ಟಿ20 ಸರಣಿ: ವೈಟ್ವಾಶ್ ತಪ್ಪಿಸಲಿ ಭಾರತದ ವನಿತೆಯರು
Team Udayavani, Mar 23, 2021, 6:40 AM IST
ಲಕ್ನೋ: ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿಳಿದ ಭಾರತದ ವನಿತೆಯರಿಗೆ ಪ್ರವಾಸಿ ದಕ್ಷಿಣ ಆಫ್ರಿಕಾ ಭಾರೀ ಸವಾಲಾಗಿ ಪರಿಣಮಿಸಿದೆ. ಏಕದಿನ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡ ದಕ್ಷಿಣ ಆಫ್ರಿಕಾ, ಇದೀಗ ಟಿ20 ಸರಣಿಯನ್ನೂ ತನ್ನದಾಗಿಸಿಕೊಂಡು 2-0 ಮುನ್ನಡೆ ಸಾಧಿಸಿದೆ.
ಮಂಗಳವಾರ ಅಂತಿಮ ಮುಖಾಮುಖೀ ಸಾಗಲಿದೆ. ವೈಟ್ವಾಶ್ ಅವಮಾನವನ್ನು ತಪ್ಪಿಸಿಕೊಳ್ಳಬೇಕಾದ ಭಾರೀ ಸವಾಲು ಭಾರತೀಯ ವನಿತೆಯರ ಮುಂದಿದೆ.
ಇನ್ನೊಂದು ವರ್ಷದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟಿಗೆ ಸಿದ್ಧವಾಗಬೇಕಿರುವ ಭಾರತಕ್ಕೆ ಈ ಸರಣಿಯಲ್ಲಿ ಯೋಜನೆಯಂತೆ ಸಾಗಲು ಸಾಧ್ಯ ವಾಗದಿರುವುದು ದೊಡ್ಡ ದುರಂತ. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ವನಿತೆಯರ ವೈಫಲ್ಯ ಎದ್ದು ಕಾಣುತ್ತದೆ. ತಂಡ ಎಷ್ಟೇ ದೊಡ್ಡ ಮೊತ್ತ ಪೇರಿಸಿದರೂ ಇದನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಜತೆಗೆ ಕಳಪೆ ಕ್ಷೇತ್ರರಕ್ಷಣೆ ಕೂಡ ಚಿಂತೆಯ ಸಂಗತಿಯಾಗಿದೆ.
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ವೃತ್ತಿಪರ ಪ್ರದರ್ಶನ ನೀಡುವ ಮೂಲಕ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸುತ್ತ ಭಾರತದ ಮೇಲೆ ಸವಾರಿ ಮಾಡುತ್ತ ಬಂದಿದೆ. ಕೊನೆಯ ಟಿ20 ಪಂದ್ಯದಲ್ಲಾದರೂ ಭಾರತದ ವನಿತೆಯರು ಅಸಾಮಾನ್ಯ ಪ್ರದರ್ಶನವೊಂದನ್ನು ನೀಡಿ ಗೆದ್ದು ಬರಲಿ ಎಂಬುದು ಅಭಿಮಾನಿಗಳ ಹಾರೈಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ