ಜೋಯಿಡಾ: ಆನೆ ದಾಳಿ-ಬೆಳೆ ನಾಶ
Team Udayavani, Dec 5, 2021, 9:47 AM IST
ಜೋಯಿಡಾ: ಕಾಡಿನಂಚಿನಲ್ಲಿರುವ ರೈತರ ಬದುಕು ಮೊದಲೇ ಅಕಾಲಿಕ ಮಳೆಯಿಂದ ಮೂರಾ ಬಟ್ಟೆಯಾಗಿದೆ. ಇದರ ನಡುವೆ ಇದೀಗ ಕಾಡಾನೆಗಳ ದಾಳಿ ರೈತರ ನಿದ್ದೆಗೆಡಿಸಲು ಆರಂಭಿಸಿದೆ.
ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆವುರ್ಲಿ ಗ್ರಾಮದ ರೈತ ಸೋಮಣ್ಣ ವೇಳಿಫ್ ಎಂಬವರ ಭತ್ತದ ಗದ್ದೆಗೆ ಕಾಡಾನೆಯೊಂದು ದಾಳಿ ಮಾಡಿ ಭತ್ತದ ಬೆಳೆಯನ್ನು ನಾಶಪಡಿಸಿದ ಘಟನೆ ನಡೆದಿದೆ.
ಒಂದು ಕಡೆ ಅಕಾಲಿಕ ಮಳೆಯ ಆತಂಕ, ಇನ್ನೊಂದೆಡೆ ಕಾಡು ಪ್ರಾಣಿಗಳ ಅರ್ಭಟ ಇವುಗಳ ನಡುವೆ ಈ ಭಾಗದ ರೈತರ ಬದುಕು ಅಯೋಮಯ ಸ್ಥಿತಿಯಂತಾಗಿದೆ.