ರಿಜ್ವಿ ಶಿರಚ್ಛೇದಕ್ಕೆ ಇನಾಮು ಘೋಷಿಸಿದವನ ಮೇಲೆ ಎಫ್ಐಆರ್
ಕುರಾನ್ನಿಂದ 26 ಪದ್ಯ ಕೈಬಿಡಬೇಕು ಎಂದಿದ್ದ ರಿಜ್ವಿ
Team Udayavani, Mar 16, 2021, 11:30 PM IST
ಲಕ್ನೋ : ಇಸ್ಲಾಂ ಧರ್ಮಗ್ರಂಥ ಕುರಾನ್ನಿಂದ ವಿವಾದಿತ 26 ಪದ್ಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಉ.ಪ್ರ. ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಾಸೀಮ್ ರಿಜ್ವಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೇಳಿಕೆಗೆ ಕೆರಳಿರುವ ವಕೀಲ ಅಮಿರುಲ್ ಹಸನ್ ಝೈದಿ ಎಂಬಾತ, “ರಿಜ್ವಿಯ ಶಿರಚ್ಛೇದ ಮಾಡಿದವರಿಗೆ 11 ಲಕ್ಷ ರೂ. ಇನಾಮು’ ಘೋಷಿಸಿದ್ದಾರೆ. ವಕೀಲನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇನ್ನೊಂದೆಡೆ, ಶಿಯಾ ಮುಸ್ಲಿಂ ಯುವಕರು ಕೂಡ ರಿಜ್ವಿ ಹೇಳಿಕೆ ಖಂಡಿಸಿದ್ದು, “ಶಿಯಾ ಮುಸ್ಲಿಂ ಸ್ಮಶಾನದಲ್ಲಿ ಗೋರಿಯಾಗಲು ರಿಜ್ವಿಗೆ ಅರ್ಹತೆಯೇ ಇಲ್ಲ. ಕುರಾನ್ ವಿರುದ್ಧದ ಹೇಳಿಕೆ ಬಳಿಕ ರಿಜ್ವಿ ಮುಸ್ಲಿಮರನ್ನು ಅಗಲಿದ್ದಾರೆ’ ಎಂದು ಆರೋಪಿಸಿದ್ದಾರೆ. ದೆಹಲಿಯ ಜಾಮಾ ಮಸೀದಿ ರಿಜ್ವಿ ವಿರುದ್ಧ ಮಾ.19ರಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು
ಬಿಜೆಪಿಯೂ ಗರಂ!: “ಯಾವುದೇ ಧರ್ಮದ ಗ್ರಂಥಕ್ಕೆ ಅಪಮಾನ ಎಸಗುವ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಇದು ನಿಜಕ್ಕೂ ಖಂಡನೀಯ’ ಎಂದು ಬಿಜೆಪಿಯ ಹಿರಿಯ ಮುಸ್ಲಿಂ ಮುಖಂಡ ಸೈಯದ್ ಶಹನವಾಜ್ ಹುಸೇನ್ ಸ್ಪಷ್ಟಪಡಿಸಿದ್ದಾರೆ.
ರಿಜ್ವಿ ವಾದವೇನು?
“ಕುರಾನ್ನಲ್ಲಿನ 26 ಪದ್ಯಗಳು ಹಿಂಸಾತ್ಮಕ ಪ್ರಚೋದನೆ ಹೊಂದಿವೆ. ಇದು ಮೂಲ ಕುರಾನ್ನ ಭಾಗವೇ ಅಲ್ಲ. ಪ್ರವಾದಿ ಮೊಹಮ್ಮದ್ ಮರಣ ಬಳಿಕ ಇವನ್ನು ಸೇರಿಸಲಾಗಿದೆ’ ಎನ್ನುವುದು ರಿಜ್ವಿ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ
ಕೋರ್ಟ್ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ