ್ಗೆ ವಾಯುಪಡೆಯ ಅಧಿಕಾರಿಗಳು ಮರದ ಸಹಾಯದಿಂದ ವ್ಯಕ್ತಿಯನ್ನು ಹೆಲಿಕಾಪ್ಟಾರ್ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ.
His name is Jitendra Kashyap, from Gudhauri village this is how he jumped from the bridge @ndtvindia @ndtv pic.twitter.com/imkKSCkbKS
— Anurag Dwary (@Anurag_Dwary) August 17, 2020
ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಗಾಢವಾರಿ ಹಳ್ಳಿಯ ಜಿತೇಂದ್ರ ಕಶ್ಯಪ್ ಎಂದು ಜಿಲಾಸ್ಪುರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಭಸದಿಂದ ಹರಿಯುವ ಪ್ರವಾಹದ ನೀರಿನಲ್ಲಿ ಈಜಿ ದಡ ಸೇರಬಹುದು ಎಂಬ ನಂಬಿಕೆಯಿಂದ ನೀರಿಗೆ ಜಿಗಿದ ವ್ಯಕ್ತಿಗೆ ಆಮೇಲೆ ತಾನು ಮಾಡಿದ ತಪ್ಪಿನ ಅರಿವಾಗಿದೆ ಪರಿಣಾಮ ಪ್ರವಾಹದ ನೀರಿನಲ್ಲೇ ಬರೋಬ್ಬರಿ 16 ಗಂಟೆ ಕಳೆಯುವಂತಾಯಿತು.
Incredible rescue operation by Indian Airforce at Khutaghat dam, Bilaspur.
Probably first such rescue ops by IAF in non-naxal area in Chhattisgarh.@IAF_MCC@CG_Police@ipskabra pic.twitter.com/cpthhKwWFN
— BilaspurPolice (@PoliceBilaspur) August 17, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ