ತೈಲ ದರ ಇಳಿಸಲಿ : ಸಾರ್ವಜನಿಕ ವಲಯದಿಂದ ಆಗ್ರಹ
Team Udayavani, Feb 14, 2021, 6:40 AM IST
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಶನಿವಾರ ಪೆಟ್ರೋಲ್ ದರ 91.40 ರೂ.ಗಳಿಗೆ ಮತ್ತು ಡೀಸೆಲ್ ದರ 83.47 ರೂ.ಗಳಿಗೆ ಏರಿದೆ.
ಇದೇ ಹಾದಿಯಲ್ಲಿ ಮುಂದುವರಿದರೆ ಸದ್ಯದಲ್ಲೇ ಪೆಟ್ರೋಲ್ ದರ 100 ರೂ. ಮುಟ್ಟುವ ಆತಂಕವೂ ಎದುರಾಗಿದೆ. ತೈಲ ದರ ಇಳಿಸುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಜನರಿಂದ ಕೇಳಿಬರುತ್ತಿದೆ. ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ರಾಜ್ಯದ ಪಾಲಿನ ತೆರಿಗೆ ಇಳಿಕೆ ಮಾಡಿದ್ದು, ಇದರಿಂದಾಗಿ ತೈಲ ದರ ಇಳಿದಿದೆ. ರಾಜ್ಯದಲ್ಲಿಯೂ ಬಜೆಟ್ ವೇಳೆ ತೈಲದ ಮೇಲಿನ ತೆರಿಗೆ ಇಳಿಸಲಿ ಎಂಬ ಒತ್ತಾಯ ಹೆಚ್ಚಾಗಿದೆ.
ಪೆಟ್ರೋಲ್, ಡೀಸೆಲ್ಗಳನ್ನು ಜಿಎಸ್ಟಿ ವ್ಯಾಪ್ತಿಗೆ ಏಕೆ ತರಬಾರದು ಎಂಬ ಪ್ರಶ್ನೆಯೂ ಎದ್ದಿದೆ. ಇದಾದರೆ ದರ ಇಳಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದರ ಏರಿಕೆ ಬಗ್ಗೆ ಹೊಟೇಲ್, ಲಾರಿ ಮಾಲಕರ ಸಂಘದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೈಲ ದರವನ್ನು ತಹಬಂದಿಗೆ ತರುವ ಪ್ರಯತ್ನ ನಡೆಯುತ್ತಿದೆ. ಬಜೆಟ್ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
-ವಿ. ಸೋಮಣ್ಣ, ವಸತಿ ಸಚಿವ
ತೈಲ ದರ ಹೆಚ್ಚಿದರೆ ಹೊರೆ
ಗ್ರಾಹ ಕರ ಮೇಲೆ ಬೀಳುತ್ತದೆ. ಕೇಂದ್ರ ಸರಕಾರ ಡಿಸೇಲ್, ಪೆಟ್ರೋಲ್ ಮೇಲೆ ವಿಧಿಸುವ ಸೆಸ್ ಅನ್ನು ಐಷಾರಾಮಿ ವಸ್ತುಗಳ ಮೇಲೆ ವಿಧಿಸಲಿ.
-ಚಂದ್ರಶೇಖರ ಹೆಬ್ಟಾರ್, ಅಧ್ಯಕ್ಷರು, ಬೃಹತ್ ಬೆಂಗಳೂರು ಹೊಟೇಲ್ ಸಂಘ
ಕೇಂದ್ರ-ರಾಜ್ಯದ ತೆರಿಗೆ
(ಬೆಂಗಳೂರಿನಲ್ಲಿ ಫೆ. 13ರ ದರ ವಿವರ)
ತೆರಿಗೆ ಪ್ರಮಾಣ (ರೂ.ಗಳಲ್ಲಿ)
ಅಂಶ | ಪೆಟ್ರೋಲ್ | ಡೀಸೆಲ್ |
ಮೂಲ ದರ | 32.09 | 33.48 |
ಅಬಕಾರಿ ಸುಂಕ | 1.40 | 1.80 |
ಹೆಚ್ಚುವರಿ ಸುಂಕ | 0.11 | 0.08 |
ರಸ್ತೆ ಸೆಸ್ | 0.18 | 18 |
ಕೃಷಿ ಸೆಸ್ | 2.50 | 0.04 |
ರಾಜ್ಯ ತೆರಿಗೆ | 22.75 | 15.67 |
ಡೀಲರ್ ಕಮಿಷನ್ | 3.66 | 2.52 |
ಒಟ್ಟು | 91.40 | 83.47 |
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
Tesla; ಭಾರತದಲ್ಲಿ ಎಲಾನ್ ಮಸ್ಕ್ 25,000 ಕೋಟಿ ಹೂಡಿಕೆ?
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ