ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು
Team Udayavani, Oct 20, 2021, 7:19 PM IST
ದಾಂಡೇಲಿ : ನಗರದ ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ನೀರು ಚಿಮ್ಮಿರುವುದರ ಜೊತೆಗೆ ಸ್ಥಳೀಯರಿಗೆ ಕುಡಿಯುವ ನೀರು ಪೊರೈಕೆಯಾಗದೆ ತೊಂದರೆಯಾಗಿರುವ ಘಟನೆ ನಡೆದಿದೆ.
ನಗರದ ಸುಭಾಸನಗರದಲ್ಲಿ ಕಳೆದ ಹದಿನೈದು ದಿನಗಳ ಹಿಂದೆ ಕಿರು ಸೇತುವೆ ನಿರ್ಮಾಣಕ್ಕಾಗಿ ಕಾಮಗಾರಿಯನ್ನು ಆರಂಭಿಸಲಾಗಿದೆ. ಇಲ್ಲಿ ಕಿರು ಸೇತುವೆ ನಿರ್ಮಾಣಕ್ಕಾಗಿ ಗಟಾರವನ್ನು ಒಡೆದು ಹದಿನೈದು ದಿನ ಕಳೆದರೂ, ಮುಂದಿನ ಕಾಮಗಾರಿಯನ್ನು ಆರಂಭಿಸಿಲ್ಲ. ಇಲ್ಲಿ ಕಿರು ಸೇತುವೆಗಾಗಿ ಮಣ್ಣು ಅಗೆದ ಕಡೆ ಕುಡಿಯುವ ನೀರಿನ ಪೈಪ್ ಇದ್ದು, ಅದು ನಿನ್ನೆ ಸಂಜೆ ಒಡೆದು ಹೋಗಿದೆ. ಪರಿಣಾಮವಾಗಿ ಇಂದು ಬೆಳ್ಳಂಬೆಳಗ್ಗೆ ನೀರು ಕಾರಂಜಿಯಂತೆ ಚಿಮ್ಮಿದ್ದು, ಚಿಮ್ಮಿದ ರಭಸಕ್ಕೆ ಅಲ್ಲೆ ಹತ್ತಿರದಲ್ಲಿರುವ ಪ್ರೇಮ್ ವುಡ್ ಡೆಕೊರ್ಸಿನ ಮೇಲ್ಚಾವಣಿಯವರೆಗೆ ನೀರು ಹಾದಿದೆ. ಇಂದು ಬೆಳಿಗ್ಗೆ ಸರಿ ಸಮಾರು ಒಂದು ಗಂಟೆಯವರೆಗೆ ನೀರು ಕಾರಂಜಿಯಂತೆ ರಭಸವಾಗಿ ಚಿಮ್ಮಿರುವುದನ್ನು ಗಮನಿಸಿದ ಸ್ಥಳೀಯರಾದ ಪ್ರೇಮಾನಂದ ಗವಸ ಅವರು ತಕ್ಷಣವೆ ನಗರ ಸಭೆಗೆ ಮಾಹಿತಿ ನೀಡಿದ ಬಳಿಕ ನೀರು ಪೊರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಆನಂತರ ನೀರು ಚಿಮ್ಮುವುದು ನಿಂತಿದೆ.
ನಗರದಲ್ಲಿ ಹಳದಿ ಕಾಮಾಲೆ, ಡೆಂಗೂ ಮೊದಲಾದ ಸಾಂಕ್ರಮಿಕ ರೋಗಗಳು ಜನರನ್ನು ಇನ್ನಿಲ್ಲದೆ ಕಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಡೆದ ಪೈಪನ್ನು ತಕ್ಷಣದಲ್ಲಿ ದುರಸ್ತಿ ಮಾಡದಿದ್ದಲ್ಲಿ ಕುಡಿಯುವ ನೀರಿನ ಜೊತೆ ತ್ಯಾಜ್ಯ ನೀರು ಮಿಶ್ರಣಗೊಂಡಲ್ಲಿ ಇದೇ ನೀರನ್ನು ಕುಡಿಯುವುದು ಇಲ್ಲವೆ ಬಳಕೆ ಮಾಡಿಕೊಂಡಲ್ಲಿ ಹಳದಿ ಕಾಮಾಲೆ ರೋಗಗಳು ಇನ್ನಿಲ್ಲದಂತೆ ಹರಡಬಹುದಾದ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಒಂದು ಸಣ್ಣ ಎಡವಟ್ಟಿನಿಂದ ಇಡೀ ಊರಿಗೆ ಊರೆ ಸಾಂಕ್ರಾಮಿಕ ಕಾಯಿಲೆಗಳಿಗೆ ಬಿದ್ದು ಒದ್ದಾಡುವ ಮುನ್ನ ಇಂತಹ ಕಾಮಗಾರಿಗಳನ್ನು ನಡೆಸುವ ಮುನ್ನ ಕೆಲವೊಂದು ಆರೋಗ್ಯ ಮುನ್ನೆಚ್ಚರಿಕೆ ವಹಿಸಿ ಕಾಮಗಾರಿ ಆರಂಭಿಸಲು ನಗರ ಸಭೆ ಸೂಕ್ತ ರೀತಿಯ ಕ್ರಮವನ್ನು ಕೈಗೊಳ್ಳಬೇಕು. ಇನ್ನೂ ಅಗೆದು ಹದಿನೈದು ದಿನ ಕಳೆದು ಈವರೇಗೆ ಕಾಮಗಾರಿ ಆರಂಭಿಸಲ್ಲದಿರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಅಗೆದಿರುವ ಸ್ಥಳದಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಹಾಕದಿರುವುದರಿಂದ ರಾತ್ರಿ ವೇಳೆಯಲ್ಲಿ ಅನಾಹುತಗಳು ನಡೆದರೇ ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಸ್ಥಳೀಯರದ್ದಾಗಿದೆ.
ಇದನ್ನೂ ಓದಿ: ಮುಂದಿನ ಶರಣ ಸಂಸ್ಕೃತಿ ಉತ್ಸವದ ಗೌರವ ಅಧ್ಯಕ್ಷರಾಗಿ ವನಶ್ರೀ ಮಠದ ಸ್ವಾಮೀಜಿ ಆಯ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ