ಪಾಕಿಸ್ಥಾನದಲ್ಲಿ ಹಿಂದೂ ವೈದ್ಯನ ಕತ್ತು ಸೀಳಿ ಹತ್ಯೆಗೈದ ಚಾಲಕನ ಬಂಧನ
Team Udayavani, Mar 9, 2023, 2:10 PM IST
ಇಸ್ಲಾಮಾಬಾದ್: ಪಾಕಿಸ್ಥಾನದ ಹೈದರಾಬಾದ್ನಲ್ಲಿ ವೈದ್ಯರಾಗಿದ್ದ ಧರಮ್ ದೇವ್ ರಾಠಿ ಅವರನ್ನು ಮಂಗಳವಾರ ಅವರ ಮನೆಯೊಳಗೆ ಅವರ ಚಾಲಕ ಚಾಕುವಿನಿಂದ ವೈದ್ಯರ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು ಸುದ್ದಿವಾಹಿನಿ ದಿ ನೇಷನ್ಗೆ ತಿಳಿಸಿದ್ದಾರೆ.
ಆರೋಪಿ ಚಾಲಕನನ್ನು ಬುಧವಾರ ಖೈರ್ಪುರದ ಆತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹನೀಫ್ ಲೆಘರಿ ಎಂದು ಗುರುತಿಸಲಾಗಿದೆ.
ಮನೆಗೆ ಹೋಗುವಾಗ ಇಬ್ಬರ ನಡುವೆ ಜಗಳವಾಗಿದೆ ಎಂದು ವೈದ್ಯರ ಅಡುಗೆಯ ಕೆಲಸದ ಆಳು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲಿಗೆ ತಲುಪಿದ ಚಾಲಕ ಅಡುಗೆ ಮನೆಯೊಳಗಿಂದ ಚಾಕು ತೆಗೆದುಕೊಂಡು ಮನೆಯಲ್ಲೇ ವೈದ್ಯನನ್ನು ಕೊಂದಿದ್ದಾನೆ. ನಂತರ ಚಾಲಕ ಸ್ಥಳದಿಂದ ವೈದ್ಯರ ಕಾರಿನಲ್ಲೇ ಪರಾರಿಯಾಗಿದ್ದಾನೆ.
ಡಾ.ಧರಮ್ ದೇವ್ ರಾಠಿ ಅವರು ಹೈದರಾಬಾದ್ ಪ್ರದೇಶದಲ್ಲಿ ಪ್ರಸಿದ್ಧ ಚರ್ಮರೋಗ ವೈದ್ಯರಾಗಿದ್ದರು ಎಂದು ದಿ ನೇಷನ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು