ದೆಹಲಿ ಸಚಿವರನ್ನು ಬಂಧಿಸಲು ಇಡಿ ಸಿದ್ಧತೆ : ಕೇಜ್ರಿವಾಲ್ ಆಕ್ರೋಶ
Team Udayavani, Jan 23, 2022, 2:48 PM IST
ನವದೆಹಲಿ : ಪಂಜಾಬ್ ಚುನಾವಣೆಗೂ ಮುನ್ನ ದೆಹಲಿ ಆರೋಗ್ಯ ಮತ್ತು ಗೃಹ ಸಚಿವ ಸತ್ಯೇಂದ್ರ ಜೈನ ಅವರನ್ನು ಬಂಧಿಸಲು ಇಡಿ ಮುಂದಾಗಿದೆ ಎಂದು ಭಾನುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಮುಂಬರುವ ಕೆಲವೇ ದಿನಗಳಲ್ಲಿ ಬಂಧಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಮತ್ತು ಕಾರ್ಯಕರ್ತರು ಈ ಸಂಸ್ಥೆಗಳಿಗೆ ಹೆದರುವುದಿಲ್ಲ ಏಕೆಂದರೆ ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.
” ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಿದೆ ಎಂದು ನಮಗೆ ತಿಳಿದಿದೆ. ಅತ್ಯಂತ ಸ್ವಾಗತಾರ್ಹ. ಈ ಹಿಂದೆಯೂ ಕೇಂದ್ರವು ಸತ್ಯೇಂದ್ರ ಜೈನ್ ಮೇಲೆ ದಾಳಿ ನಡೆಸಿತ್ತು ಆದರೆ ಏನೂ ಸಿಕ್ಕಿಲ್ಲ ಎಂದರು.
ಬಿಜೆಪಿಗೆ ಸೋಲುತ್ತೇವೆ ಎಂದು ಎಂದು ಅರಿವಾದಾಗಲೆಲ್ಲ ಕೇಂದ್ರೀಯ ಸಂಸ್ಥೆಗಳನ್ನು ತನ್ನ ವಿರೋಧಿಗಳ ಮೇಲೆ ಬಳಸುತ್ತದೆ ಎಂದು ಆರೋಪಿಸಿದರು.
“ಚುನಾವಣೆ ಇರುವುದರಿಂದ ದಾಳಿ ಮತ್ತು ಬಂಧನಗಳನ್ನು ಮಾಡಲಾಗುತ್ತದೆ. ನಾವು ಯಾವುದೇ ತಪ್ಪು ಮಾಡದ ಕಾರಣ ಇಂತಹ ದಾಳಿಗಳು ಮತ್ತು ಬಂಧನಗಳಿಗೆ ನಾವು ಹೆದರುವುದಿಲ್ಲ ಎಂದರು.
ಈ ಹಿಂದೆ ಡೆಪ್ಯೂಟಿ ಸಿಎಂ ಮನೀಶ್ ಸಿಸೋಡಿಯಾ, ಜೈನ್ ಅವರ ನಿವಾಸ ಮತ್ತು ಎಎಪಿಯ 21 ಶಾಸಕರನ್ನು ಬಂಧಿಸಲಾಗಿತ್ತು ಆದರೆ ಅವರಿಗೆ ಏನೂ ಸಿಕ್ಕಿಲ್ಲ ಎಂದರು.
ಫೆಬ್ರವರಿ 20 ರಂದು ಪಂಜಾಬ್ ಚುನಾವಣೆ ನಡೆಯಲಿದೆ.